More

    ‘ಲಸಿಕೆ ಹಾಕಿಸಿಕೊಂಡು ನನಗೇನಾದ್ರೂ ಆದ್ರೆ ಏನ್​ ಗತಿ?’ ಎಂದವನಿಗೆ ಗ್ಯಾರಂಟಿ ಪತ್ರಕ್ಕೆ ಸಹಿ ಮಾಡಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ

    ಹುಬ್ಬಳ್ಳಿ: ಕರೊನಾ ಲಸಿಕೆ ವಿಚಾರದಲ್ಲಿ ಆರಂಭದಿಂದಲೂ ಒಂದಷ್ಟು ಮಂದಿ ಹಿಂಜರಿಕೆ ತೋರುತ್ತಲೇ ಬಂದಿದ್ದು, ಅದೀಗಲೂ ಮುಂದುವರಿದಿದೆ. ಶುರುವಾತಲ್ಲಿ ಕೆಲವರು ಲಸಿಕೆ ಕುರಿತು ಅಪಪ್ರಚಾರ ಮಾಡಿ ಆತಂಕ ಹುಟ್ಟಿಸಿದ್ದೂ ಇದೆ. ಅದೇ ಹಿನ್ನೆಲೆಯಲ್ಲೋ ಏನೋ.. ಇಲ್ಲೊಬ್ಬ ವ್ಯಕ್ತಿ ‘ಲಸಿಕೆ ಹಾಕಿಸಿಕೊಂಡು ನನಗೇನಾದ್ರೂ ಆದ್ರೆ ಏನ್​ ಗತಿ?’ ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅವರನ್ನೇ ಪ್ರಶ್ನಿಸಿದ್ದಾನೆ.

    ಹುಬ್ಬಳ್ಳಿಯ ಪಾಲಿಕೆ ಆವರಣದಲ್ಲಿ ನಡೆದ ಸಭೆಯಲ್ಲಿ ಆನಂದ ಕುಂದನೂರ ಎಂಬ ವ್ಯಕ್ತಿ ಜಿಲ್ಲಾಧಿಕಾರಿಯವರಿಗೆ ಇಂಥದ್ದೊಂದು ಪ್ರಶ್ನೆ ಕೇಳಿದ್ದಾನೆ. ಲಸಿಕೆ ಹಾಕಿಸಿಕೊಂಡು ನನಗೇನಾದ್ರೂ ಆದ್ರೆ ಏನ್​ ಗತಿ? ಎಂದು ಕೇಳಿದ ಆತ, ನನಗೇನೂ ಆಗುವುದಿಲ್ಲ ಎಂದು ಬರೆದು ಕೊಡಿ, ಆಗ ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾನೆ.

    ಇದನ್ನೂ ಓದಿ: ಅಂದು ಪೌರುಷ ಮೆರೆದಿದ್ದವರು ಇಂದು ಪರಾರಿ: ಯುವಕನ ಜತೆ ಕಂಬಕ್ಕೆ ಕಟ್ಟಿ ಥಳಿಸಿದ ಗಂಡ-ಮೈದುನನ ವಿರುದ್ಧ ಯುವತಿಯ ದೂರು

    ನಾನು ಸಹಿ ಮಾಡಿಕೊಡುತ್ತೇನೆ, ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ ಜಿಲ್ಲಾಧಿಕಾರಿ, ಕೂಡಲೇ ಪತ್ರ ಬರೆದುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿ ಅದಕ್ಕೆ ಸಹಿ ಮಾಡಿದ್ದಾರೆ. ಮಾತ್ರವಲ್ಲ, ಪ್ರಶ್ನೆ ಕೇಳಿದ ವ್ಯಕ್ತಿಗೆ ಲಸಿಕೆ ಹಾಕಿಸಿದ್ದಾರೆ.

    ಈ ಸಂದರ್ಭಕ್ಕೆ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಉಪ ವಿಭಾಗಾಧಿಕಾರಿ ಡಾ.ಬಿ. ಗೋಪಾಲಕೃಷ್ಣ ಕೂಡ ಸಾಕ್ಷಿಯಾಗಿದ್ದು, ಅವರು ಕೂಡ ಸಹಿ ಮಾಡಿದ್ದಾರೆ.

    'ಲಸಿಕೆ ಹಾಕಿಸಿಕೊಂಡು ನನಗೇನಾದ್ರೂ ಆದ್ರೆ ಏನ್​ ಗತಿ?' ಎಂದವನಿಗೆ ಗ್ಯಾರಂಟಿ ಪತ್ರಕ್ಕೆ ಸಹಿ ಮಾಡಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ
    ಜಿಲ್ಲಾಧಿಕಾರಿ ಸಹಿ ಮಾಡಿಕೊಟ್ಟ ಗ್ಯಾರಂಟಿ ಪತ್ರ

    ಕಚೇರಿಯಲ್ಲೇ ಕಾಮದಾಟ, ಡಾ.ರತ್ನಾಕರ್ ಬಂಧನ; ಮಹಿಳೆಯರನ್ನು ಕರೆದುಕೊಂಡು ರಾಜ್ಯದ ಹಲವೆಡೆಗಷ್ಟೇ ಅಲ್ಲ, ಹೊರಜಿಲ್ಲೆಗೂ ಹೋಗಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts