ಮುಂಬೈ : ಲಂಚ ಪಡೆಯುತ್ತಾ ರೆಡ್ ಹಾಂಡೆಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಯೊಬ್ಬ ಎಸಿಬಿ ಅಧಿಕಾರಿಗಳಿಗೆ ಪಿಸ್ತೂಲ್ ತೋರಿಸಿ ಹಣ ಎತ್ತಿಕೊಂಡು ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ. ರಾಜ್ಯದ ರಾಯಗಡ ಜಿಲ್ಲೆಯ ಮಾನ್ಗಾವ್ ಠಾಣೆ ಸಬ್ಇನ್ಸ್ಪೆಕ್ಟರ್ ಗಣೇಶ್ ಕಂಡೇಕರ್ ಎಂಬುವರೇ ಹೀಗೆ ಓಡಿಹೋಗಿರುವ ಪೊಲೀಸ್!
ಠಾಣೆಯಲ್ಲಿ ದೂರು ಸ್ವೀಕರಿಸಲು 50 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಮೇರೆಗೆ ಆ್ಯಂಟಿ ಕರಪ್ಷನ್ ಬ್ಯೂರೋ(ಎಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ಜಾಲ ಬೀಸಿದಾಗ, ಎಸ್ಐ ಕಂಡೇಕರ್ ದೂರು ಸ್ವೀಕರಿಸಲು 25,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಸಾಕ್ಷಿ ಸಮೇತ ಹಿಡಿಯಲು ಮುಂದಾದರು.
ಇದನ್ನೂ ಓದಿ: ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್ಗೆ ಹಾಕಿ ರೆಕಾರ್ಡಿಂಗ್!
ಎಚ್ಚೆತ್ತುಕೊಂಡ ಕಂಡೇಕರ್, ಎಸಿಬಿಯ ಇನ್ಸ್ಪೆಕ್ಟರ್ ಮತ್ತು ಪೇದೆ ಅವರನ್ನು ಬಂಧಿಸಲು ಹೋದಾಗ ತಮ್ಮ ಸರ್ವೀಸ್ ಪಿಸ್ತೋಲನ್ನು ತೋರಿಸಿದ್ದಾರೆ. ನಂತರ ಪೇದೆಗೆ ಬೈಕ್ನಿಂದ ಗುದ್ದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎಸಿಬಿ ಪೇದೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಗಡ ಎಸಿಬಿಯು ಪ್ರಕರಣ ದಾಖಲಿಸಿದ್ದು, ಪರಾರಿಯಾಗಿರುವ ಎಸ್ಐ ಗಣೇಶ್ ಕಂಡೇಕರ್ ಅವರ ಪತ್ತೆ ಕಾರ್ಯ ಆರಂಭವಾಗಿದೆ. (ಏಜೆನ್ಸೀಸ್)
‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್ಡಿಕೆ ಸಲಹೆ
“ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ