More

    ಗುರುದ್ವಾರದಲ್ಲಿ ಮದ್ಯ ಸೇವಿಸಿದ್ದಕ್ಕೆ ಮಹಿಳೆಯ ಪ್ರಾಣ ತೆಗೆದ ಭಕ್ತರು

    ಅಮೃತಸರ: ಗುರುದ್ವಾರದ ಆವರಣದಲ್ಲಿ ಮಹಿಳೆ ಒಬ್ಬರು ಮದ್ಯ ಸೇವಿಸಿದ ಕಾರಣ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಟಿಯಾಲದ ಗುರುದ್ವಾರದಲ್ಲಿ ನಡೆದಿದೆ.

    ಮೃತ ಮಹಿಳೆ ಹೆಸರಿ ಪರ್ಮಿಂದರ್​ ಕೌರ್(32)​ ಎಂದು ತಿಳಿದು ಬಂದಿದ್ದು ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಸರೋವರದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಗುಂಡಿಕ್ಕಿ ಹತ್ಯೆ

    ಮೃತ ಮಹಿಳೆ ಪರ್ಮಿಂದರ್​ ಕೌರ್​ ಗುರುದ್ವಾರದ ಆವರಣದಲ್ಲಿರುವ ಸರೋವರದ ಬಳಿ ಮದ್ಯ ಸೇವಿಸುತ್ತಿದ್ದನ್ನು ಗಮನಿಸಿದ ನಿರ್ಮಲ್​ಜಿತ್​ ಸಿಂಗ್ ಸೈನಿ​ ಎಂಬ ವ್ಯಕ್ತಿಯೂ ಹಲವು ಭಾರಿ ಆಕೆಯ ಮೇಲೆ ಗುಂಡು ಹಾರಿಸಿದ್ಧಾನೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವರುಣ್​ ಶರ್ಮಾ ಮಹಿಳೆ ಮೇಲೆ ಆರೋಪಿ ಐದು ಭಾರಿ ಗುಂಡು ಹಾರಿಸಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

    Suspects

    ಸಿಟ್ಟಿನಲ್ಲಿ ಕೃತ್ಯ

    ಮಹಿಳೆ ಗುರುದ್ವಾರದ ಆವರಣದಲ್ಲಿರುವ ಸರೋವರದಲ್ಲಿ ಮದ್ಯ ಸೇವಿಸುತ್ತಿರುವುದನ್ನು ಗಮನಿಸಿದ ನಿರ್ಮಲ್​ ಸಿಂಗ್​ ಸೈನಿ ಹಾಗೂ ಕೆಲವು ಭಕ್ತಾದಿಗಳು ಮಹಿಳೆಯನ್ನು ಹಿಡಿದು ಆಡಳಿತ ಮಂಡಳಿಗೆ ಒಪ್ಪಿಸಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಬಿಎಂಟಿಸಿ ಬಸ್ ಬ್ರೇಕ್​ ಫೇಲ್ಯೂರ್​​​; ಮುಂಬದಿ ನಿಂತಿದ್ದ ವಾಹನಗಳು ಜಖಂ

    ಈ ವೇಳೆ ಸಿಟ್ಟಿಗೆದ್ದ ಆರೋಪಿ ನಿರ್ಮಲ್​ ಸಿಂಗ್​ ಮಹಿಳೆ ಮೇಲೆ ತನ್ನ ಬಳಿ ಇದ್ದ್ ಗನ್​ನಿಂದ ಐದಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ಧಾನೆ. ಮಹಿಳೆಯ ಜೊತೆ ಇನ್ನೋರ್ವರಿಗೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್​ ಆಗಿರುವ ಆರೋಪಿ ನಿರ್ಮಲ್​ ಸಿಂಗ್ ಯಾವುದೇ ಕ್ರಿಮಿನಲ್​ ಹಿನ್ನಲೆಯನ್ನು ಹೊಂದಿಲ್ಲ.​ ಆತನ ಬಳಿ ಇದ್ದ ಗನ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವರುಣ್​ ಶರ್ಮಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts