More

    ಡೇಂಜರ್​ ಝೋನ್​​ನಲ್ಲಿ ನಟಿ ಶ್ರೀಲೀಲಾ! ಇದೇ ಮುಂದುವರಿದ್ರೆ ಸೌತ್​ ಬ್ಯೂಟಿ ಕತೆ ಅಷ್ಟೇ…

    ಹೈದರಾಬಾದ್​: ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿ ತೆಲುಗು ಚಿತ್ರರಂಗಕ್ಕೆ ಹಾರಿ, ಭರ್ಜರಿ ಯಶಸ್ಸು ಕಂಡಿರುವ ನಟಿ ಶ್ರೀಲೀಲಾ ಇದೀಗ ಡೇಂಜರ್​​ ಝೋನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ನಟಿಯರು ಮೊದಲ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರು ನಾಯಕಿಯರು ಮಾತ್ರ ಮೊದಲ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್​ ನಟಿಯರ ಸಾಲಿಗೆ ಸೇರಿಬಿಡುತ್ತಾರೆ. ಇಂತಹ ನಾಯಕಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು.

    ಶ್ರೀಲೀಲಾ ತಾನು ನಟಿಸಿದ ಮೊದಲ ತೆಲುಗು ಸಿನಿಮಾ “ಪೆಳ್ಳಿಸಂದಡಿ” ಯಲ್ಲೇ ಎಲ್ಲರ ಗಮನ ಸೆಳೆದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಷ್ಟು ಹಿಟ್​ ಆಗಲಿಲ್ಲ. ಬಳಿಕ ಧಮಾಕ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸೂಪರ್​ ಹಿಟ್​ ಆಯಿತು. ತನ್ನ ನಟನೆ, ಗ್ಲಾಮರ್​ ಲುಕ್​ ಮತ್ತು ಡಾನ್ಸ್​ನಿಂದಲೇ ಶ್ರೀಲೀಲಾ ಟಾಲಿವುಡ್​ನಲ್ಲಿ ಒಳ್ಳೆಯ ಹೆಸರು ಮಾಡಿದರು. ಎರಡನೇ ಚಿತ್ರದಲ್ಲೇ ಸ್ಟಾರ್​ ಹೀರೋಯಿನ್​ ಪಟ್ಟ ಗಿಟ್ಟಿಸಿದರು.

    sreeleela

    ಧಮಾಕ ಬಳಿಕ ಟಾಲಿವುಡ್​ನಲ್ಲಿ ಎಲ್ಲರೂ ಶ್ರೀಲೀಲಾ ಜಪ ಮಾಡಲು ಶುರು ಮಾಡಿದರು. ಎಲ್ಲ ಬಿಗ್​ ಬ್ಯಾನರ್​ ನಿರ್ಮಾಣ ಸಂಸ್ಥೆಗಳು ಕೂಡ ಶ್ರೀಲೀಲಾರನ್ನು ಹುಡುಕಿಕೊಂಡು ಬಂದರು. ಸಾಕಷ್ಟು ಸಿನಿಮಾಗಳಿಗೆ ಸಹಿ ಹಾಕಿದ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ ಶ್ರೀಲೀಲಾ ಇದೀಗ ಡೇಂಜರ್​ ಝೋನ್​ಗೆ ಬಂದು ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ ನಟನೆಯ ಸಾಲು ಸಾಲು ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿವೆ.

    ಸ್ಕಂದ, ಆದಿಕೇಶವ ಮತ್ತು ಎಕ್ಸ್ಟ್ರಾರ್ಡಿನರಿ ಮ್ಯಾನ್​ ಸಿನಿಮಾಗಳು ಫ್ಲಾಪ್​ ಆಗಿವೆ. ನಂದಮುರಿ ಬಾಲಕೃಷ್ಣ ಅಭಿನಯದ ಭಗವಂತ್​ ಕೇಸರಿ ಸಿನಿಮಾ ಮಾತ್ರ ಹಿಟ್​ ಆಯಿತು. ಈ ಚಿತ್ರದಲ್ಲಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದರೂ ಸಿನಿಮಾ ಯಶಸ್ಸು ಬಾಲಯ್ಯ ಖಾತೆಗೆ ಸೇರಿಕೊಂಡಿತು. ಸಾಲು ಸಾಲು ಫ್ಲಾಪ್​ ಸಿನಿಮಾಗಳನ್ನು ನೀಡಿದರೂ ಶ್ರೀಲೀಲಾಗೆ ಅವಕಾಶಗಳು ಮಾತ್ರ ಕಮ್ಮಿ ಆಗಿಲ್ಲ. ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಯಿತು.

    sreeleela

    ಈ ಸಿನಿಮಾ ಖಂಡಿತವಾಗಿ ಹಿಟ್​ ಆಗಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಟಾಕ್​ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಶ್ರೀಲೀಲಾ ಇದ್ದರು. ಆದರೆ, ಜನವರಿ 12ರಂದು ಬಿಡುಗಡೆಯಾದ ಗುಂಟೂರು ಖಾರಂ ಸಿನಿಮಾ ಮೊದಲ ದಿನವೇ ನೆಗಿಟಿವ್​ ವಿಮರ್ಶೆಯನ್ನು ಪಡೆದುಕೊಂಡಿದೆ. ಅಲ್ಲದೆ, ಶ್ರೀಲೀಲಾ ಪಾತ್ರವು ಕೂಡ ಯಾರಿಗೂ ಇಷ್ಟವಾಗಿಲ್ಲ. ಈ ಹಿಂದೆ ಪೂಜಾ ಹೆಗ್ಡೆ ಮತ್ತು ಕೃತಿ ಶೆಟ್ಟಿ ಕೂಡ ಇದೇ ಹಾದಿಯಲ್ಲಿ ಬಂದು ಇದ್ದಕ್ಕಿದ್ದಂತೆ ಕಣ್ಮರೆಯಾದರು ಇದೀಗ ಶ್ರೀಲೀಲಾ ಕೂಡ ಇದೇ ರೀತಿ ಕಣ್ಮರೆಯಾಗಲಿದ್ದಾರೆ ಎಂಬುದು ಟಾಲಿವುಡ್​ ಸಿನಿ ಪಂಡಿತರ ಲೆಕ್ಕಾಚಾರವಾಗಿದೆ.

    ಶ್ರೀಲೀಲಾ ಮಾಡಿದ ತಪ್ಪೇನು?
    ಶ್ರೀಲೀಲಾ ಬ್ಯೂಟಿಫುಲ್​ ಹೀರೋಯಿನ್​ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಬೆಳ್ಳಿ ಪರದೆಯ ಮೇಲೆ ತಮ್ಮ ಗ್ಲಾಮರ್​ ಮೂಲಕವೇ ಎಲ್ಲರನ್ನು ಮನಸೂರೆಗೊಳಿಸಿದ್ದಾರೆ. ತಮ್ಮ ಡಾನ್ಸ್​ನಿಂದ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಆದರೆ, ಸ್ಟೋರಿ ಆಯ್ಕೆಯಲ್ಲಿ ಶ್ರೀಲೀಲಾ ಎಡವುತ್ತಿದ್ದಾರೆ ಎಂದು ಸಿನಿ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಗ್ಲಾಮರ್​ಗೆ ಸೀಮಿತವಾಗಿ ಪಾತ್ರಗಳು ಕೂಡ ಪ್ರಭಾವ ಬೀರುವಂತಹ ಸ್ಟೋರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ತಮ್ಮ ನಟನೆಯ ಸಾಬೀತು ಮಾಡುಬಹುದಾಗ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಸ್ಟಾರ್​ ನಾಯಕಿಯ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂಬುದು ಸಿನಿ ತಜ್ಞರ ಅಭಿಪ್ರಾಯವಾಗಿದೆ.

    ಡೇಂಜರ್​ ಝೋನ್​​ನಲ್ಲಿ ನಟಿ ಶ್ರೀಲೀಲಾ! ಇದೇ ಮುಂದುವರಿದ್ರೆ ಸೌತ್​ ಬ್ಯೂಟಿ ಕತೆ ಅಷ್ಟೇ…

    ಸದ್ಯ ಶ್ರೀಲೀಲಾ ಅವರು ಪವನ್​ ಕಲ್ಯಾಣ್​ ನಟನೆಯ ಉಸ್ತಾದ್​ ಭಗತ್​ ಸಿಂಗ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

    ಫೋನ್ ಚಾರ್ಜ್​ ಮಾಡುವ ಅಗತ್ಯವೇ ಇಲ್ಲ: ಶೀಘ್ರದಲ್ಲೇ ಬರಲಿದೆ 50 ವರ್ಷ ತಾಳಿಕೆ ಬರುವ ಬ್ಯಾಟರಿ!!

    ಜ್ಞಾನವಾಪಿ ಮಸೀದಿ ಒಳಗಿರುವ ವಾಝುಖಾನ ಟ್ಯಾಂಕ್ ಸ್ವಚ್ಛತೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts