ಮೈಸೂರು: ಸತ್ತು ಮಲಗಿರುವ ವೃದ್ಧೆಯ ಅಂತ್ಯಸಂಸ್ಕಾರ ಇನ್ನು ಕೆಲವೇ ಕ್ಷಣದಲ್ಲಿ ನಡೆಯಬೇಕು ಅನ್ನುವಷ್ಟರಲ್ಲಿ ಹೆಣದ ಮುಂದೆಯೇ ಮಹಾ ವಂಚನೆ ನಡೆದಿದೆ. ಕೆಲವರು ವೃದ್ಧೆಯ ಆಸ್ತಿಗಾಗಿ ಖಾಲಿ ಬಾಂಡ್ ಪೇಪರ್ಗೆ ಮೃತಳ ಹೆಬ್ಬೆಟ್ಟಿನ ಮುದ್ರೆ ಒತ್ತಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಇಂತಹ ಅಮಾನವೀಯ ಘಟನೆ ಮೈಸೂರು ತಾಲೂಕಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಮೃತರ ಹೆಬ್ಬೆಟ್ಟಿನ ಗುರುತು ಪಡೆದು ಆಸ್ತಿ ಲಪಟಾಯಿಸುವುದು ಕಾನೂನು ಪ್ರಕಾರ ತಪ್ಪು. ಆದರೂ ಮೃತರ ಕುಟುಂಬಕ್ಕೆ ಸಂಬಧಿಸಿದ ಮಹಿಳೆಯೊಬ್ಬರು ತನ್ನ ಕಡೆಯವರ ಜತೆ ಬಂದು ಹತ್ತಾರು ಖಾಲಿ ಬಾಂಡ್ ಪೇಪರ್ಗಳಿಗೆ ಶವದ ಹೆಬ್ಬೆಟ್ಟಿಂದ ಸಹಿ ಒತ್ತಿಕೊಂಡಿದ್ದಾರೆ.
ಹೀಗೆ ಮಾಡುವುದು ತಪ್ಪು ಎಂದು ಸ್ಥಳದಲ್ಲೇ ಇದ್ದ ಸಂಬಂಧಿಕರು ಎಷ್ಟೇ ಹೇಳಿದರೂ ವಾದಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆಯ ಜತೆಗೂ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಬಳಿಕ ಖಾಲಿ ಪತ್ರಗಳನ್ನು ಸಂಬಂಧಿಕರು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಶವದ ಬಳಿ ನಿಂತು ಖಾಲಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಕೊಂಡ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)
ಮೈಸೂರಲ್ಲಿ ಆಸ್ತಿಗಾಗಿ ಶವದ ಹೆಬ್ಬೆಟ್ಟು ಒತ್ತಿಸಿಕೊಂಡ್ರು: ಗಂಡ ಬದುಕಿಲ್ಲ, ಮಕ್ಕಳೂ ಇಲ್ಲ… ಅಸಲಿ ಕತೆ ಇಲ್ಲಿದೆ
ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?
ದುಬಾರಿ ಟೊಮ್ಯಾಟೊಗೆ ಗೌರಿಬಿದನೂರಲ್ಲಿ ಇಬ್ಬರು ಬಲಿ! ತೋಟದಲ್ಲೇ ನಡೀತು ಘೋರ ಕೃತ್ಯ, ಇಲ್ಲಿ ಯಾರದ್ದು ತಪ್ಪು?
ಟೆಕ್ಕಿ ಜತೆ ರಿಸೆಪ್ಷನ್ ಮಾಡ್ಕೊಂಡ ಚನ್ನಪಟ್ಟಣ ವಧು: ಮಧ್ಯರಾತ್ರಿ ಆಕೆ ಮಾಡಿದ ಕೆಲ್ಸಕ್ಕೆ ಮದ್ವೆಯೇ ಮುರಿದು ಬಿತ್ತು