More

    ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ: ಮಧು ಬಂಗಾರಪ್ಪ

    ಸೊರಬ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅರ್ಹ ಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪರವಾಗಿ ನಿಮ್ಮ ಬೆಂಬಲ ಅಗತ್ಯವಾಗಿ ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

    ಶನಿವಾರ ಪುರಸಭೆ ವ್ಯಾಪ್ತಿಯ ಹೊಸಪೇಟೆ ಬಡಾವಣೆ ಹಾಗೂ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ 2.5 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಸಾಮಾನ್ಯ ಜನರು ಕಟ್ಟಿದ ತೆರಿಗೆಯನ್ನು ಇತರೆ ಅಭಿವೃದ್ಧಿಗೆ ಬಳಸಿಕೊಂಡು ಸುಮಾರು 57 ಸಾವಿರ ರೂ. ಕೋಟಿಯಷ್ಟು ವಿವಿಧ ಯೋಜನೆಯಡಿಯಲ್ಲಿ ಬಡವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರಿಂದ ಅಸಹಾಯಕತೆಯಿಂದ ಬದುಕು ನಡೆಸುವ ಜನರಿಗೆ ನೆಮ್ಮದಿ ಸಿಕ್ಕಿದೆ. ಅಷ್ಟೇ ಅಲ್ಲದೇ ಗ್ಯಾರಂಟಿ ಯೋಜನೆ ಮಾನಸಿಕ ಸ್ಥೈರ್ಯ ನೀಡಿದೆ ಎಂದು ತಿಳಿಸಿದರು.
    ಕಾಂಗ್ರೆಸ್ ಪರವಾದ ವಾತಾವರಣ ಇಡೀ ದೇಶದಲ್ಲಿದೆ. ಜನರಿಗೆ ನೀಡಿದ ಭರವಸೆ ಈಡೇರಿಸುವ ಪ್ರತಿಜ್ಞೆ ಮಾಡುವ ಕಾಂಗ್ರೆಸ್ ಬಡವರ ಪರವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ಮುಂದಾಗಿರುವುದನ್ನು ಮನಗಂಡು ಜನರಲ್ಲಿ ಪಕ್ಷದ ಮೇಲೆ ನಂಬಿಕೆ ಹೆಚ್ಚಾಗುತ್ತಿದೆ ಎಂದರು.
    ಮಾ.20ರಂದು ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗಕ್ಕೆ ಆಗಮಿಸಲಿದ್ದು, ನಟ ಶಿವರಾಜ್‌ಕುಮಾರ್ ಕೂಡ ಬರಲಿದ್ದಾರೆ. ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪ್ರಚಾರ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಮಗಳಾಗಿರುವ ಗೀತಾ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಬೂತ್ ಅಧ್ಯಕ್ಷ ಮಹೇಶ್, ಪುರಸಭೆ ಸದಸ್ಯರಾದ ಪ್ರೇಮಾ, ಆಫ್ರಿನಾ ಬಾನು, ಈರೇಶ್ ಮೇಸಿ, ಅನ್ಸರ್ ಅಹಮದ್, ಶಿವಪ್ಪ ನಡಹಳ್ಳಿ, ಮಂಜುನಾಥ, ಮುಖ್ಯಾಧಿಕಾರಿ ಬಾಲಚಂದ್ರ, ಮುಖಂಡರಾದ ಎಚ್.ಗಣಪತಿ, ಪ್ರಕಾಶ್ ಹಳೇಸೊರಬ, ನಾಗರಾಜ್ ಚಿಕ್ಕಸವಿ, ಪರಶುರಾಮಪ್ಪ, ಗಣಪತಿ, ನಾಗರಾಜ್ ಕುಪ್ಪಗಡ್ಡೆ, ಕಲ್ಲಂಬಿ ಹಿರಿಯಣ್ಣ, ಕಲ್ಲಪ್ಪ ಚಿತ್ರಟ್ಟೆಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts