More

    ಸಂಗಾತಿಯನ್ನು ಉಳಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾದ ಹೋರಿ; ಮಾಡಿದ್ದಾದರೂ ಏನು?

    ಮಧುರೈ: ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಹಸು ಮಾರಾಟ ಮಾಡಿದ. ಅದನ್ನು ಮಾಲೀಕರ ವಾಹನಕ್ಕೂ ಹತ್ತಿಸಿದ. ಆದರೆ, ಅದರ ಜತೆಗಿರುತ್ತಿದ್ದ ಹೋರಿಯೊಂದು ತನ್ನ ಜತೆಗೆ, ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಇಲ್ಲಿನ ಪಾಲಮೆಂದು ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಮಣಿಕಂಠ ತಾನು ಸಾಕಿದ್ದ ಲಕ್ಷ್ಮೀ ಎಂಬ ಹಸುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ. ಅದನ್ನು ಕೊಂಡೊಯ್ಯುತ್ತಿದ್ದಾಗ ವಾಹನಕ್ಕೆ ಅಡ್ಡಬಂದ ದೇವರಿಗೆ ಬಿಟ್ಟಿದ್ದ ಹೋರಿ ಮಂಜಮಲೈ ಜಪ್ಪಯ್ಯ ಅಂದರೂ ಮುಂದಕ್ಕೆ ಹೋಗಲು ಬಿಡಲಿಲ್ಲ. ವಾಹನವನ್ನು ಚಲಾಯಿಸಿಕೊಂಡು ಹೋದರೂ, ಒಂದು ಕಿ.ಮೀ.ಗೂ ಹೆಚ್ಚು ದೂರದವರೆಗೂ ಬೆನ್ನತ್ತಿದೆ. ವಾಹನದ ಸುತ್ತಲೂ ತಿರುಗುತ್ತ ಹಸುವನ್ನು ಸಂತೈಸುತ್ತಿತ್ತು.

    ಇದನ್ನೂ ಓದಿ; ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ

    ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ಹಸುವಿನ ಮಾಲೀಕನಿಗೆ ಹಣ ನೀಡಲು ಮುಂದಾದರು. ಕೊನೆಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಓ. ಪನ್ನಿರಸೆಲ್ವಂ ಪುತ್ರ ಜಯಪ್ರದೀಪ್​ ಗಮನಕ್ಕೂ ಬಂದಿದೆ. ಹಸು ಖರೀದಿಸಿದ್ದವನಿಗೆ ಅದರ ಹಣ ನೀಡಿ, ಹೋರಿಗೆ ಜತೆಯಾಗಿಸಿ ದೇವಸ್ಥಾನಕ್ಕೆ ದಾನ ನೀಡಿದ್ದಾರೆ.

    ಹೋರಿ ಹೋರಾಟದ ವಿಡಿಯೋ ಇಲ್ಲಿದೆ….

    ಹಸು ಸಾಗಿಸುತ್ತಿದ್ದ ವಾಹನ ತಡೆದು ಜತೆಗಾತಿಯನ್ನು ಉಳಿಸಿಕೊಂಡ ಹೋರಿ..!

    ತಮಿಳುನಾಡಿನ ಮಧುರೈನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯಿದು. ಸದಾ ತನ್ನ ಜತೆಗಿರುತ್ತಿದ್ದ ಹಸುವನ್ನು ಉಳಿಸಿಕೊಳ್ಳಲು ಹೋರಿ ಪಟ್ಟ ಪಾಡಿದು. ಕೊನೆಗೆ ತನ್ನ ಯತ್ನದಲ್ಲಿ ಯಶಸ್ವಿಯೂ ಆಗಿದೆ. (ವಿಡಿಯೋ ಕೃಪೆ ಎಎನ್​ಐ)

    Posted by Vijayavani on Wednesday, July 15, 2020

    ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts