More

    ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಗಡ್ಕರಿ..

    ಮುಂಬೈ: ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಅಸ್ವಸ್ಥರಾಗಿದ್ದಾರೆ. ವೇದಿಕೆಯಲ್ಲಿ ಮಾತನಾಡುವಾಗ ಪ್ರಜ್ಞೆ ತಪ್ಪಿದ್ದು, ಕೆಳಕ್ಕೆ ಬೀಳುತ್ತಿದ್ದ ಅವರನ್ನು ಭದ್ರತಾ ಸಿಬ್ಬಂದಿ ಹಾಗೂ ಮುಖಂಡರು ಹಿಡಿದುಕೊಂಡರು. ಬಳಿಕ ವೈದ್ಯರು ತುರ್ತು ಚಿಕಿತ್ಸೆ ನೀಡಿದರು.

    ಇದನ್ನೂ ಓದಿ: ‘ನನ್ನ ಹಿಂಭಾಗವನ್ನೇ ಯಾಕೆ ತೋರಿಸ್ತೀರಿ?’: ಖ್ಯಾತ ನಟಿ ಹೀಗೆನ್ನಲು ಕಾರಣವಿದೆ ನೋಡಿ..

    ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ನಾಗ್ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿತಿನ್ ಗಡ್ಕರಿ ಸ್ಪರ್ಧಿಸಿದ್ದರು. ಎರಡನೇ ಹಂತದಲ್ಲಿ ಯವತ್ಮಾಲ್ ಕ್ಷೇತ್ರದಿಂದ ಏಕನಾಥ್ ಶಿಂಧೆ ಅವರ ಶಿವಸೇನೆಯಿಂದ ಸ್ಪರ್ಧಿಸಿರುವ ರಾಜಶ್ರೀ ಪಾಟೀಲ್ ಪರವಾಗಿ ನಿತಿನ್ ಗಡ್ಕರಿ ಬುಧವಾರ ಪ್ರಚಾರ ನಡೆಸಿದರು.

    ಈ ವೇಳೆ ಗಡ್ಕರಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು. ಸನ್‌ಸ್ಟ್ರೋಕ್‌ನಿಂದ ಗಡ್ಕರಿ ಮೂರ್ಚೆಹೋದಂತಾಗಿ ಕುಸಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಮುಖಂಡರು ಅವರನ್ನು ಹಿಡಿದುಕೊಂಡರು. ಚಿಕಿತ್ಸೆ ನಂತರ ಗಡ್ಕರಿ ಚೇತರಿಸಿಕೊಂಡಿದ್ದಾರೆ.

    ಥಿಯೇಟರ್​ಗಳಿಗೆ ಅಪ್ಪಳಿಸಲಿದೆ ಝೆಂಡಯಾ ಅಭಿನಯದ ‘ಚಾಲೆಂಜರ್ಸ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts