ಮುಂಬೈ: ಸತತ ಆಕ್ಷನ್ ಚಿತ್ರಗಳನ್ನು ಮಾಡಿ ಸಾಲುಸಾಲು ಸೋಲುಗಳನ್ನು ಕಂಡಿದ್ದ ಅಕ್ಷಯ್ ಕುಮಾರ್ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿದ್ದು, ‘ಹೇರಾ ಫೇರಿ’ ಎಂಬ ಕಾಮಿಡಿ ಚಿತ್ರ. ಈಗ ಸೋಲಿನ ಸುಳಿಯಲ್ಲಿ ಸಿಲುಕಿರುವ ಅವರು ಮತ್ತೊಮ್ಮೆ ಕಾಮಿಡಿ ಚಿತ್ರದ ಮೊರೆ ಹೋಗಿದ್ದಾರಾ? ಇಂಥದ್ದೊಂದು ಪ್ರಶ್ನೆ ಬಾಲಿವುಡ್ನಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಅಭಿಮಾನಿಗಳ ಜತೆಗೆ ರೈಡಿಂಗ್ ಹೊರಟ ಗಣೇಶ್ …
ಈ ಪ್ರಶ್ನೆ ಕೇಳಿ ಬರುವುದಕ್ಕೆ ಮುಖ್ಯ ಕಾರಣ ಅಕ್ಷಯ್ ಕುಮಾರ್, ‘ಖೇಲ್ ಖೇಳ್ ಮೇ’ ಎಂಬ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದು. ಇದೊಂದು ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಅವರಿಗೆ ಇಬ್ಬರು ನಾಯಕಿಯರು. ಒಬ್ಬಾಕೆ ತಾಪ್ಸಿ ಪನ್ನು ಆದರೆ, ಇನ್ನೊಬ್ಬಾಕೆ ವಾಣಿ ಕಪೂರ್. ಈ ಇಬ್ಬರು ನಟಿಯರ ಜತೆಗೆ ಹೊಸ ಖೇಲ್ ಆಡುವುದಕ್ಕೆ ಅಕ್ಷಯ್ ಕುಮಾರ್ ಮುಂದಾಗಿದ್ದಾರೆ.
ಅಕ್ಷಯ್ ಅಭಿನಯದ ಐದು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಪೈಕಿ ‘ಕಟ್ಪುತ್ಲಿ’ ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾದರೆ, ಮಿಕ್ಕಂತೆ ‘ಪೃಥ್ವಿರಾಜ್’, ‘ಬಚ್ಚನ್ ಪಾಂಡೆ’, ‘ರಾಮ್ ಸೇತು’ ಮತ್ತು ‘ರಕ್ಷಾ ಬಂಧನ್’ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ನಾಲ್ಕೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ತೋಪಾಗಿದ್ದು, ಅಕ್ಷಯ್ಗೆ ದೊಡ್ಡ ತಲೆ ನೋವಾಗಿದೆ. ಈ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಅಕ್ಷಯ್, ಈ ಬಾರಿ ಕಾಮಿಡಿ ಚಿತ್ರವನ್ನು ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ ಹಿಂದೊಮ್ಮೆ, ಸೋಲಿನಲ್ಲಿದ್ದ ಅಕ್ಷಯ್ ಅವರನ್ನು ಮೇಲೆತ್ತಿದ್ದು ‘ಹೇರಾ ಫೇರಿ’. ಈಗ ಪುನಃ ‘ಖೇಲ್ ಖೇಲ್ ಮೇ’ ಸಹ ಅದೇ ಮಾಡುತ್ತದಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಜಗತ್ತಿನಾದ್ಯಂತ 400 ಕೋಟಿ ರೂ. ಗಳಿಸಿದ ‘ಕಾಂತಾರ’!
‘ಖೇಲ್ ಖೇಲ್ ಮೇ’ ಚಿತ್ರವನ್ನು ಭೂಷಣ್ ಕುಮಾರ್ ನಿರ್ಮಿಸಿದರೆ, ಮುದ್ದಾಸರ್ ಅಜೀಜ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ.
ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿಕೆ