More

    ರಾಜಸ್ಥಾನ ವಿರುದ್ಧ 4 ವಿಕೆಟ್​ಗಳ ಸೋಲು; ಆರ್​ಸಿಬಿ ಮಾಜಿ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಿಷ್ಟು

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 4 ವಿಕೆಟ್​ಗಳ ಸೋಲು ಕಂಡಿದ್ದು, ಐಪಿಎಲ್​ನಲ್ಲಿನ ತನ್ನ ಹೊಸ ಅಧ್ಯಾಯವನ್ನು ಸೋಲಿನೊಂದಿಗೆ ಮುಗಿಸಿದೆ. ಇನ್ನೂ ಪಂದ್ಯದ ಬಳಿಕ ಮಾತನಾಡಿದ ಮಾಜಿ ನಾಯಕ, ಆರೆಂಜ್​ ಕ್ಯಾಪ್​ ಹೋಲ್ಡರ್​ ವಿರಾಟ್​ ಕೊಹ್ಲಿ ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

    ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ವಿರಾಟ್​, ಎಲ್ಲವನ್ನೂ ಕಳೆದುಕೊಂಡಾಗ ಸ್ವಾಭಿಮಾನಕ್ಕಾಗೊಇ ಹೋರಾಡಿದ ಆರ್​ಸಿಬಿ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್​ ಪ್ರವೇಶಿಸಿತ್ತು. ಪ್ರತಿ ಪಂದ್ಯ ಆಡುವಾಗ ನಮ್ಮನ್ನು ನಾವು ವ್ಯಕ್ತಪಡಿಸಿದ್ದೆವು. ನಮ್ಮ ಆತಮಗೌರವಕ್ಕಾಗಿ ಆಡಲು ಪ್ರಾರಂಭಿಸಿದ್ದೆವು ನಂತರ ಆತ್ಮವಿಶ್ವಾಸ ಮರಳಿತ್ತು.

    ಇದನ್ನೂ ಓದಿ: ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು; ಆರ್​ಸಿಬಿ ಆಟಗಾರರ ಭಾವನಾತ್ಮಕ ವಿಡಿಯೋ ವೈರಲ್

    ನಾವು ಪ್ಲೇಆಫ್​ಗೆ ಅರ್ಹತೆ ಪಡೆದ ರೀತಿ ನಿಜವಾಗಿಯೂ ವಿಶೇಷವಾಗಿದೆ. ನಾನೂ ಈ ವಿಚಾರವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಏಕೆಂದರೆ ನಾವು ಪ್ಲೇಆಫ್​ ಪ್ರವೇಶಿಸುವಲ್ಲಿ ತಂಡದ ಪ್ರತಿಯೊಬ್ಬ ಆಟಗಾರನು ಪ್ರಮುಖ ಪಾತ್ರ ವಹಿಸಿದ್ದಾನೆ. ಅಂತಿಮವಾಗಿ ನಾವು ಆಡಲು ಬಯಸಿದ ರೀತಿಯಲ್ಲಿ ಆಡಿದ್ದೇವೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ವಿರಾಟ್​ ಕೊಹ್ಲಿ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ.

    ಇತ್ತ ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 8 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 172 ಗಳಿಸಲು ಶಕ್ತವಾಯಿತು. 173 ರನ್​ಗಳ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ ತಂಡವು 19 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಕ್ವಾಲಿಫಯರ್-2 ಪ್ರವೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts