ಬೆಂಗಳೂರು: ನಿನ್ನೆ (ಏ.10) ರಾತ್ರಿ ಬಿಜೆಪಿ ತನ್ನ ಮೊಟ್ಟ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಬಹುಕಾಲದ ನಿರೀಕ್ಷೆಗೆ ತೆರೆಬಿದ್ದಿದೆ. ಪಟ್ಟಿ ಬಿಡುಗಡೆ ಆಗಿದ್ದೇ ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಈ ಬಿಎಸ್ ಯಡಿಯೂರಪ್ಪ ಸೈಡ್ಲೈನ್ ಆಗಿದ್ದಾರೆ ಎನ್ನುತ್ತಿದ್ದವರಿಗೆ ಸ್ಪಷ್ಟ ತಿರುಗೇಟು ಸಿಕ್ಕಿದೆ ಎಂದೇ ಹೇಳಬಹುದು.
ಬಿಎಸ್ ಯಡಿಯೂರಪ್ಪ ಮೇಲುಗೈ!
ಈ ಬಾರಿಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದು ಬಹುತೇಕ ಎಲ್ಲಾ ಯಡಿಯೂರಪ್ಪ ಬೆಂಬಲಿಗರಿಗೆ ಹೈಕಮಾಂಡ್ ಮಣೆ ಹಾಕಿದೆ ಎಂದೇ ಹೇಳಬಹುದು. ರೇಣುಕಾಚಾರ್ಯ, ನಾಯಾರಾಣ ಗೌಡ, ಹಾಲಪ್ಪ ಆಚಾರ್, ವಿಜಯೇಂದ್ರ, ಮಂಗೋಟೆ ರುದ್ರೇಶ್, ಮುಂತಾದವರಿಗೆ ಈ ಬಾರಿ ಟಿಕೆಟ್ ಸಿಕ್ಕಿದೆ. ಈ ನಡುವೆ ಈಶ್ವರಪ್ಪ ಕೂಡ ಚುನಾವಣೆಯಿಂದ ನಿವೃತ್ತಿ ಪಡೆದಿದ್ದು ಜಗದೀಶ್ ಶೆಟ್ಟರ್ಗೂ ಟಿಕೆಟ್ ಭರವಸೆ ಸಿಕ್ಕಿಲ್ಲ. ಹಾಲಿ ಶಾಸಕರ ಜೊತೆಯಲ್ಲಿ ಹೊಸಬರಿಗೂ ಹೈಕಮಾಂಡ್ ಟಿಕೆಟ್ ನೀಡಿದ್ದು ಈ ಬಾರಿ ಯಡಿಯೂರಪ್ಪ ದೊಡ್ಡ ಮಟ್ಟದಲ್ಲಿ ಬೆಂಬಲಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಅನೇಕರಿಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದು ಯಡಿಯೂರಪ್ಪ ಮಾತಿಗೆ ಹೈಕಮಾಂಡ್ ಮನ್ನಣೆ ನೀಡಿದೆ ಎಂದೇ ಹೇಳಬಹುದು. ಈ ಮೂಲಕ ಯಡಿಯೂರಪ್ಪ ಸೈಡ್ ಲೈನ್ ಅಂದವರಿಗೆ ತಿರುಗೇಟು ಸಿಕ್ಕಿದೆ. ಅದಲ್ಲದೇ ಈ ಬಾರಿ ಯಡಿಯೂರಪ್ಪ ವಿರುದ್ಧ ನಿಲ್ಲುತ್ತಿದ್ದವರು ಸೈಡ್ ಲೈನ್ ಆಗಿದ್ದು ಇದು ರಾಜಕೀಯ ಗೆಲುವು ಎಂದೇ ಹೇಳಬಹುದು. (ಏಜೆನ್ಸೀಸ್)