ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 8ನೇ ಆವೃತ್ತಿಯ ಮೊದಲ ವಾರ ಪೂರ್ಣಗೊಂಡಿದೆ. ವಾರದ ಅಂತ್ಯದಲ್ಲಿ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಟಿಕ್ಟಾಕ್ ಸ್ಟಾರ್ ಧನುಶ್ರೀ ಅವರು ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ 8ನೇ ಸೀಸನ್ನಲ್ಲಿ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಂಬ ಹೆಸರು ಗಳಿಸಿದ್ದಾರೆ.
ಈ ವಾರ ನಿರ್ಮಲಾ ಚೆನ್ನಪ್ಪ, ರಘುಗೌಡ, ಶುಭಪೂಂಜಾ, ವಿಶ್ವನಾಥ್ ಹಾವೇರಿ ಮತ್ತು ಧನುಶ್ರೀ ಅವರು ಎಲಿಮಿನೇಷನ್ ಸುತ್ತಿಗೆ ನಾಮಿನೇಟ್ ಆಗಿದ್ದರು. ಶನಿವಾರ ನಡೆದ ವಾರದ ಕತೆ ಕಿಚ್ಚನ ಜತೆ ಎಪಿಸೋಡ್ನಲ್ಲಿ ವೇಳೆ ವಿಶ್ವನಾಥ್ ಹಾವೇರಿ ಮತ್ತು ಶುಭ ಪೂಂಜಾ ಸೇಫ್ ಆಗಿದ್ದರು. ಉಳಿದ ಮೂವರಲ್ಲಿ ನಿನ್ನೆ ನಡೆದ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಮೊದಲಿಗೆ ರಘು ಸೇಫ್ ಆದರು. ಕೊನೆಯಲ್ಲಿ ಉಳಿದ ನಿರ್ಮಲಾ ಮತ್ತು ಧನುಶ್ರೀ ಉಳಿದುಕೊಂಡು. ಈ ವೇಳೆ ಸುದೀಪ್ ಮನೆಯಲ್ಲಿ ಉಳಿಯುವ ಸ್ಪರ್ಧಿಯಾಗಿ ನಿರ್ಮಲಾ ಹೆಸರನ್ನು ಹೇಳಿದರು. ಕೊನೆಯಲ್ಲಿ ಧನುಶ್ರೀ ಮನೆಯಿಂದ ಹೊರಬರಬೇಕಾಯಿತು.
ಇದನ್ನೂ ಓದಿರಿ: ಹಳ್ಳಿ ಪಕ್ಕದ ನಾಲೆಯಲ್ಲಿ ಪತ್ತೆಯಾಯ್ತು ಭಾರೀ ಗಾತ್ರದ ತಿಮಿಂಗಿಲ ಶಾರ್ಕ್ ಕಳೇಬರ!
ಎಲಿಮಿನೇಷನ್ಗೆ ಕಾರಣವಾಯ್ತ ಕಳಪೆ ಪ್ರದರ್ಶನ
ಟಿಕ್ಟಾಕ್ನಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದ ಧನುಶ್ರೀ ಬಿಗ್ಬಾಸ್ ಮನೆಯಲ್ಲಿ ಹೇಳಿಕೊಳ್ಳುವಷ್ಟು ಮನರಂಜನೆ ನೀಡಲಿಲ್ಲ. ಬಹುಶಃ ಹೊಸ ವಾತಾವರಣಕ್ಕೆ ಹೊಂದುಕೊಳ್ಳುವುದೇ ಕಷ್ಟವಾಯಿತೇನೋ? ವಾರದ ಟಾಸ್ಕ್ಗಳಲ್ಲಿಯೂ ಸಹ ತನ್ನ ಸಾಮರ್ಥ್ಯವನ್ನು ಧನುಶ್ರೀ ತೋರಲಿಲ್ಲ. ಹೀಗಾಗಿಯೇ ಕಳಪೆ ಬೋರ್ಡ್ನೊಂದಿಗೆ ಜೈಲು ಪಾಲಾದ ಮೊದಲ ಸ್ಪರ್ಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡರು. ಯಾರೊಂದಿಗೆ ಹೆಚ್ಚು ಮಾತನಾಡದೇ ಮೌನವಾಗಿದಿದ್ದು ಸಹ ಎಲಿಮಿನೇಷ್ನಗೆ ಕಾರಣವಾಗಿರಬಹುದು. ಇತರೆ ಸ್ಪರ್ಧಿಗಳೊಂದಿಗೆ ಹೆಚ್ಚು ಬೆರೆಯಲಿಲ್ಲ. ಒಟ್ಟಾರೆ ವೀಕ್ಷಕರು ಸೆಳೆಯಬಹುದಾದ ಎಲ್ಲ ಅವಕಾಶವನ್ನು ಧನುಶ್ರೀ ಮಿಸ್ ಮಾಡಿಕೊಂಡರು.
ಟ್ರೋಲ್ ಆಗಿದ್ದ ಧನುಶ್ರೀ
ಧನುಶ್ರೀ ಮೇಕಪ್ ಮಾಡಿಕೊಂಡು ಸ್ನಾನದ ಮನೆಗೆ ಹೋದ ವಿಚಾರ ಇಡೀ ವಾರ ಬಿಗ್ಬಾಸ್ ಮನೆಯಲ್ಲಿ ಭಾರಿ ಸದ್ದು ಮಾಡಿತು. ಕೇವಲ ಮನೆಯಲ್ಲಿ ಮಾತ್ರವಲ್ಲದೇ ಹೊರಗಡೆ ಟ್ರೋಲಿಗರಿಗೂ ಧನುಶ್ರೀ ಆಹಾರವಾದರು. ಮೇಕಪ್ ಮಾಡಿಕೊಂಡು ಸ್ನಾನ ಮಾಡಿದ ಮೊದಲ ಮಹಿಳೆ ಧನುಶ್ರೀ ಎಂದು ಟ್ರೋಲ್ ಮಾಡಲು ಶುರು ಮಾಡಿದರು. ಏನೇ ಆಗಲಿ ಇವರ ರಿಯಲ್ ಫೇಸ್ ತೋರಿಸಿದ್ರು. ಜನಕ್ಕೆ ಈಗ ಗೊತ್ತಾಯ್ತು. ಬಿಳಿ ಬಣ್ಣ ಮುಖಕ್ಕೆ ಹೊಡ್ಕೊಂಡ್ ಟಿಕ್ಟಾಕ್ಲಿ ಜನರನ್ನು ಯಾಮರಿಸುತ್ತಿದ್ದಳು. ಇನ್ನಾದ್ರೂ ಈ ಮೇಕಪ್ ರಾಣಿಗೆ ಫಿದಾ ಆಗದಿರಿ ಬಾಯ್ಸ್ ಎಂದು ನೆಟ್ಟಿಗನೊಬ್ಬ ಕಮೆಂಟಿಸಿರುವುದು ಸಹ ಭಾರಿ ವೈರಲ್ ಆಗಿದೆ.
ಅಡುಗೆ ಮನೆ ವಿಭಾಗ ನಂದು ಇಲ್ಲಿಗೆ ಯಾರು ಬರಂಗಿಲ್ಲ: ಬಿಗ್ಬಾಸ್ನಲ್ಲಿ ಜೋರಾಯ್ತು ಜಡೆ ಜಗಳ..!
ಲ್ಯಾಗ್ ಮಂಜ ಹೇಳಿದ್ದನ್ನು ಕೇಳಿ ಶಾಕ್ ಆದ ದಿವ್ಯಾ ಸುರೇಶ್: ಬಾಡಿತು ನಗು ಮುಖ..!
ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!