More

    ದಿಶಾ ಸತ್ತ ಆ ರಾತ್ರಿ ನಿಜಕ್ಕೂ ನಡೆದಿದ್ದೇನು? ಕ್ಲೋಸ್​ ಫ್ರೆಂಡ್​ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಇದು!

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಾವಿನ ಬಳಿಕ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ​ ಸಾವಿನ ಪ್ರಕರಣವೂ ಸಹ ತುಂಬಾ ಮಹತ್ವ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ. ಇದರ ನಡುವೆ ಇಂಡಿಯಾ ಟುಡೆಗೆ ಲಭ್ಯವಾಗಿರುವ ದಿಶಾ ತನ್ನ ಕ್ಲೋಸ್​ ಫ್ರೆಂಡ್ಸ್​ ಜತೆ ನಡೆಸಿದ ವಾಟ್ಸ್​ಆ್ಯಪ್​ ಚಾಟ್, ಸಾಯುವ ದಿನದ ರಾತ್ರಿ ನಿಜಕ್ಕೂ ನಡೆದಿದ್ದೇನು ಎಂಬುದನ್ನು ಬಹಿರಂಗಪಡಿಸುವಂತಿದೆ. ​

    ಸದ್ಯಕ್ಕೆ ದಿಶಾ ಅವರು ಮುಂಬೈನ ಮಲಾಡ್​ನಲ್ಲಿರುವ ಅಪಾರ್ಟ್​ಮೆಂಟ್​ನ 14ನೇ ಮಹಡಿಯಿಂದ ಜಿಗಿದು ಜೂನ್​ 9ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ. ಅಲ್ಲದೆ, ದಿಶಾ ಸಾವು ಜೂನ್​ 14ರಂದು ಮೃತಪಟ್ಟ ನಟ ಸುಶಾಂತ್​ ಸಾವಿಗೂ ತಳುಕು ಹಾಕಿಕೊಂಡಿದೆ. ಅದಕ್ಕೆ ಕಾರಣ ದಿಶಾ ಸುಶಾಂತ್​ ಮ್ಯಾನೇಜರ್​ ಆಗಿ ಕೆಲ ದಿನಗಳವರೆಗೆ ಕೆಲಸ ಮಾಡಿದ್ದರು.

    ಇದನ್ನೂ ಓದಿ: ರಿಯಾಳಿಂದ 2 ಐಷಾರಾಮಿ ಫ್ಲ್ಯಾಟ್ಸ್​ ಖರೀದಿ; ವಿಚಾರಣೆಗೆ ಬಂದಿದ್ದು ಯಾರ ಕಾರಿನಲ್ಲಿ?; ಇ.ಡಿಯಿಂದ ಬಯಲಾಗಲಿದೆ ಸತ್ಯ

    ಇಂಡಿಯಾ ಟುಡೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಪತಿ ಹಾಗೂ ದಿಶಾ ನಡುವೆ ಆಗಾಗ ಸಣ್ಣಪುಟ್ಟ ಜಗಳ ಕೂಡ ಆಗುತ್ತಂತೆ. ಸಾವಿಗೂ ನಾಲ್ಕು ದಿನಗಳ ಹಿಂದಷ್ಟೇ ಆಕೆ ಮಲಾಡ್​ ಫ್ಲ್ಯಾಟ್​ಗೆ ಸ್ಥಳಾಂತರವಾಗಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಪಾರ್ಟಿ ಆಯೋಜಿಸಿ, ಫ್ರೆಂಡ್ಸ್​ಗೆ ಆಹ್ವಾನ ನೀಡಿದ್ದರು. ಈ ವೇಳೆ ತುಂಬಾ ಕುಡಿದಿದ್ದ ದಿಶಾ, ಯಾರು ಇನ್ಮುಂದೆ ಪರಸ್ಪರ ಯಾರನ್ನೂ ಕಾಳಜಿ ವಹಿಸುವುದಿಲ್ಲ ಎಂದಿದ್ದರಂತೆ. ಇದನ್ನು ಕೇಳಿಸಿಕೊಂಡ ಪಾರ್ಟಿಯಲ್ಲಿದ್ದ ಫ್ರೆಂಡ್ಸ್ ಈ ರೀತಿಯೆಲ್ಲ ಮಾತನಾಡಬೇಡ ಎಂದು ಸಮಾಧಾನ ಪಡಿಸಿದ್ದರಂತೆ.​ ಅಂದು ತುಂಬಾ ಭಾವುಕರಾಗಿದ್ದ ದಿಶಾ, ರಾತ್ರಿ 8 ಗಂಟೆಗೆ ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ಲಾಕ್​ಡೌನ್​ ನಂತರದ ಯೋಜನೆಗಳ ಬಗ್ಗೆ ಚರ್ಚಿಸಿದ್ದಳಂತೆ. ಅಲ್ಲದೆ, ಮಧ್ಯ ರಾತ್ರಿ ಯುಕೆಯಲ್ಲಿರುವ ಸ್ನೇಹಿತೆಗೆ ವಿಡಿಯೋ ಕಾಲ್​ ಮಾಡಿಯು ಮಾತನಾಡಿದ್ದಳಂತೆ.

    ಇದಾದ ಕೆಲವೇ ಕ್ಷಣಗಳಲ್ಲಿ ತನ್ನ ಬೆಡ್​ರೂಮ್​ಗೆ ಓಡಿದ ದಿಶಾ ಬಾಗಿಲು ಲಾಕ್​ ಮಾಡಿಕೊಂಡಳು. ಎಷ್ಟೇ ಬಾಗಿಲೂ ಬಡಿದರೂ ಏನು ಪ್ರತಿಕ್ರಿಯೆ ಬರದಿದ್ದಾಗ ಫ್ರೆಂಡ್ಸ್​ ಹಾಗೂ ಆಕೆಯ ಪತಿ ಬಾಗಿಲು ಮುರಿದು ನೋಡುವಷ್ಟರಲ್ಲಿ ಆಕೆ ಬಾಲ್ಕನಿಯಿಂದ ಕೆಳಗೆ ಜಿಗಿದಿರುವುದನ್ನು ನೋಡಿ ಕಟ್ಟಡದ ಕೆಳಕ್ಕೆ ಓಡಿದ್ದಾರೆ. ಆ ವೇಳೆ ದಿಶಾ ಇನ್ನು ಜೀವಂತೆವಾಗಿದ್ದಳಂತೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ.

    ಈ ಮೇಲಿನ ಮಾಹಿತಿಯನ್ನು ದಿಶಾ ಫ್ರೆಂಡ್ಸ್​ ಒಬ್ಬರು ಅಂದು ಪಾರ್ಟಿಯಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಮತ್ತೊಬ್ಬ ಫ್ರೆಂಡ್ಸ್​ ಜತೆ ವಾಟ್ಸ್​ಆ್ಯಪ್​ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಮಾಹಿತಿ ಕಾಲೇಜ್​ ಫ್ರೆಂಡ್ಸ್​ನ​ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಹರಿದಾಡಿದೆ. ಆ ಗ್ರೂಪ್​ನಲ್ಲಿ ದಿಶಾ ಕೂಡ ಸದಸ್ಯರಾಗಿದ್ದರು. ಇದನ್ನು ಪೊಲೀಸರು ಸಹ ಖಚಿತಪಡಿಸಿದ್ದಾರೆ.

    ಇದನ್ನೂ ಓದಿ: ಈರುಳ್ಳಿಯಿಂದ ಹರಡುತ್ತಿದೆ ಸೋಂಕು- 500ಕ್ಕೂ ಅಧಿಕ ಮಂದಿಯಲ್ಲಿ ಪತ್ತೆ: ಏನಿದು ವೈರಸ್‌?

    ಅಂದಹಾಗೆ ದಿಶಾ ಟಾಲೆಂಟ್​ ಮ್ಯಾನೇಜ್ಮೆಂಟ್​ ಕಂಪನಿಯಲ್ಲಿ ಕೆಲಸ ಮಾಡುವುದರೊಂದಿಗೆ ಸುಶಾಂತ್​ ಅವರ ಅಕೌಂಟ್​ ಕೂಡ ನೋಡಿಕೊಳ್ಳುತ್ತಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡ ಐದು ದಿನದಲ್ಲೇ ಸುಶಾಂತ್​ ಸಹ ಆತ್ಮಹತ್ಯೆ ಸ್ಥಿತಿಯಲ್ಲಿ ಸಾವಿಗೀಡಾದರು. ಅಂದಿನಿಂದ ಇಬ್ಬರ ಸಾವಿನ ನಡುವೆ ಅನೇಕ ಕತೆಗಳು ಹುಟ್ಟಿಕೊಂಡಿವೆ. ಇಬ್ಬರದ್ದು ಕೊಲೆ ಎನ್ನಲಾಗುತ್ತಿದ್ದು, ಈ ಸಂಬಂಧ ತನಿಖೆಯು ನಡೆಯುತ್ತಿದೆ. ಇದರ ನಡುವೆ ಮಹಾರಾಷ್ಟ್ರದ ಬಿಜೆಪಿ ಸಂಸದ ನಾರಾಯಣ ರಾಣೆ ಗಂಭೀರ ಆರೋಪ ಮಾಡಿ, ದಿಶಾ ಅವರನ್ನು ರೇಪ್​ ಆ್ಯಂಡ್​ ಮರ್ಡರ್​ ಮಾಡಲಾಗಿದೆ. ಇದರ ಹಿಂದೆ ಮಹಾರಾಷ್ಟ್ರ ರಾಜಕೀಯ ಹಾಗೂ ಬಾಲಿವುಡ್​ನ ದೊಡ್ಡವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

    ಆದರೆ, ಸುಶಾಂತ್​ ಅಥವಾ ದಿಶಾ ಕುರಿತಾಗಲಿ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದ್ದು, ಮುಗಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಬಹುದು ಎನ್ನಲಾಗಿದೆ. (ಏಜೆನ್ಸೀಸ್​)

    ಮಗಳ ಬರ್ತಡೇಗೆ ತಂದ ಗೊಂಬೆಯ ಜನನಾಂಗದಲ್ಲಿನ ಬಟನ್​ ಒತ್ತಿದ ಮಹಿಳೆಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts