ಬೆಂಗಳೂರು: ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಏಳು ದಿನಗಳು ಕಳೆದವು. ಇಂದಿಗೂ ಅವರಿಲ್ಲ ಎಂಬುದನ್ನು ನಂಬಲು ಆಗದಿದ್ದರೂ, ಅವರ ಸಾವು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಇಡೀ ಕುಟುಂಬ ದುಃಖದಲ್ಲಿ ಮುಳುಗಿದರೆ, ಚಿತ್ರರಂಗ ಪ್ರತಿಭಾವಂತ ಯುವನಟನನ್ನು ಕಳೆದುಕೊಂಡಿದೆ. ಕರುನಾಡು, ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: PHOTO GALLERY| ಬರ್ತಡೇ ಗರ್ಲ್, ಕಿಸ್ ಬೆಡಗಿ ಶ್ರೀಲೀಲಾ ಗ್ಲಾಮರಸ್ ಫೋಟೋ ಝಲಕ್!
ಹೀಗಿರುವಾಗಲೇ ಅಣ್ಣನನ್ನು ಕಳೆದುಕೊಂಡಿರುವ ಧ್ರುವ, ನೀನಿಲ್ಲದೆ ಇರಲು ಆಗುತ್ತಿಲ್ಲ. ಬೇಗ ಬಂದು ಬಿಡು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಳೇ ಫೋಟೋ ಶೇರ್ ಮಾಡಿಕೊಂಡು ಭಾವುಕರಾಗಿದ್ದರು. ಸ್ನೇಹಿತರು, ಆಪ್ತರು ಚಿರುನನ್ನು ನೆನಪು ಮಾಡಿಕೊಂಡು ಕಣ್ಣೀರಾಗಿದ್ದರು. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ, ಚಿರಂಜೀವಿ ಎಂದು ಬರೆದುಕೊಂಡು ಬ್ಲಾಕ್ ಬಣ್ಣದ ಹಾರ್ಟ್ ಎಮೋಜಿ ಹಾಕಿ ಹಳೇ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಇದೀಗ ಧ್ರುವ, ಅಣ್ಣನ ಜತೆಗೆ ಕಳೆದ ಮರೆಯಲಾಗದ ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ ಅಣ್ಣ, ನನ್ನ ಪ್ರಪಂಚ ಎಂದು ಬರೆದುಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ..
ಸ್ಲೈಡ್ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ ಮಾಡಿ…
ಚಿರು ಸಾವಿನ ಬೆನ್ನಲ್ಲೇ ಅರ್ಜುನ್ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?