ನವದೆಹಲಿ: ಟಿ20 ವರ್ಲ್ಡ್ ಕಪ್ ಮುಗಿಯುವ ವೇಳೆಗೆ ಭಾರತೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನದಿಂದ ರವಿ ಶಾಸ್ತ್ರಿ ಅವರಿಗೆ ನಿವೃತ್ತಿ ಸಿಗಲಿದೆ. ತದನಂತರ ಆ ಸ್ಥಾನಕ್ಕೆ ಯಾರು ನಿಯುಕ್ತಿಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಇದೀಗ ಬಂದಿರುವ ವರದಿಯ ಪ್ರಕಾರ ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ರನ್ನು ಈ ಜವಾಬ್ದಾರಿ ವಹಿಸಿಕೊಳ್ಳಲು ಬಿಸಿಸಿಐ ಕೇಳಲಿದೆ ಎನ್ನಲಾಗಿದೆ.
ಅನಿಲ್ ಕುಂಬ್ಳೆ ಈ ಮುಂಚೆಯೇ ಭಾರತ ತಂಡದ ಕೋಚ್ ಆಗಿ 2016-17 ರಲ್ಲಿ ಒಂದು ವರ್ಷ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಆ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಉಂಟಾದ ಭಿನ್ನಾಭಿಪ್ರಾಯದಿಂದ ಅವರು ರಾಜೀನಾಮೆ ನೀಡಿದ್ದರು. ಅದೇ ಈಗ ಟಿ20 ನಾಯಕತ್ವ ತ್ಯಜಿಸುವುದಾಗಿ ಕೊಹ್ಲಿ ಹೇಳಿರುವ ಬೆನ್ನಲ್ಲೇ ಕುಂಬ್ಳೆ ಅವರನ್ನು ಹೆಡ್ ಕೋಚ್ ಆಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಏಕದಿನ ನಾಯಕತ್ವವೂ 2023ರ ವಿಶ್ವಕಪ್ವರೆಗೆ ಸುರಕ್ಷಿತವಲ್ಲ!
ಕುಂಬ್ಳೆಯವರಂತೆಯೇ ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾರ್ಗದರ್ಶಕರಾಗಿ ಕೋಚಿಂಗ್ಅನುಭವ ಹೊಂದಿರುವ ಲಕ್ಷಣ್ ಬಗ್ಗೆಯೂ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಒಲವು ಹೊಂದಿದೆ ಎನ್ನಲಾಗಿದೆ. ಆದಾಗ್ಯೂ 100 ಕ್ಕೂ ಹೆಚ್ಚು ಟೆಸ್ಟ್ ಮ್ಯಾಚ್ಗಳನ್ನು ಆಡಿರುವ ಕುಂಬ್ಳೆ ಮತ್ತು ಲಕ್ಷ್ಮಣ್ ಈರ್ವರೂ ಹೆಡ್ ಕೋಚ್ ಕೆಲಸ ಮಾಡಲು ತಯಾರಿದ್ದಾರಾ ಎಂಬ ಪ್ರಶ್ನೆಯೂ ಇದೆ ಎನ್ನಲಾಗಿದೆ. (ಏಜೆನ್ಸೀಸ್)
ಓಲಾ ಎಲೆಕ್ಟ್ರಿಕ್ ಸ್ಕೂಟರ್ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ
ಅಸ್ತಮಾ ನಿಯಂತ್ರಣಕ್ಕೆ ‘ಬದ್ಧ ಪದ್ಮಾಸನ’ ಮಾಡಿ! ಗೂನು ಬೆನ್ನಿಗೂ ಇದು ಪರಿಹಾರ!