More

    ಸೋಲಿನ ಎಫೆಕ್ಟ್​​; ಮತ್ತೆ ಕಾಮಿಡಿಯತ್ತ ಹೊರಳಿದ ಅಕ್ಷಯ್​ ಕುಮಾರ್​

    ಮುಂಬೈ: ಸತತ ಆಕ್ಷನ್​ ಚಿತ್ರಗಳನ್ನು ಮಾಡಿ ಸಾಲುಸಾಲು ಸೋಲುಗಳನ್ನು ಕಂಡಿದ್ದ ಅಕ್ಷಯ್​ ಕುಮಾರ್​ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿದ್ದು, ‘ಹೇರಾ ಫೇರಿ’ ಎಂಬ ಕಾಮಿಡಿ ಚಿತ್ರ. ಈಗ ಸೋಲಿನ ಸುಳಿಯಲ್ಲಿ ಸಿಲುಕಿರುವ ಅವರು ಮತ್ತೊಮ್ಮೆ ಕಾಮಿಡಿ ಚಿತ್ರದ ಮೊರೆ ಹೋಗಿದ್ದಾರಾ? ಇಂಥದ್ದೊಂದು ಪ್ರಶ್ನೆ ಬಾಲಿವುಡ್​ನಲ್ಲಿ ಕೇಳಿ ಬರುತ್ತಿದೆ.

    ಇದನ್ನೂ ಓದಿ: ಅಭಿಮಾನಿಗಳ ಜತೆಗೆ ರೈಡಿಂಗ್​ ಹೊರಟ ಗಣೇಶ್​​ …

    ಈ ಪ್ರಶ್ನೆ ಕೇಳಿ ಬರುವುದಕ್ಕೆ ಮುಖ್ಯ ಕಾರಣ ಅಕ್ಷಯ್​ ಕುಮಾರ್​, ‘ಖೇಲ್​ ಖೇಳ್​ ಮೇ’ ಎಂಬ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದು. ಇದೊಂದು ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಅವರಿಗೆ ಇಬ್ಬರು ನಾಯಕಿಯರು. ಒಬ್ಬಾಕೆ ತಾಪ್ಸಿ ಪನ್ನು ಆದರೆ, ಇನ್ನೊಬ್ಬಾಕೆ ವಾಣಿ ಕಪೂರ್​. ಈ ಇಬ್ಬರು ನಟಿಯರ ಜತೆಗೆ ಹೊಸ ಖೇಲ್​ ಆಡುವುದಕ್ಕೆ ಅಕ್ಷಯ್​ ಕುಮಾರ್​ ಮುಂದಾಗಿದ್ದಾರೆ.

    ಅಕ್ಷಯ್​ ಅಭಿನಯದ ಐದು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಪೈಕಿ ‘ಕಟ್ಪುತ್ಲಿ’ ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾದರೆ, ಮಿಕ್ಕಂತೆ ‘ಪೃಥ್ವಿರಾಜ್​’, ‘ಬಚ್ಚನ್​ ಪಾಂಡೆ’, ‘ರಾಮ್​ ಸೇತು’ ಮತ್ತು ‘ರಕ್ಷಾ ಬಂಧನ್​’ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ನಾಲ್ಕೂ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ತೋಪಾಗಿದ್ದು, ಅಕ್ಷಯ್​ಗೆ ದೊಡ್ಡ ತಲೆ ನೋವಾಗಿದೆ. ಈ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಅಕ್ಷಯ್​, ಈ ಬಾರಿ ಕಾಮಿಡಿ ಚಿತ್ರವನ್ನು ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ ಹಿಂದೊಮ್ಮೆ, ಸೋಲಿನಲ್ಲಿದ್ದ ಅಕ್ಷಯ್​ ಅವರನ್ನು ಮೇಲೆತ್ತಿದ್ದು ‘ಹೇರಾ ಫೇರಿ’. ಈಗ ಪುನಃ ‘ಖೇಲ್​ ಖೇಲ್​ ಮೇ’ ಸಹ ಅದೇ ಮಾಡುತ್ತದಾ ಎಂದು ಕಾದು ನೋಡಬೇಕಿದೆ.

    ಇದನ್ನೂ ಓದಿ: ಜಗತ್ತಿನಾದ್ಯಂತ 400 ಕೋಟಿ ರೂ. ಗಳಿಸಿದ ‘ಕಾಂತಾರ’!

    ‘ಖೇಲ್​ ಖೇಲ್​ ಮೇ’ ಚಿತ್ರವನ್ನು ಭೂಷಣ್​ ಕುಮಾರ್​ ನಿರ್ಮಿಸಿದರೆ, ಮುದ್ದಾಸರ್​ ಅಜೀಜ್​ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ.

    ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್​ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts