ನವದೆಹಲಿ: ಕೊವಿಡ್-19 ಸೋಂಕಿಗೆ ಆಯುರ್ವೇದದಲ್ಲಿ ಪರಿಣಾಮಕಾರಿ ಮದ್ದು ಇದೆಯಾ? ಆಯುರ್ವೇದ ಔಷಧಿಯಿಂದ ಸೋಂಕು ನಿವಾರಣೆಯಾಗುತ್ತದೆಯಾ? ಎಂಬ ಪ್ರಶ್ನೆ ಕರೊನಾ ಪ್ರಾರಂಭದಿಂದಲೂ ಇದೆ. ಆಯುರ್ವೇದ ಚಿಕಿತ್ಸೆ ಮೂಲಕವೇ ಕರೊನಾ ಗುಣಪಡಿಸಿಕೊಂಡವರೂ ಇದ್ದಾರೆ.
ಈ ಮಧ್ಯೆ ಇನ್ನೊಂದು ಮಹತ್ವದ ಬೆಳವಣಿಗೆ ಆಗಿದೆ. ಕ್ಲಿನಿಕಲ್ ಟ್ರಯಲ್ವೊಂದರ ಮಧ್ಯಂತರ ವರದಿ ಹೊರಬಿದ್ದಿದ್ದು, ಅದರಲ್ಲಿ ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿರುವ ಕರೊನಾ ರೋಗಿಗಳು, ಆಲೋಪಥಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗಿಂತ ಬಹುಬೇಗನೇ ರೋಗಲಕ್ಷಣಗಳಿಂದ ಮುಕ್ತರಾಗುತ್ತಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಒಟ್ಟು ಮೂರು ಆಸ್ಪತ್ರೆಗಳಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ಗಳಲ್ಲೂ ಇದೇ ವರದಿ ಬಂದಿದೆ. ಇದನ್ನೂ ಓದಿ: ಪತಿಯೊಂದಿಗೆ ಚಾಮುಂಡಿ ದರ್ಶನ ಪಡೆದ ರೋಹಿಣಿ ಸಿಂಧೂರಿ: ಡಿಸಿ ಆಗಿ ಅಧಿಕಾರ ಸ್ವೀಕಾರ ಬೆನ್ನಲ್ಲೇ ಖಡಕ್ ಸಂದೇಶ!
ಕರೊನಾ ವೈರಸ್ ಚಿಕಿತ್ಸೆಗೆ ಸರ್ಕಾರ ಅನುಮೋದನೆ ನೀಡಿದ ಅಲೋಪಥಿ ಔಷಧಕ್ಕಿಂತಲೂ, ಆಯುರ್ವೇದಿಕ್ ಔಷಧಿಗಳಾದ ಕೊರಿವಲ್ ಲೈಫ್ ಸೈನ್ಸಸ್ನ ‘ ಇಮ್ಯೂನ್ಫ್ರೀ’ ಮತ್ತು ಬಯೋಜೆಟಿಕಾದ ‘ರೆಜಿನ್ಮ್ಯೂನ್ ‘ ನ್ಯೂಟ್ರಾ ಸುಟಿಕಲ್ ಮಿಶ್ರಣದ ಚಿಕಿತ್ಸೆ ಕರೊನಾ ವಿರುದ್ಧ ಮತ್ತಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದರ ಮೂಲಕ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಬೇಗನೇ ಗುಣಮುಖರಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಅಲೋಪಥಿಕ್ ಟ್ರೀಟ್ ಮೆಂಟ್ ಪಡೆದವರಿಗೆ ಹೋಲಿಸಿದರೆ ಆಯುರ್ವೇದಿಕ್ ಚಿಕಿತ್ಸೆ ಪಡೆದವರನ್ನು ಸಿ ರಿಯಾಕ್ಟಿವ್ ಪ್ರೋಟಿನ್, ಪ್ರೊಕಾಲ್ಸಿಟೋನಿನ್, ಡಿ ಡಿಮರ್ ಮತ್ತು ಆರ್ಟಿ-ಪಿಸಿಆರ್ ಟೆಸ್ಟ್ಗೆ ಒಳಪಡಿಸಿದಾಗ ಅದರ ರಿಪೋರ್ಟ್ನಲ್ಲಿ ಶೇ. 20-60ರಷ್ಟು ಸುಧಾರಣೆ ಕಂಡುಬರುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅರೆ ಇದೆಂಥ ಆಘಾತ! ಕರ್ನಾಟಕಕ್ಕೂ ಕಾಲಿಟ್ಟುಬಿಟ್ಟಿದೆ ಹೊಸ ಚೀನಿ ವೈರಸ್- ಇಬ್ಬರಲ್ಲಿ ಪತ್ತೆ!
ಆಯುರ್ವೇದಿಕ್ ಚಿಕಿತ್ಸೆ ಪಡೆದವರಲ್ಲಿ ಶೇ.85ರಷ್ಟು ಜನರಿಗೆ ಐದನೇ ದಿನಕ್ಕೆ ಕರೊನಾ ನೆಗೆಟಿವ್ ವರದಿ ಬಂದಿದೆ. ಹಾಗೇ ಸಾಂಪ್ರದಾಯಿಕ ಚಿಕಿತ್ಸೆ ಪಡೆದ ಶೇ.60ರಷ್ಟು ಜನರಲ್ಲಿ ಮಾತ್ರ ಈ ಫಲಿತಾಂಶ ಕಾಣಿಸಿದೆ. ಇನ್ನು ಆಯುರ್ವೇದ ಚಿಕಿತ್ಸೆಯಲ್ಲಿ 10ನೇ ದಿನಕ್ಕೆ ಎಲ್ಲ ರೋಗಿಗಳೂ ಕರೊನಾದಿಂದ ಮುಕ್ತರಾಗುತ್ತಿದ್ದಾರೆ ಎಂದು ಕ್ಲಿನಿಕಲ್ ಟೆಸ್ಟ್ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಮ್ಯೂನ್ಫ್ರೀ’ ಮತ್ತು ‘ರೆಜಿನ್ಮ್ಯೂನ್ ‘ಗಳನ್ನು ಆಂಧ್ರಪ್ರದೇಶದ ಶ್ರೀಕಾಕುಲಂ ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ಗುಜರಾತ್ನ ವಡೋದರಾದಲ್ಲಿರುವ ಪಾರುಲ್ ಸೇವಾಶ್ರಮ ಆಸ್ಪತ್ರೆ, ಮಹಾರಾಷ್ಟ್ರದ ಪುಣೆಯ ಲೋಕಮಾನ್ಯ ಆಸ್ಪತ್ರೆಗಳ ಔಷಧೀಯ ನಿಯಂತ್ರಿತ ಮಲ್ಟಿಸೆಂಟರ್ಗಳಲ್ಲಿ ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಗಿದೆ. ಸಿಟಿಆರ್ಐನಿಂದ ಅನುಮೋದನೆಯೂ ಸಿಕ್ಕಿದೆ. (ಏಜೆನ್ಸೀಸ್)