More

    ಅಪಘಾತವಾಗಿ ಒಂದು ಗಂಟೆಯಾದ್ರೂ ಬಾರದ ಆಂಬ್ಯುಲೆನ್ಸ್: ರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಯುವಕ

    ಹಾಸನ: ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೇ ಅಪಘಾತಕ್ಕೀಡಾಗಿದ್ದ ಯುವಕ ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಹಾಸನ ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಗುರುವಾರ (ಮೇ 11) ತಡರಾತ್ರಿ ನಡೆದಿದೆ.

    ಮೃತಪಟ್ಟ ಯುವಕನನ್ನು ಆನಂದ್ (30) ಎಂದು ಗುರುತಿಸಲಾಗಿದೆ. ಈತ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ನಿವಾಸಿ. ಬೇಲೂರು ಕಡೆಯಿಂದ ಹಾಸನದ ಕಡೆಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ವಾಹನವೊಂದು ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿ: ಏಕಕಾಲದಲ್ಲಿ ಮೂರು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಮೂರು IPL ಪಂದ್ಯಗಳು! ಹೆಚ್ಚಾಗುತ್ತಿದೆ RR ಜನಪ್ರಿಯತೆ

    ಅಪಘಾತದ ಬಳಿಕ ಆಂಬ್ಯುಲೆನ್ಸ್​ಗೆ ಕರೆ ಮಾಡಿದರೂ ಸರಿಯಾದ ಸಮಯಕ್ಕೆ ಬಾರದಿದ್ದರಿಂದ ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

    ಆದಿಪುರುಷ್​ ಸಿನಿಮಾ ವಿವಾದ; ಚಿತ್ರ ಬಿಡುಗಡೆಗೆ ಮುನ್ನವೇ ದೂರು ದಾಖಲು

    ಎಲೆಕ್ಷನ್​ ಬೆಟ್ಟಿಂಗ್​ಗೂ ಶುರುವಾಯ್ತು ಕರಾರು ಪತ್ರ!

    ಫಲಿತಾಂಶಕ್ಕೂ ಮುನ್ನ ಕೈ ಅಭ್ಯರ್ಥಿಗಳಿಗೆ ನಾಯಕರಿಂದ ಎಚ್ಚರಿಕೆ ಪಾಠ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts