ತಾಯಿಯ ತಾಳಿ ಕಿತ್ತ ಯುವಕರ ಗುಂಪು: ಮನನೊಂದು ನೇಣಿಗೆ ಶರಣಾದ ಯುವಕ

ಮೈಸೂರು: ಮನೆಗೆ ನುಗ್ಗಿ ಗಲಾಟೆ ನಡೆಸಿದ್ದಲ್ಲದೆ, ತಾಯಿಯ ತಾಳಿಯನ್ನು ಕಿತ್ತುಹಾಕಿ ಅವಮಾನಿಸಿದ್ದಕ್ಕೆ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ನಿವಾಸಿ ಬಾಲರಾಜ್(23) ಮೃತ ಯುವಕ. ಬಾಲರಾಜ್ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ನಾಲ್ವರು ಯುವಕರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ತಾಯಿಯ ತಾಳಿ ಕಿತ್ತುಹಾಕಿ ಅವಮಾನ ಮಾಡಿದ್ದರು. ಯಾವ ವಿಚಾರಕ್ಕೆ ಗಲಾಟೆ ಮಾಡಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ, ಬಾಲರಾಜ್​ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಇದನ್ನೂ ಓದಿ: … Continue reading ತಾಯಿಯ ತಾಳಿ ಕಿತ್ತ ಯುವಕರ ಗುಂಪು: ಮನನೊಂದು ನೇಣಿಗೆ ಶರಣಾದ ಯುವಕ