More

    3 ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದವ ರೈತ ಹೋರಾಟಕ್ಕೆ ಬಲಿಯಾದ!

    ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧದ ರೈತ ಹೋರಾಟವು ಮಂಗಳವಾರದಂದು ಉಗ್ರ ರೂಪ ತಾಳಿ ಸಾಕಷ್ಟು ಹಿಂಸಾಚಾರ ನಡೆದಿದೆ. ಈ ಹೋರಾಟದಲ್ಲಿ ಓರ್ವ ಹೋರಾಟಗಾರ ಮೃತನಾಗಿದ್ದಾನೆ. ಮೃತನಾದ ಹೋರಾಟಗಾರ ಮೂರು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದ ಎಂದು ಇದೀಗ ಮಾಹಿತಿ ಸಿಕ್ಕಿದೆ.

    ಇದನ್ನೂ ಓದಿ: ಗಂಡನ ಫೋನಲ್ಲಿ ತನ್ನದೇ ಫೋಟೋ ಕಂಡು ಗಂಡನ ಕೊಲೆ ಮಾಡಲು ಹೊರಟ ಹೆಂಡತಿ!

    ಉತ್ತರ ಪ್ರದೇಶದ ದಿಬ್ಡಿಯಾ ಗ್ರಾಮದ ನವೃತ್​ ಸಿಂಗ್​(27) ಮೃತನಾದ ವ್ಯಕ್ತಿ. ಆತ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ. ಮಂಗಳವಾರದಂದು ಆತನೂ ತನ್ನ ಸ್ನೇಹಿತರ ಜತೆ ಸೇರಿ ದೆಹಲಿಗೆ ಬಂದಿದ್ದಾನೆ. ರೈತ ಹೋರಾಟದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸದೆಯೇ ಮನೆಯಿಂದ ಹೊರಟು ಬಂದಿದ್ದಾನೆ. ದೆಹಲಿಯಲ್ಲಿ ಆತನಿದ್ದ ಟ್ರ್ಯಾಕ್ಟರ್​ ಪಲ್ಟಿ ಹೊಡೆದಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ನನ್ನ ಮಗ ರೈತ ಹೋರಾಟಕ್ಕೆ ಹೋಗುತ್ತಿದ್ದಾನೆ ಎನ್ನುವುದು ನಮಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವನನ್ನು ಕಳುಹಿಸುತ್ತಿರಲಿಲ್ಲ. ಅವನ ಸ್ನೇಹಿತರು ಆತನನ್ನು ಕರೆದೊಯ್ದಿದ್ದಾರೆ ಎಂದು ಮೃತನ ಕುಟುಂಬ ದೂರಿದೆ.

    ಇದನ್ನೂ ಓದಿ: ‘ಕೃಷಿ ಕಾಯ್ದೆಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ’ ಐಎಂಎಫ್​ ಅಭಿಮತ

    ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ 80ಕ್ಕೂ ಹೆಚ್ಚು ಪೊಲೀಸರು ಹಾಗೂ ಕೆಲ ರೈತ ಹೋರಾಟಗಾರರು ಗಾಯಾಳುಗಳಾಗಿದ್ದಾರೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ನಡೆದ ದಾಳಿಯಿಂದಾಗಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ. (ಏಜೆನ್ಸೀಸ್​)

    ರೈತರ ಹೆಸರಲ್ಲಿ ಹಿಂಸೆಗಿಳಿದರು, ತಮ್ಮ ಧ್ವಜ ಹಾರಿಸಿದರು, ಹಲ್ಲೆ ಮಾಡಿದರು- ಏಳು ಮಂದಿ ವಿರುದ್ಧ ಎಫ್‌ಐಆರ್‌

    ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts