More

    ಏನಾಗುತ್ತಿದೆ RCB ಕ್ಯಾಂಪ್​ ಒಳಗೆ? ಭಾರಿ ಸಂಶಯ ಹುಟ್ಟುಹಾಕಿದ ಸಿರಾಜ್ ಇನ್​ಸ್ಟಾ ಸ್ಟೋರಿ!

    ನವದೆಹಲಿ: ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಸಿರಾಜ್​ ಅವರ ಇತ್ತೀಚಿನ ಇನ್​ಸ್ಟಾಗ್ರಾಂ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಿಂದ ಹೊರಗುಳಿದಿರುವ ಸಿರಾಜ್​ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಐದು ಒಡೆದ ಹೃದಯಗಳ ಎಮೋಜಿಯನ್ನು ಪೋಸ್ಟ್​ ಮಾಡಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ, ಮೊನ್ನೆಯಷ್ಟೇ ಮುಗಿದ ಐಪಿಎಲ್​ ಹರಾಜಿಗೂ ಸಿರಾಜ್ ಅವರ ಇನ್​ಸ್ಟಾಗ್ರಾಂ ಸ್ಟೋರಿಗೂ ತಳುಕು ಹಾಕಲಾಗಿದೆ.​

    ಸಿರಾಜ್​ ಅವರು ಒಡೆದ ಹೃದಯದ ಎಮೋಜಿಯನ್ನು ಯಾವ ಉದ್ದೇಶದಿಂದ ಪೋಸ್ಟ್​ ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಆದರೆ, ಐಪಿಎಲ್​ ಹರಾಜಿನ ಬೆನ್ನಲ್ಲೇ ಈ ರೀತಿಯ ಸ್ಟೋರಿ ಪೋಸ್ಟ್​ ಮಾಡಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಆರ್​ಸಿಬಿ ಕ್ಯಾಂಪ್​ನಲ್ಲಿ ಏನು ನಡೆಯುತ್ತಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹರಾಜಿನಲ್ಲಿ ಆರ್​ಸಿಬಿ ತೊಡಗಿಸಿಕೊಂಡ ರೀತಿ ಸಿರಾಜ್​ಗೆ ಬೇಸರ ತರಿಸಿರಬಹುದಾ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

    Siraj 1

    ಇನ್ನೂ ಸಿರಾಜ್​ ಅವರು ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಆಡಿದರು. ಸದ್ಯ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದು, ಮುಂಬರುವ ಟೆಸ್ಟ್​ ಸರಣಿಗಾಗಿ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಡಿ.26ರಂದು ಸೆಂಚುರಿಯನ್​ ಕ್ರೀಡಾಂಗಣದಲ್ಲಿ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್​ ಸರಣಿಗಾಗಿ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಜಸ್ಪ್ರೀತ್​ ಬುಮ್ರಾ ಸೇರಿದಂತೆ ಇತರೆ ಪ್ರಮುಖ ಆಟಗಾರರು ಕೂಡ ತಂಡಕ್ಕೆ ಮರಳಲಿದ್ದಾರೆ.

    ಇನ್ನು ಡಿ.19ರಂದು ದುಬೈನಲ್ಲಿ ನಡೆದ ಮಿನಿ ಐಪಿಎಲ್​ ಹರಾಜಿಗೂ ಮುನ್ನ ಆರ್​ಸಿಬಿ ತಂಡ ಸಿರಾಜ್​ ಅವರನ್ನು ರೀಟೇನ್​ ಮಾಡಿಕೊಂಡಿದೆ. ಐಪಿಎಲ್​ ಹರಾಜಿನಲ್ಲಿ ಅಲ್ಜರಿ ಜೋಸೆಫ್​, ಟಾಮ್​ ಕರ್ರನ್​, ಲುಕಿ ಫರ್ಗೂಸನ್​ ಹಾಗೂ ಮೂವರು ಅನ್​ಕ್ಯಾಪ್ಡ್ ಭಾರತೀಯ​ ಆಟಗಾರರನ್ನು ಖರೀದಿಸಿದೆ.

    ಆರ್​ಸಿಬಿ ಹರಾಜು ಪೂರ್ವ ತಂಡ: ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಹಿಮಾನ್ ಟೋಪ್ಲೆ ಶರ್ಮಾ, ರಾಜನ್ ಕುಮಾರ್, ವೈಶಾಕ್ ವಿಜಯ್ ಕುಮಾರ್.

    ಹರಾಜಿಗು ಮುನ್ನ ಬಿಡುಗಡೆಯಾದ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

    ಟ್ರೇಡೆಡ್​ ಪ್ಲೇಯರ್ಸ್​: ಮಯಾಂಕ್ ದಾಗರ್, ಕ್ಯಾಮೆರಾನ್ ಗ್ರೀನ್ (ಮುಂಬೈ ಇಂಡಿಯನ್ಸ್‌ ತಂಡದಿಂದ). (ಏಜೆನ್ಸೀಸ್​)

    ಹೊಸ ಹೂಡಿಕೆದಾರರಿಗೆ ಫ್ಲೆಕ್ಸಿ ಕ್ಯಾಪ್​ ಮ್ಯೂಚುವಲ್ ಫಂಡ್​ಗಳು ಸೂಕ್ತ ಏಕೆ? ಇವುಗಳು ಸುರಕ್ಷಿತವೇ? ಲಾಭ ಎಷ್ಟು?

    ಫಲ ಕೊಡದ ಹೋರಾಟ: ಕುಸ್ತಿಗೆ ಗುಡ್​ಬೈ ಹೇಳಿದ ಒಲಿಂಪಿಕ್ ಪದಕ​ ವಿಜೇತೆ ಸಾಕ್ಷಿ ಮಲ್ಲಿಕ್​

    ಸಹೋದರನಿಗೆ ಕಿಡ್ನಿ ದಾನ ಮಾಡಿದ ಮಹಿಳೆ; ವಾಟ್ಸ್​​ಆ್ಯಪ್​​ ಮೂಲಕ ತ್ರಿವಳಿ ತಲಾಖ್ ಕೊಟ್ಟ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts