ಬೆಂಗಳೂರು: ಅನೀಶ್ ತೇಜೇಶ್ವರ್ ಅಭಿನಯದಲ್ಲಿ ಅಭಿಷೇಕ್ ಶೆಟ್ಟ ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿತ್ತು. ಆ ಚಿತ್ರದ ಹೆಸರೇನೆಂದು ಅನೀಶ್ ಬಾಯಿಬಿಟ್ಟಿರಲಿಲ್ಲ. ಈಗ ಚಿತ್ರಕ್ಕೆ ಕೊನೆಗೂ ‘ಆರಾಮ್ ಅರವಿಂದಸ್ವಾಮಿ’ ಎಂಬ ಹೆಸರನ್ನು ಇಡಲಾಗಿದೆ.
ಇದನ್ನೂ ಓದಿ: ಇಷ್ಟು ವರ್ಷಗಳಲ್ಲಿ ಇಂಥ ಪಾತ್ರವನ್ನೇ ಮಾಡಿರಲಿಲ್ಲವಂತೆ ಗಣೇಶ್ … ಯಾವುದು ಆ ಪಾತ್ರ?
ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳನ್ನು ನಿರ್ದೇಶಿಸುವುದರ ಜತೆಗೆ, ಆ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಅನೀಶ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಲುಕ್ನ ಫೋಟೋವೊಂದನ್ನು ಅನೀಶ್ ಹಂಚಿಕೊಂಡಿದ್ದಾರೆ.
ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಲಿದ್ದು, ಇದುವರೆಗೂ ಅನೀಶ್ ಮಾಡಿರುವ ಸಿನಿಮಾಗಳಿಗಿಂತ ಈ ಸಿನಿಮಾ ಖಂಡಿತ ವಿಭಿನ್ನವಾಗಿರಲಿದ್ದು, ಸದ್ಯ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನೂ ಹೆಸರಿಡದ ಈ ಚಿತ್ರವನ್ನು ‘ಅಕಿರಾ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಅಜೇಯ್ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್ ಹೀಗಿದೆ ನೋಡಿ …
ಇದಕ್ಕೂ ಮುನ್ನ ‘ಬೆಂಕಿ’ ಎಂಬ ಚಿತ್ರದಲ್ಲಿ ಅನೀಶ್ ನಟಿಸಿದ್ದರು. ಬಾಕ್ಸ್-ಆಫೀಸ್ನಲ್ಲಿ ಹೆಚ್ಚು ಸದ್ದು, ಸುದ್ದಿ ಮಾಡದ ಈ ಚಿತ್ರದ ನಂತರ ಹೊಸ ಚಿತ್ರದ ಸಿದ್ಧತೆಯಲ್ಲಿದ್ದ ಅನೀಶ್, ಈಗ ‘ಆರಾಮ್ ಅರವಿಂದಸ್ವಾಮಿ’ಯಾಗಿ ಮತ್ತೊಮ್ಮೆ ಬರಲಿದ್ದಾರೆ.
After an overwhelming queries about my next project I would like to make an official announcement !! ♥️
Presenting to you the title and my look for the next movie
𝗔𝗔𝗥𝗔𝗠 𝗔𝗥𝗔𝗩𝗜𝗡𝗗𝗦𝗪𝗔𝗠𝗬 – ಆರಾಮ್ ಅರವಿಂದ್ ಸ್ವಾಮಿ
Directed by – Abhishek shetty pic.twitter.com/0FNBl2rA0E— Aniissh (@i_am_Aniissh) November 20, 2022
ರಿಷಭ್ ಶೆಟ್ರಿಗೆ ಕಮಲ್ ಹಾಸನ್ ಪೋನ್ ಮಾಡಿದ್ರಂತೆ … ಯಾಕೆ ಗೊತ್ತಾ?