More

    ಎಸ್ಟಿ ಮೀಸಲಾತಿ ಸೌಲಭ್ಯ ಪಡೆಯಿರಿ

    ಅಥಣಿ, ಬೆಳಗಾವಿ : ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಸರ್ಕಾರ ಎಸ್ಟಿ ಮೀಸಲಾತಿ ಸೌಲಭ್ಯ ನೀಡಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಇಲ್ಲಿನ ನಿರೀಕ್ಷಣಾ ಮಂದಿರಲ್ಲಿ ಶುಕ್ರವಾರ ತಳವಾರ ಮತ್ತು ಪರಿವಾರ ಸಮುದಾಯದವರಿಗೆ ಸಾಂಕೇತಿಕವಾಗಿ ಜಾತಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ, ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್ಟಿ ಜಾತಿ ಪ್ರಮಾಣಪತ್ರ ವಿತರಿಸಬೇಕು ಎಂದಿದ್ದಾರೆ. ಹಲವು ವರ್ಷಗಳಿಂದ ಪ್ರವರ್ಗ 1ರಿಂದ ಎಸ್ಟಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಹೋರಾಡಿದ್ದರ ಲವಾಗಿ ಸಮುದಾಯದ ಕನಸು ನನಸಾಗಿದೆ. ತಹಸೀಲ್ದಾರ್ ನೀಡುವ ಪ್ರಮಾಣಪತ್ರವು ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುತ್ತದೆ ಎಂದರು. ಅಖಿಲ ಕರ್ನಾಟಕ ನಾಯಿಕ ತಳವಾರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಗೊಂಡ ಜಂಗಿ ಮಾತನಾಡಿ, ಎಸ್ಟಿ ಮೀಸಲಾತಿ ದೊರೆತಿರುವುದರಿಂದ ಸಮುದಾಯದ ಸ್ವಾವಲಂಬನೆಗೆ ದಾರಿಯಾಗುತ್ತದೆ ಎಂದರು. ನಿಂಗಪ್ಪ ನಂದೇಶ್ವರ, ಭರಮಪ್ಪ ಹಕ್ಕಿ, ರಾಜು ಪೂಜಾರಿ, ವಿಶ್ವನಾಥ ಖೆಮಲಾಪುರ, ಮಹಾದೇವ ನಾಯಿಕ, ಅನಿಲ ನಂದೇಶ್ವರ, ಮಾಳಪ್ಪ ಹಕ್ಕಿ, ಮುತ್ತುರಾಜ ತುಬಚಿ, ಈಶ್ವರ ಚಿಪ್ಪಾಡಿ, ಸಿದ್ದಪ್ಪ ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts