More

    ಯುವ ಪತ್ರಕರ್ತೆ ಆತ್ಮಹತ್ಯೆ…ರಾಜಕೀಯ ಮುಖಂಡ ಅರೆಸ್ಟ್​..

    ವಾರಾಣಸಿ: 28 ವರ್ಷದ ಪತ್ರಕರ್ತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡನೋರ್ವನ ಬಂಧನವಾಗಿದೆ.

    ಉತ್ತರ ಪ್ರದೇಶದ ವಾರಾಣಸಿಯ ಹರ್ಪಲ್​ಪುರದಲ್ಲಿ ಘಟನೆ ನಡೆದಿದೆ. ರಿಝ್ವಾನ್​ ತಬ್ಸುಮ್​ ಎಂಬ ಪತ್ರಕರ್ತೆ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಗೆ ಧಾವಿಸಿದ ಪೊಲೀಸರಿಗೆ ತಬ್ಸುಮ್​ ಬರೆದಿಟ್ಟಿದ್ದ ಡೆತ್​ ನೋಟ್​ ಸಿಕ್ಕಿದ್ದು, ಅದರಲ್ಲಿ ಸಮಾಜವಾದಿ ಪಕ್ಷದ ನಾಯಕ ಶಮಿಮ್​ ನೊಮಾನಿಯವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾಳೆ.

    ಇದನ್ನೂ ಓದಿ: ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೆತ್​ ನೋಟ್​ನಲ್ಲಿ ಶಮೀಮ್​ ಹೆಸರು ಇರುವುದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆಂದು ಎಸ್​ಎಸ್​ಪಿಯ ಪಿಆರ್​ಒ ಸಂಜಯ್​ ತ್ರಿಪಾಠಿ ತಿಳಿಸಿದ್ದಾರೆ.
    ಶಮೀಮ್​ ಮತ್ತು ರಿಜ್ವಾನಾ ನಡುವೆ ತುಂಬ ದಿನಗಳಿಂದಲೂ ಸಹಜ ಗೆಳೆತನವಿತ್ತು. ಆದರೆ ಒಮ್ಮೆಲೇ ಏನಾಯಿತು ಗೊತ್ತಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಬಾಯಿ ಮುಚ್ಚಿಸಿದ ಸೋನಾ!

    ಸೋಮವಾರ ರಿಜ್ವಾನಾ ತನ್ನ ಕೋಣೆಯಿಂದ ಹೊರಗೆ ಬರಲಿಲ್ಲ. ಎಷ್ಟು ಕರೆದರೂ ಮಾತನಾಡದಾಗ ಆತಂಕದಿಂದ ಬಾಗಿಲು ಒಡೆಯಲಾಯಿತು. ಒಳೆಗೆ ಹೋಗಿ ನೋಡಿದರೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎಂದು ರಿಜ್ವಾನಾ ತಬ್ಸುಮ್​ ಕುಟುಂಬ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts