ಅಮೃತಸರ: ಗುರುದ್ವಾರದ ಆವರಣದಲ್ಲಿ ಮಹಿಳೆ ಒಬ್ಬರು ಮದ್ಯ ಸೇವಿಸಿದ ಕಾರಣ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಟಿಯಾಲದ ಗುರುದ್ವಾರದಲ್ಲಿ ನಡೆದಿದೆ.
ಮೃತ ಮಹಿಳೆ ಹೆಸರಿ ಪರ್ಮಿಂದರ್ ಕೌರ್(32) ಎಂದು ತಿಳಿದು ಬಂದಿದ್ದು ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಸರೋವರದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಗುಂಡಿಕ್ಕಿ ಹತ್ಯೆ
ಮೃತ ಮಹಿಳೆ ಪರ್ಮಿಂದರ್ ಕೌರ್ ಗುರುದ್ವಾರದ ಆವರಣದಲ್ಲಿರುವ ಸರೋವರದ ಬಳಿ ಮದ್ಯ ಸೇವಿಸುತ್ತಿದ್ದನ್ನು ಗಮನಿಸಿದ ನಿರ್ಮಲ್ಜಿತ್ ಸಿಂಗ್ ಸೈನಿ ಎಂಬ ವ್ಯಕ್ತಿಯೂ ಹಲವು ಭಾರಿ ಆಕೆಯ ಮೇಲೆ ಗುಂಡು ಹಾರಿಸಿದ್ಧಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ಮಹಿಳೆ ಮೇಲೆ ಆರೋಪಿ ಐದು ಭಾರಿ ಗುಂಡು ಹಾರಿಸಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಸಿಟ್ಟಿನಲ್ಲಿ ಕೃತ್ಯ
ಮಹಿಳೆ ಗುರುದ್ವಾರದ ಆವರಣದಲ್ಲಿರುವ ಸರೋವರದಲ್ಲಿ ಮದ್ಯ ಸೇವಿಸುತ್ತಿರುವುದನ್ನು ಗಮನಿಸಿದ ನಿರ್ಮಲ್ ಸಿಂಗ್ ಸೈನಿ ಹಾಗೂ ಕೆಲವು ಭಕ್ತಾದಿಗಳು ಮಹಿಳೆಯನ್ನು ಹಿಡಿದು ಆಡಳಿತ ಮಂಡಳಿಗೆ ಒಪ್ಪಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಬ್ರೇಕ್ ಫೇಲ್ಯೂರ್; ಮುಂಬದಿ ನಿಂತಿದ್ದ ವಾಹನಗಳು ಜಖಂ
ಈ ವೇಳೆ ಸಿಟ್ಟಿಗೆದ್ದ ಆರೋಪಿ ನಿರ್ಮಲ್ ಸಿಂಗ್ ಮಹಿಳೆ ಮೇಲೆ ತನ್ನ ಬಳಿ ಇದ್ದ್ ಗನ್ನಿಂದ ಐದಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ಧಾನೆ. ಮಹಿಳೆಯ ಜೊತೆ ಇನ್ನೋರ್ವರಿಗೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿರುವ ಆರೋಪಿ ನಿರ್ಮಲ್ ಸಿಂಗ್ ಯಾವುದೇ ಕ್ರಿಮಿನಲ್ ಹಿನ್ನಲೆಯನ್ನು ಹೊಂದಿಲ್ಲ. ಆತನ ಬಳಿ ಇದ್ದ ಗನ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.