More

    ಕೋಟೆನಾಡಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ; ಕಾರಣ ಏನು?

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಿಗದಿಯಾಗಿದ್ದ ನಟ ಕಿಚ್ಚ ಸುದೀಪ್ ಅವರ ರೋಡ್​ ಶೋ ರದ್ದಾಗಿದೆ. ಪರಿಣಾಮವಾಗಿ ಸುದೀಪ್ ಅವರನ್ನು ನೋಡಲೆಂದು ಬಂದಿದ್ದ ಅಭಿಮಾನಿಗಳು ನಿರಾಸೆಯಿಂದ ಮರಳುವಂತಾಗಿದೆ.

    ಬಿಜೆಪಿ ಅಭ್ಯರ್ಥಿ ಪರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮತಕ್ಷೇತ್ರದ ಭರಮಸಾಗರ, ಸಿರಿಗೆರೆ ಗ್ರಾಮದಲ್ಲಿ ಸುದೀಪ್ ರೋಡ್ ಶೋ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿರಿಗೆರೆ ಹೆಲಿಪ್ಯಾಡ್​ಗೆ ಹೆಲಿಕಾಪ್ಟರ್ ಬರದೇ ರೋಡ್ ಶೋ ರದ್ದಾಗಿದೆ.

    ಇದನ್ನೂ ಓದಿ: ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್​ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!

    ಸಿರಿಗೆರೆ, ಭರಮಸಾಗರ ಗ್ರಾಮದಲ್ಲಿ ಸುದೀಪ್‌ ರೋಡ್ ಶೋ ಬಳಿಕ ಹೊಳಲ್ಕೆರೆ, ಚಳ್ಳಕೆರೆಯಲ್ಲೂ ರೋಡ್ ಶೋ ನಡೆಯಬೇಕಿತ್ತು. ಆದರೆ ಅಲ್ಲಿನ ರೋಡ್ ಶೋ ಕೂಡ ರದ್ದುಗೊಂಡಿದೆ. ಎಲ್ಲ ಕಡೆ ಸುದೀಪ್​ಗೆ ಕಾದಿದ್ದ ಅಭಿಮಾನಿಗಳು ನಿರಾಸೆಯಿಂದ ಮರಳುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts