ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸಮಾನತೆ ಹೋಗಲಾಡಿಸಬೇಕೆಂದು ಹೇಳಿದ್ದರು. ಇದಕ್ಕೆ ಬಿಜೆಪಿಯಿಂದ ವಿರುದ್ದ ಇದೆ. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇದನ್ನು ಶೋಷಿತ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ RSSನ ರಾಜಕೀಯ ಅಂಗವಾಗಿದ್ದು, ಆರ್ಎಸ್ಎಸ್ ಮತ್ತು ಹಿಂದು ಮಹಾಸಭಾ ನಿಯಂತ್ರಣ ಮಾಡುತ್ತಿದೆ. ಆರ್ಎಸ್ಎಸ್ ಅವರ ಚಿಂತನಾ ಗಂಗಾ ಪುಸ್ತಕ, ಆರ್ಎಸ್ಎಸ್ ಮುಖವಾಣಿ ಪತ್ರಿಕೆಯಲ್ಲೂ ಅಂಬೇಡ್ಕರ್ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಸಂವಿಧಾನ ಸರಿಯಾಗಿ ರಚನೆ ಮಾಡಿಲ್ಲ, ಈ ದೇಶಕ್ಕೆ ಯೋಗ್ಯವಾದ ಸಂವಿಧಾನ ಅಲ್ಲ ಎನ್ನುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಪೂಂಚ್ನಲ್ಲಿ ಒಳನುಸುಳುವಿಕೆ ಯತ್ನ; ಓರ್ವ ಭಯೋತ್ಪಾದಕನ ಹತ್ಯೆ
ಬಿಜೆಪಿ ಮೀಸಲಾತಿಯನ್ನು ವಿರೋಧ ಮಾಡುತ್ತಾ ಬರುತ್ತಿದೆ. ಶೋಷಿತ ಸಮಾಜಗಳು ಈ ಬಾರಿ ರಾಜ್ಯದಲ್ಲಿ ಕೋಮುವಾಗಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕು. ಬಿಜೆಪಿ ಪಕ್ಷ ಆರ್ಎಸ್ಎಸ್ ಹಾಗೂ ಹಿಂದು ಮಹಾಸಭಾದ ರಾಜಕೀಯ ಮುಖವಾಡ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಅವರೆಲ್ಲ ಕೂಗು ಮಾರಿಗಳು. ಅವರು ಸಂವಿಧಾನದ ಬಗ್ಗೆ ಮಾತಾಡುತ್ತಾರೆ. ಆರ್ಎಸ್ಎಸ್ ಮತ್ತು ಹಿಂದು ಮಹಾಸಭಾ ಸಂವಿಧಾನಕ್ಕೆ ಕವಡೆಕಾಸಿನ ಬೆಲೆ ಕೊಡುವುದಿಲ್ಲ. ಇವರು ಸಂವಿಧಾನ ವಿರೋಧವಾಗಿ ಇದ್ದಾರೆ. ಎಲ್ಲರಿಗೂ ಶಿಕ್ಷಣ ಕೊಡೋದು ಇಷ್ಟ ಇಲ್ಲ. ಸಮ ಸಮಾಜ ನಿರ್ಮಾಣ ಆದರೆ ಶೋಷಣೆಗೆ ಅವಕಾಶ ಕಡಿಮೆ ಆಗುತ್ತದೆ. ಆರ್ಎಸ್ಎಸ್ ಅವರಿಗೆ ಸಮಾಜದ ಎಲ್ಲಾ ಕಂಟ್ರೋಲ್ ಅವರ ಕೈಯಲ್ಲಿ ಇರಬೇಕು. ಅವರು ಬಯಸಿರುವುದು ಮನುಸ್ಮೃತಿ ಆಧಾರದ ಸಂವಿಧಾನ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾಪತ್ತೆ ಆಗಿದ್ದವಳ ಕಂಡು ದೇವತೆ ಅಂದುಕೊಂಡ ಜನರು!; ನೀರ ಮೇಲೆ ನಡೆದ ವಿಡಿಯೋ ವೈರಲ್