ಬೆಂಗಳೂರು: ಬಿಗ್ಬಾಸ್ ಕನ್ನಡ 8ನೇ ಆವೃತ್ತಿ ಮೊದಲ ವಾರ ಪೂರೈಸುವ ಹಂತಕ್ಕೆ ಬಂದಿದ್ದು, ನಿನ್ನೆಯ ಎಪಿಸೋಡ್ನಲ್ಲಿ ಸ್ಪರ್ಧಿ ಹಾಗೂ ನಟಿ ನಿಧಿ ಸುಬ್ಬಯ್ಯ ಅವರು ಸ್ವಾರಸ್ಯಕರ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಸ್ಟಾರ್ ನಟರೊಬ್ಬರು ನಿಧಿ ಅವರ ಮನೆಗೆ ಪಟಾಕಿ ಎಸೆದಿದ್ದರಂತೆ. ಯಾರು ಆ ಸ್ಟಾರ್ ನಟ ಎಂದು ತಿಳಿಯಲು ಮುಂದೆ ಓದಿ…
ನಾನು ನಮ್ಮ ತಾತನ ಜತೆಯಲ್ಲಿ ಇರುತ್ತಿದ್ದೆ. ತಾತನ ರೂಂ ನೆಲಮಹಡಿಯಲ್ಲಿತ್ತು ಮತ್ತು ನನ್ನ ಕೋಣೆ ಮೊದಲನೇ ಮಹಡಿಯಲ್ಲಿತ್ತು. ನನ್ನ ರೂಂ ಅಂದುಕೊಂಡು ಅವರು ಪಟಾಕಿಯನ್ನು ತಾತನ ರೂಮಿನ ಕಿಟಕಿಯ ಬಳಿ ಎಸೆದುಬಿಟ್ಟರು. ಬೆಂಕಿ ಹೊತ್ತಿಕೊಂಡಿತು. ನಾವು ಮನೆಯಿಂದ ಹೊರಗೆ ಓಡಿಬಂದು ಪೊಲೀಸರಿಗೆ ಮಾಹಿತಿ ನೀಡಿದೆವು. ಈ ವೇಳೆ ನಾಲ್ಕು ಬೈಕ್ ಹೋಗಿದ್ದನ್ನು ನೋಡಿದೆವು ಎಂದು ನಿಧಿ ಸ್ಪರ್ಧಿಗಳೊಂದಿಗೆ ಮಾತನಾಡುವಾಗ ಈ ವಿಚಾರವನ್ನು ಪ್ರಸ್ತಾಪಿಸಿದರು.
ಈ ಘಟನೆಯಾದ ಕೆಲವು ದಿನಗಳ ಬಳಿಕ ನಾನು ಸಿನಿಮಾ ಇಂಡಸ್ಟ್ರಿಗೆ ಸೇರಿದೆ. ಒಮ್ಮೆ ಪೊಲೀಸರಿಗೆ ಗೌರವ ಸೂಚಿಸುವ ಕಾರ್ಯಕ್ರಮದ ರಿಹರ್ಸಲ್ ನಡೆಯುತ್ತಿತ್ತು. ಈ ವೇಳೆ ಯಾರೋ ಒಬ್ಬರು, ಅವರೀಗ ನಟರೂ ಹೌದು ನನ್ನ ಬಳಿ ಬಂದು ನಿಧಿ ಒಂದು ತಪ್ಪೊಪ್ಪಿಗೆ ಮಾಡಿಕೊಳ್ಳಬೇಕೆಂದರು. ಪಟಾಕಿ ನೆನಪಿದೆಯಾ ಎಂದು ಕೇಳಿದರು. ಅದು ನಾನೇ ಎಸೆದಿದ್ದು ಎಂದು ಒಪ್ಪಿಕೊಂಡರು.
ಯಾರು ಆ ನಟ ಎಂದು ಊಹಿಸಿ ಎಂದು ನಿಧಿ ಅವರು ಇತರೆ ಸ್ಪರ್ಧಿಗಳನ್ನು ಕೇಳಿದರು. ಯಾರೂ ಗೆಸ್ ಮಾಡದಿದ್ದಾಗ ಕೆಜಿಎಫ್ ಚಿತ್ರದ ಧೀರ ಧೀರ ಸಾಂಗ್ ಹಾಡುವ ಮೂಲಕ ಸುಳಿವು ನೀಡಿದರು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು ಆ ಸ್ಟಾರ್ ನಟ ಯಶ್ ಎಂದು.