ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಹೊಸಕೋಟೆ ನಗರದ ಎಂವಿ ಬಡಾವಣೆಯ ಮನೆಯಲ್ಲಿ ನಡೆದಿದೆ.
ತುಮಕೂರಿನ ಕೊರಟಗೆರೆ ಮೂಲದ ಅಶ್ವಿನಿ ( 23 ) ಮೃತ ಮಹಿಳೆ. 2 ದಿನಗಳ ಹಿಂದೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಎರಡು ವರ್ಷಗಳ ಹಿಂದೆ ಅಶ್ವಿನಿ ಗಾರ್ಮೆಂಟ್ಸ್ಗೆ ಹೋಗ್ತಿದ್ದ ವೇಳೆ ಆಟೋ ಡ್ರೈವರ್ ಸುರೇಶ್ ಎಂಬುವನ ಜತೆ ಪ್ರೀತಿಯಾಗಿತ್ತು. ಹೀಗಿರುವಾಗ ಎರಡು ತಿಂಗಳ ಹಿಂದೆ ಅಶ್ವಿನಿಯನ್ನು ಹೊಸಕೋಟೆಗೆ ಕರೆತಂದಿದ್ದ ಸುರೇಶ್ ಬಾಡಿಗೆ ಮನೆಯಲ್ಲಿಟ್ಟಿದ್ದ. ಆದರೆ, ಇದೀಗ ಅಶ್ವಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿರಿ: ಯಾರೀ ಸುಂದರಿ? ಟಿ20 ಪಂದ್ಯದ ಸೋಲಿನ ನೋವು ಮರೆಸಿದ ಬ್ಯೂಟಿ ಹಿಂದೆ ಬಿದ್ದ ನೆಟ್ಟಿಗರು!
ಅಶ್ವಿನಿ ಸಾವಿನ ವಿಚಾರ ತಿಳಿದ ಆಕೆಯ ಪಾಲಕರು ಸುರೇಶ್ ಕೊಲೆ ಮಾಡಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಸುರೇಶ್ ವಂಚನೆ ಮಾಡಿರುವುದಾಗಿ ಮೂರು ದಿನಗಳ ಹಿಂದೆಯೇ ಅಶ್ವಿನ ಪಾಲಕರು ಸೂಲಿಬೆಲೆಯ ಪೊಲೀಸ್ ಠಾಣೆ ಮೊರೆ ಹೋಗಿದ್ದರು.
ಆದರೆ, ಪ್ರಕರಣ ದಾಖಲಿಸದ ಪೊಲೀಸರು ರಾಜಿ ಮಾಡಿ ಕಳಿಸಿದ್ದರು. ಇದೀಗ ಅಶ್ವಿನಿ ಸಾವಿನ ಬಗ್ಗೆ ಕುಟುಂಬಸ್ಥರಲ್ಲಿ ಅನುಮಾನ ಮೂಡಿದ್ದು, ಕೊಲೆ ಮಾಡಲಾಗಿದೆ ಎಂದು ಆರೋಪಿಸಿ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ವೆಜ್ ಕೇಳಿದ್ರೆ ನಾನ್ ವೆಜ್ ಪಿಜ್ಜಾ ಡೆಲಿವರಿ: ಮಹಿಳೆ ಕೇಳಿದ ಪರಿಹಾರದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!
ಸಿಡಿ ಪ್ರಕರಣ: ಶೀಘ್ರದಲ್ಲೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಯುವತಿಗೆ ನೋಟಿಸ್ ಜಾರಿ
ಜಾರಕಿಹೊಳಿ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯ ನೆರವಿಗೆ ಧಾವಿಸಿದ ರಾಜ್ಯ ಮಹಿಳಾ ಆಯೋಗ