ಮೈಸೂರು: ಮನೆಗೆ ನುಗ್ಗಿ ಗಲಾಟೆ ನಡೆಸಿದ್ದಲ್ಲದೆ, ತಾಯಿಯ ತಾಳಿಯನ್ನು ಕಿತ್ತುಹಾಕಿ ಅವಮಾನಿಸಿದ್ದಕ್ಕೆ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ನಿವಾಸಿ ಬಾಲರಾಜ್(23) ಮೃತ ಯುವಕ. ಬಾಲರಾಜ್ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ನಾಲ್ವರು ಯುವಕರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ತಾಯಿಯ ತಾಳಿ ಕಿತ್ತುಹಾಕಿ ಅವಮಾನ ಮಾಡಿದ್ದರು. ಯಾವ ವಿಚಾರಕ್ಕೆ ಗಲಾಟೆ ಮಾಡಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ, ಬಾಲರಾಜ್ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಇದನ್ನೂ ಓದಿ: ಚೀನಾಗೆ ಬೀಳಲಿದೆ ಮತ್ತೊಂದು ಹೊಡೆತ; ಆ್ಯಪ್ಗಳ ಬಳಿಕ 5ಜಿ ಉಪಕರಣಗಳ ಬ್ಯಾನ್ಗೂ ಸಿದ್ಧತೆ
ಬಳಿಕ ಪೊಲೀಸರು ಯುವಕರನ್ನು ಕರೆಸಿ ರಾಜಿ ಮಾಡಿ ಕಳುಹಿಸಿದ್ದರು. ಗ್ರಾಮಕ್ಕೆ ಹಿಂದಿರುಗಿದ ಬಳಿಕ ನಮ್ಮನ್ನು ಏನೂ ಮಾಡಲು ಆಗಲಿಲ್ಲ ಎಂದು ಯುವಕರ ಗುಂಪು ಬಾಲರಾಜ್ನನ್ನು ರೇಗಿಸಿತ್ತು. ಇದರಿಂದ ಮನನೊಂದ ಬಾಲರಾಜ್ ದೇವಸ್ಥಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿರುವ ಬಾಲರಾಜ್, ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ತುಮಕೂರಿಗೆ ವಧು ನೋಡಲು ಹೋದ ಮೂರು ಗ್ರಾಮಸ್ಥರು ಸೋಂಕಿನೊಂದಿಗೆ ವಾಪಸ್!
ಈ ಫೋಟೋದಲ್ಲಿರುವುದು ಫ್ರೈಡ್ ಚಿಕನ್ ಪೀಸ್ ಅಲ್ಲ…ಇದೊಂದು ವಿಸ್ಮಯ..!