ಕಲಬುರಗಿ: ಖಾಸಗಿ ಸಿಟಿ ಸ್ಕ್ಯಾನ್ ಸಂಸ್ಥೆಗಳಿಂದ ಜನರ ಹಣ ಸುಲಿಗೆ ತಪ್ಪಿಸಲು ದರ ನಿಗದಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಘೋಷಿಸಿದರು.
ಕರೊನಾ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಗರದ ಐವಾನ್ ಶಾಹಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಕೆಲವೆಡೆ ಸಿಟಿ ಸ್ಕ್ಯಾನ್ ಮಾಡಲು ಜನರಿಂದ ಹೆಚ್ಚಿನ ದರ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂದು ಸಂಜೆ ಹೊತ್ತಿಗೆ ತಜ್ಞರ ಸಮಿತಿಯಿಂದ ವರದಿ ತರಿಸಿಕೊಂಡು ಬೆಂಗಳೂರು ತಲುಪಿದ ಕೂಡಲೇ ದರ ನಿಗಿದಿ ಮಾಡಲಾಗುವುದು ಎಂದರು.
ಕರೊನಾ ಸೋಂಕಿತರ ಪ್ರಮಾಣ ಏರಿಕೆ ಆದಂತೆ ಸಿಟಿ ಸ್ಕ್ಯಾನ್ ಮಾಡಿಸಲಾಗುತ್ತಿದೆ. ಇದರಲ್ಲಿ ಖಾಸಗಿಯವರಿಗೆ ದುಡ್ಡು ಮಾಡಿಕೊಳ್ಳಲು ಅವಕಾಶ ಕೊಡಲ್ಲ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಸಚಿವ ಸುಧಾಕರ ಹೇಳಿದರು.
ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ
ನಗರಸಭೆ ಚುನಾವಣೆ: ಅತೀ ಹೆಚ್ಚು ಮತ ಪಡೆದು ಗೆದ್ದಾಕೆ ಬದುಕೇ ಇಲ್ಲ! ಮತ ಎಣಿಕೆ ಮುನ್ನಾ ದಿನವೇ ಕರೊನಾಗೆ ಬಲಿ