More

    ಚಳಿಗಾಲದಲ್ಲಿ ಪ್ರತಿದಿನ ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಮಲಗ್ತೀರಾ? ಇಲ್ಲಿದೆ ಉಪಯುಕ್ತ ಮಾಹಿತಿ…

    ಹೊಳೆಯುವ ಮುಖ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸಾವಿರಾರು ರೂಪಾಯಿಯನ್ನು ಖರ್ಚು ಮಾಡುವವರಿದ್ದಾರೆ. ಅದರಲ್ಲೂ ಚಳಿಗಾಲದಲ್ಲಿ ಶುಷ್ಕ ಚರ್ಮವೇ ಒಂದು ದೊಡ್ಡ ಸಮಸ್ಯೆ. ಯಾವಾಗಲೂ ಚರ್ಮವನ್ನು ಮಾಯಿಶ್ಚರೈಸರ್​ ಆಗಿಡಲು ದುಬಾರಿ ಕ್ರೀಮ್​ಗಳನ್ನು ಸಹ ಬಳಕೆ ಮಾಡುತ್ತಿದ್ದಾರೆ. ಆದರೆ, ಹಣದ ಕೊರತೆ ಎದುರಿಸುವವರು ಸುಲಭವಾಗಿ ದೊರೆಯುವ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಇದು ಚರ್ಮಕ್ಕೆ ಒಳ್ಳೆಯದೇ ಎಂಬುದರ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.

    ಈ ಚಳಿಗಾಲದಲ್ಲಿ ಮಲಗುವ ಮುನ್ನ ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಎರಡೂ ಕೈಗಳ ನಡುವೆ ಇಟ್ಟು ಚೆನ್ನಾಗಿ ಉಜ್ಜಿ, ಸ್ವಲ್ಪ ಬಿಸಿಯಾದ ನಂತರ, ನಿಮ್ಮ ಕೈಗಳನ್ನು ನಿಮ್ಮ ಮುಖದ ಮೇಲೆ ಇರಿಸಿ ಮತ್ತು ಮೃದುವಾಗಿ ಮಸಾಜ್ ಮಾಡಿ. ಪ್ರತಿದಿನ ರಾತ್ರಿ ಈ ರೀತಿ ಮಸಾಜ್ ಮಾಡುವುದರಿಂದ ರಾತ್ರಿಯಿಡೀ ನಿಮ್ಮ ಮುಖವು ತೇವಾಂಶದಿಂದ ಕೂಡಿರುತ್ತದೆ.

    ತೆಂಗಿನಎಣ್ಣೆಯಲ್ಲಿ ಫ್ಯಾಟಿ ಆ್ಯಸಿಡ್​ಗಳು ಮತ್ತು ಆ್ಯಂಟಿಆಕ್ಸಿಡೆಂಟ್​ಗಳು ಸಮೃದ್ಧವಾಗಿವೆ. ರಾತ್ರಿ ತೆಂಗಿನ ಎಣ್ಣೆ ಹಚ್ಚುವುದರಿಂದ ಎಲ್ಲವನ್ನು ನಮ್ಮ ಚರ್ಮ ಹೀರಿಕೊಳ್ಳುತ್ತದೆ. ಇದು ಯಾವುದೇ ಕಾರಣಕ್ಕೂ ಮೊಡವೆಗಳಿಗೆ ಕಾರಣವಾಗುವುದಿಲ್ಲ. ಮಸಾಜ್​ ಮಾಡುವುದರಿಂದ ಮುಖದಲ್ಲಿ ರಕ್ತಪರಿಚಲನೆ ಸರಾಗವಾಗುತ್ತದೆ. ಇದರಿಂದ ಮುಖದ ಚರ್ಮ ನೈಸರ್ಗಿಕವಾಗಿ ಹೊಳೆಯುತ್ತದೆ.

    ಯಾರು ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೋ ಅಂಥವರು ತೆಂಗಿನ ಎಣ್ಣೆಯನ್ನು ರಾತ್ರಿಯಲ್ಲಿ ಖಂಡಿತವಾಗಿ ಬಳಸಬೇಕು. ಇದು ಚರ್ಮವನ್ನು ಆಳದಿಂದ ತೇವಗೊಳಿಸುತ್ತದೆ. ಏಕೆಂದರೆ ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಇದಲ್ಲದೆ, ಇದು ಯಾವುದೇ ಕೃತಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ.

    ಇನ್ನು ತೆಂಗಿನ ಎಣ್ಣೆಯಲ್ಲಿ ಉರಿಯೂತ ವಿರೋಧಿ ಅಂಶಗಳಿವೆ. ಹೀಗಾಗಿ ಮೊಡವೆಯಿಂದಾಗುವ ಊತವನ್ನು ಕಡಿಮೆ ಮಾಡುತ್ತದೆ. ಮೊಡವೆಗಳ ನಿಯಂತ್ರಣ ಮತ್ತು ಮೊಡವೆ ಗಾಯದ ಕಲೆಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ, ಬ್ಲ್ಯಾಕ್​ಹೆಡ್ಸ್​, ವೈಟ್​ಹೆಡ್ಸ್​ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.

    ಶೇ. 20 ರಷ್ಟು ಅಲ್ಟ್ರಾವೈಲೆಟ್​ ಕಿರಣಗಳನ್ನು ತಡೆಯುವ ಶಕ್ತಿ ತೆಂಗಿನ ಎಣ್ಣೆಗಿದೆ. ಆದ್ದರಿಂದ ಇದು ಬೇಗ ವಯಸ್ಸಾದಂತೆ ಕಾಣುವ ಸಮಸ್ಯೆಯನ್ನು ತಡೆಯುವತ್ತದೆ. ಅಲ್ಲದೆ, ತೆಂಗಿನಎಣ್ಣೆಯನ್ನು ನೈಸರ್ಗಿಕ ಮೇಕಪ್ ರಿಮೂವರ್ ಆಗಿಯೂ ಬಳಸಬಹುದು. ಇದು ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಇಷ್ಟೆಲ್ಲಾ ಲಾಭಗಳು ತೆಂಗಿನ ಎಣ್ಣೆಯಲ್ಲಿದೆ. (ಏಜೆನ್ಸೀಸ್​)

    ದಕ್ಷಿಣ ಕನ್ನಡದ ಹೆಸರಾಂತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಗೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

    ನಾಯಕತ್ವದಿಂದ ರೋಹಿತ್​ ಶರ್ಮಾಗೆ ಕೊಕ್; ಮುಂಬೈ ಇಂಡಿಯನ್ಸ್​ ಕೊಟ್ಟ ಸ್ಪಷ್ಟನೆ ಹೀಗಿತ್ತು

    ದೊಡ್ಡ ಸಂಖ್ಯೆಯಲ್ಲಿ ಸಂಸದರ ಅಮಾನತು ಇದೇ ಮೊದಲೇನಲ್ಲ: ಹಿಂದೆಯೂ ಈ ರೀತಿ ಆಗಿದ್ದು ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts