ಬೆಂಗಳೂರು: ಬಿಗ್ಬಾಸ್ ಸೀಸನ್ 8 ಆರಂಭವಾಗಿ ಎರಡು ವಾರಗಳು ಕಳೆದಿವೆ. ಮೊದಲನೇ ವಾರದಲ್ಲಿ ಟಿಕ್ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಿದ್ದು, ಬೇರೆ ಕೆಲಸಗಳಲ್ಲಿ ಬಿಜಿಯಾಗಿಬಿಟ್ಟಿದ್ದಾರೆ. ಎರಡನೇ ವಾರದ ಎಲಿಮಿನೇಷನ್ ಇಂದು ನಡೆಯಲಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ.
ಈ ವಾರ ಓಪನ್ ನಾಮಿನೇಷನ್ ಬದಲಾಗಿ, ಕನ್ಫೆಷನ್ ರೂಮಿನಲ್ಲಿ ನಾಮಿನೇಷನ್ ಮಾಡಿಸಲಾಗಿತ್ತು. ಪ್ರತಿಯೊಬ್ಬ ಸ್ಪರ್ಧಿಯು ತಾವು ಮನೆಯಿಂದ ಹೊರಹಾಕಬಯಸುವ ಇಬ್ಬರು ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡಿದ್ದರು. ಮನೆಯ ಮಂದಿಯ ಆಯ್ಕೆಯ ಪ್ರಕಾರ, ನಿರ್ಮಲಾ, ವಿಶ್ವನಾಥ, ಗೀತಾ, ಪ್ರಶಾಂತ್ ಸಂಬರಗಿ, ಚಂದ್ರಕಲಾ, ಶುಭ ಪೂಂಜಾ, ದಿವ್ಯಾ ಸುರೇಶ್ ಮತ್ತು ನಿಧಿ ಸುಬ್ಬಯ್ಯ ನಾಮಿನೇಟ್ ಆಗಿದ್ದರು.
ಶನಿವಾರದಂದು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮೂವರು ಸ್ಪರ್ಧಿಗಳ ಭಯವನ್ನು ಹೋಗಲಾಡಿಸಿದ್ದಾರೆ. ವೀಕ್ಷಕರ ಮತಗಳ ಪ್ರಕಾರ, ಮೊದಲನೆಯದಾಗಿ ಶುಭ ಪೂಂಜಾ, ಎರಡನೆಯದಾಗಿ ನಿಧಿ ಸುಬ್ಬಯ್ಯ ಮತ್ತು ಮೂರನೆಯದಾಗಿ ದಿವ್ಯಾ ಸುರೇಶ್ ಸೇಫ್ ಆಗಿದ್ದಾರೆ. ಪ್ರಶಾಂತ್, ನಿರ್ಮಲಾ, ಚಂದ್ರಕಲಾ, ಗೀತಾ ಮತ್ತು ವಿಶ್ವನಾಥ ಇನ್ನೂ ಭಯದಲ್ಲಿಯೇ ಇದ್ದಾರೆ.
ಈ ಐವರಲ್ಲಿ ಒಬ್ಬರು ಇಂದು ಮನೆಯಿಂದ ಹೊರಗೆ ಬರುವುದು ಗ್ಯಾರಂಟಿ. ಕೆಲವು ವೀಕ್ಷಕರು ಗೀತಾ ಮನೆಯಿಂದ ಹೊರಗೆ ಬರುತ್ತಾಳೆ ಎನ್ನುತ್ತಿದ್ದಾರೆ ಇನ್ನೊಂದಿಷ್ಟು ಜನ ನಿರ್ಮಲಾ ಬರಲಿ ಎನ್ನುತ್ತಿದ್ದಾರೆ. ಆದರೆ ಯಾರಿಗೆ ಅತಿ ಕಡಿಮೆ ಮತ ಬಿದ್ದಿದ್ದು, ಬಿಗ್ಬಾಸ್ ಮನೆಯ ವಾಸ ಇಂದಿಗೆ ಕೊನೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಗಂಡು ಪಾರಿವಾಳವೂ ಮರಿಗೆ ಹಾಲುಣಿಸುತ್ತೆ! ಪಾರಿವಾಳದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…