More

    ಯುವ ನಿರ್ದೇಶಕನ ಜತೆ ಹಿರಿಯ ನಟ ಪ್ರಭು ಪುತ್ರಿಯ 2ನೇ ಮದ್ವೆ! ಕಾಲಿವುಡ್​ನಲ್ಲೀಗ 500 ಕೋಟಿಯದ್ದೇ ಚರ್ಚೆ

    ಚೆನ್ನೈ: ತಮಿಳು ಚಿತ್ರರಂಗದಲ್ಲಿ 1980-90ರ ದಶಕದಲ್ಲಿ ಬಹು ಬೇಡಿಕೆಯ ನಟನಾಗಿ ಮಿಂಚಿದ ನಟ ಪ್ರಭು ಅವರು ಇತ್ತೀಚಗಷ್ಟೇ ತಮ್ಮ ಮಗಳು ಐಶ್ವರ್ಯಾಗೆ ಬಹಳ ಸರಳವಾಗಿ ಎರಡನೇ ಮದುವೆ ಮಾಡಿಕೊಟ್ಟರು. ಯುವ ನಿರ್ದೇಶಕ ಅಧಿಕ್​ ರವಿಚಂದ್ರನ್​ ಜತೆ ಐಶ್ವರ್ಯಾ ಸಪ್ತಪದಿ ತುಳಿದಿದ್ದು, ಇಬ್ಬರ ಮದುವೆ ವಿಚಾರ ಇದೀಗ ಸಖತ್​ ಸುದ್ದಿ ಮಾಡುತ್ತಿದೆ.

    ಈ ಅಧಿಕ್​ ರವಿಚಂದ್ರನ್​ ಯಾರು ಎಂಬುದನ್ನು ಮೊದಲ ತಿಳಿಸಿಬಿಡುತ್ತೇನೆ. ಇತ್ತೀಚೆಗಷ್ಟೇ ಸ್ಟಾರ್​ ನಟ ವಿಶಾಲ್​ ಮತ್ತು ಎಸ್​ಜೆ ಸೂರ್ಯ ನಟನೆಯ ಮಾರ್ಕ್​ ಆ್ಯಂಟೋನಿ ಸಿನಿಮಾ ಕಾಲಿವುಡ್​ನಲ್ಲಿ ಬಿಡುಗಡೆಯಾಯಿತು. ಟೈಮ್​ ಟ್ರಾವೆಲ್​ ಕುರಿತ ಈ ಸಿನಿಮಾ ಸಖತ್​ ಹಿಟ್​ ಆಯಿತು. ತಮಿಳು ಬಾಕ್ಸ್​ ಆಫೀಸ್​ನಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತು. ಈ ಸಿನಿಮಾದ ನಿರ್ದೇಶಕರೇ ಈ ಅಧಿಕ್​ ರವಿಚಂದ್ರನ್​. ಅಂದಹಾಗೆ ಅಧಿಕ್​ ಮತ್ತು ಐಶ್ವರ್ಯಾ ನಡುವೆ ಭಾರಿ ವಯಸ್ಸಿನ ಅಂತರವಿದೆ. ಅಧಿಕ್​ ವಯಸ್ಸು 32 ಮತ್ತು ಐಶ್ವರ್ಯಾ ವಯಸ್ಸು 42 ವರ್ಷ ಎಂದು ಮೂಲಗಳು ತಿಳಿಸಿವೆ.

    Adhik 1

    ಇದೀಗ ತಮಿಳುನಾಡಿನ ಹಿರಿಯ ಪತ್ರಕರ್ತ ಹಾಗೂ ಸಿನಿಮಾ ವಿಮರ್ಶಕ ಚೆಯ್ಯರು ಬಾಲು ಅವರು ಸ್ಫೋಟಕ ಸಂಗತಿಯನ್ನು ಹೊರಗೆಡವಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಬಾಲು ಅವರು ಐಶ್ವರ್ಯಾರನ್ನು ಮದುವೆಯಾಗಲು ಅಧಿಕ್​ ಅವರು ಒಂದೇ ಒಂದು ಷರತ್ತು ಹಾಕಿದ್ದರು ಎಂದು ಹೇಳಿದ್ದಾರೆ. ಆ ಷರತ್ತು ಏನೆಂದರೆ, ಮದುವೆ ಬಹಳ ಸರಳವಾಗಿ ನಡೆಯಬೇಕು ಎಂಬುದು. ಆದರೆ, ಪ್ರಭು ಅವರಿಗೆ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಡುವ ಆಸೆ ಇತ್ತೆಂದು ತಿಳಿದುಬಂದಿದೆ.

    ಮದುವೆ ವಿಚಾರ ಒಂದೆಡೆಯಾದರೆ, ಇದೀಗ ವರದಕ್ಷಿಣೆ ವಿಚಾರ ಕಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಪ್ರಭು ಅವರ ಕುಟುಂಬ ಅಧಿಕ್​ಗೆ ಬರೋಬ್ಬರಿ 500 ಕೋಟಿ ರೂ. ವರದಕ್ಷಿಣೆ ನೀಡಿದೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಅಸಲಿಗೆ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇ ಚೆಯ್ಯರು ಬಾಲು. ಇದು ಎಷ್ಟು ಸತ್ಯ? ಮತ್ತು ಸುಳ್ಳು? ಎಂಬುದನ್ನು ಸ್ವತಃ ಪ್ರಭು ಅಥವಾ ಅಧಿಕ್​ ಬಹಿರಂಗಪಡಿಸಬೇಕಿದೆ. ಸದ್ಯ 500 ಕೋಟಿ ರೂ. ವರದಕ್ಷಿಣೆ ಸಂಗತಿ ಮಾತ್ರ ಭಾರಿ ಚರ್ಚೆಯಾಗುತ್ತಿದೆ.

    Adhik 2

    ಅಂದಹಾಗೆ ಅಧಿಕ್​ ಮತ್ತು ಐಶ್ವರ್ಯಾ ಮದುವೆ ಡಿ. 15ರಂದು ಸರಳವಾಗಿ ನಡೆಯಿತು. ಈ ಮದುವೆಗೆ ಸೂಪರ್​ಸ್ಟಾರ್​ ರಜಿನಿಕಾಂತ್​, ಸೂರ್ಯ ಹಾಗೂ ವಿಶಾಲ್​ ಸೇರಿದಂತೆ ತಮಿಳು ಚಿತ್ರರಂಗದ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಐಶ್ವರ್ಯಾಗೆ 2008ರಲ್ಲೇ ಸಾಫ್ಟ್​ವೇರ್​ ಇಂಜಿನಿಯರ್​ ಜತೆ ಮದುವೆಯಾಗಿತ್ತು. ಆದರೆ, ಮನಸ್ತಾಪಗಳ ಕಾರಣದಿಂದ ಇಬ್ಬರು ಡಿವೋರ್ಸ್​ ಪಡೆದರು. ಅಮೆರಿಕದಲ್ಲಿ ಅಧಿಕ್​ ಅವರನ್ನು ಭೇಟಿಯಾದ ಬಳಿಕ ಇಬ್ಬರ ನಡುವೆ ಪ್ರೇಮ ಚಿಗುರಿತು ಎನ್ನಲಾಗಿದೆ.

    ಇನ್ನು ಅಧಿಕ್​ ವಿಚಾರಕ್ಕೆ ಬಂದರೆ, ಕಾಲಿವುಡ್​ನಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅಜಿತ್​ ಅವರ 63ನೇ ಚಿತ್ರಕ್ಕೆ ಅಧಿಕ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. (ಏಜೆನ್ಸೀಸ್​)

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಶಮಿಗೆ ಒಲಿದ ಅರ್ಜುನ ಪ್ರಶಸ್ತಿ, ಬ್ಯಾಡ್ಮಿಂಟನ್​ ತಾರೆಗಳಿಬ್ಬರಿಗೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಗೌರವ

    ಚಳಿಗಾಲದಲ್ಲಿ ಪ್ರತಿದಿನ ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಮಲಗ್ತೀರಾ? ಇಲ್ಲಿದೆ ಉಪಯುಕ್ತ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts