ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 8ನೇ ಆವೃತ್ತಿಯು ಎರಡನೇ ವಾರ ಪೂರೈಸಿ, ಭರ್ಜರಿ ಮನರಂಜನೆಯೊಂದಿಗೆ ಮುನ್ನುಗ್ಗುತ್ತಿದೆ. ಇಂದಿನ ವಾರಾಂತ್ಯದ ವಿಶೇಷ ಸೂಪರ್ ಸಂಡೆ ವಿಥ್ ಸುದೀಪ್ ಎಪಿಸೋಡ್ನಲ್ಲಿ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್ ಅವರು ನೀಡಿರುವ ಒಂದು ಹೇಳಿಕೆ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಯಾರು ನಕಲಿ ಮತ್ತು ಅಸಲಿ ಎಂದು ನಿಮಗೆ ಅನಿಸುತ್ತಿದೆಯೋ ಅವರ ಬಗ್ಗೆ ತಿಳಿಸಿ ಎಂದು ನಟ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಇಂದಿನ ಎಪಿಸೋಡ್ನಲ್ಲಿ ಕೇಳುತ್ತಾರೆ. ಪ್ರತಿಯೊಬ್ಬರು ತಮಗೆ ಅನಿಸಿದಂತೆ ಯಾರು ನಕಲಿ ಮತ್ತು ಅಸಲಿ ಎಂಬುದನ್ನು ಹೇಳುತ್ತಾ ಹೋಗುತ್ತಾರೆ.
ಇದನ್ನೂ ಓದಿರಿ: ಪ್ರಿಯಕರನೊಂದಿಗೆ ಓಡಿ ಬಂದಿದ್ದ ಯುವತಿಯ ದುರಂತ ಅಂತ್ಯ: ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಇದರ ನಡುವೆ ಶಂಕರ್ ಅಶ್ವಥ್ ಅವರು ತಮ್ಮ ಸರದಿ ಬಂದಾಗ ನೀಡಿದ ಒಂದು ಹೇಳಿಕೆ ಇಡೀ ಮನೆಗೆ ಒಂದು ತಿರುವು ನೀಡಿದೆ. ಶಂಕರ್ ಅವರ ಪ್ರಕಾರ ಮನೆಯಲ್ಲಿರುವ ಎಲ್ಲರು ನಕಲಿಗಳಂತೆ. ನೀವು ಕೇಳಿದಂತೆ ನೇರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಸರ್. ಹೇಳಿದರೆ ಯಾರು ಪಕ್ಕದಲ್ಲಿ ಚುಚ್ಚುತ್ತಾರೋ ಅನ್ನೋ ಭಯವೋ? ಕುತಂತ್ರದ ಬುದ್ಧಿಯು ಇರುತ್ತದೆ ಎಂದಿದ್ದಾರೆ.
ಹೀಗಾಗಿ ಇಂದಿನ ಎಪಿಸೋಡ್ ಶಂಕರ್ ಅವರು ನೀಡಿರುವ ಹೇಳಿಕೆಯ ಮೇಲೆ ನಿಂತಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬುದು ಇಂದು ಗೊತ್ತಾಗಲಿದೆ.
ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್ಟಿಟ್ಯೂಟ್ ಮುಖ್ಯಸ್ಥನ ಬಂಧನ
ರಾಬರ್ಟ್ ಪೈರಸಿ: ಎಚ್ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ಆರೋಪಿಯನ್ನು ಹಿಡಿದು ಕೊಟ್ಟ ದರ್ಶನ್ ಫ್ಯಾನ್ಸ್!