ಮೈಸೂರು: ಪೊಲೀಸ್ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ನಗರದ ಸುಣ್ಣದ ಕೇರಿ ನಿವಾಸಿ ಕುಮಾರ್ ಎಂಬುವವರ ಪುತ್ರ ದರ್ಶನ್ (17) ಮೃತ ದುರ್ದೈವಿ. ಕೆ.ಆರ್.ಠಾಣಾ ಪೊಲೀಸರು ಕಿರುಕುಳ ನೀಡಿದ್ದಕ್ಕೆ ದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 59 ಆ್ಯಪ್ ನಿಷೇಧ- ಚೀನಾದ ಪ್ರತಿಕ್ರಿಯೆ ಏನು ಗೊತ್ತಾ?
ತಪಾಸಣೆ ವೇಳೆ ಸ್ಕೂಟರ್ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರದಿದ್ದಕ್ಕೆ ಪೊಲೀಸರು ದರ್ಶನ್ ಜತೆಗೆ ಬೈಕ್ ವಶಕ್ಕೆ ಪಡೆದಿದ್ದರು. ಆತನ ಜತೆಗಿದ್ದ ಸ್ನೇಹಿತ ರವಿ ಎಂಬಾತನನ್ನು ಮನೆಗೆ ಕಳುಹಿಸಿದ್ದರು. ಬಳಿಕ ದರ್ಶನ್ಗೆ ಪೊಲೀಸರು ಹಿಗ್ಗಾಮಗ್ಗಾ ಥಳಿಸಿದ್ದಾರೆ ಎಂದು ದೂರಲಾಗಿದೆ.
ಅವಮಾನ ಸಹಿಸಲಾಗದೆ ಮನೆಗೆ ಬಂದು ಸ್ನಾನದ ಕೊಠಡಿಯಲ್ಲಿ ದರ್ಶನ್ ಆತ್ಮಹತ್ಯೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಕೆ.ಆರ್. ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಕೋವಿಡ್ಗೆ ಭಾರತದಲ್ಲಿ ಸಿದ್ಧವಾಗಿದೆ ಕೊವಾಕ್ಸಿನ್ ಚುಚ್ಚುಮದ್ದು, ನಾಳೆಯಿಂದ ಮಾನವರ ಮೇಲೆ ಪ್ರಯೋಗ