More

    ವಿಜಯ್ ಮಗನನ್ನು ಹೀರೋ ಮಾಡ್ತಿದ್ದಾರೆ ಸೇತುಪತಿ … ‘ಉಪ್ಪೆನ’ ರೀಮೇಕ್ ಮೂಲಕ ಚಿತ್ರರಂಗಕ್ಕೆ ಸಂಜಯ್ ಎಂಟ್ರಿ

    ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರವು ಜೂನ್ 22ರಂದು ದೇಶಾದ್ಯಂತ ಬಿಡುಗಡೆಯಾಗ್ತಿದೆ. ಬರೀ ತಮಿಳಷ್ಟೇ ಅಲ್ಲ, ಕನ್ನಡ, ಹಿಂದಿ, ತೆಲುಗು ಅಂತ ಬೇರೆ ಭಾಷೆಗಳಲ್ಲೂ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿದೆ. ಈ ಮಧ್ಯೆ, ಅವರ ಕಡೆಯಿಂದ ಇನ್ನೊಂದು ಸುದ್ದಿ ಬಂದಿದೆ. ಅದೇನೆಂದರೆ, ವಿಜಯ್ ಮಗ ಸಂಜಯ್ ಹೀರೋ ಆಗ್ತಿದ್ದಾನೆ ಮತ್ತು ಆತನನ್ನು ಲಾಂಚ್ ಮಾಡ್ತಿರೋದು ವಿಜಯ್ ಸೇತುಪತಿ.
    ಹೌದು, ವಿಜಯ್ ಮಗ ಸಂಜಯ್ ಕೆನಡಾದಲ್ಲಿ ಫಿಲ್ಮ ಮೇಕಿಂಗ್ ಕಲಿಯುತ್ತಿದ್ದಾನೆ. ಆತ ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಸಂಜಯ್‌ನನ್ನು ‘ಉಪ್ಪೆನ’ ಚಿತ್ರದ ರೀಮೇಕ್ ಮೂಲಕ ತಮಿಳು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ವಿಜಯ್ ಸೇತುಪತಿ. ಈ ಚಿತ್ರವನ್ನು ಪ್ರೊಡ್ಯೂಸ್ ಮಾಡ್ತಿರೋದು ಅಷ್ಟೇ ಅಲ್ಲ, ಚಿತ್ರದಲ್ಲಿ ವಿಲನ್ ಆಗಿಯೂ ನಟಿಸುತ್ತಿದ್ದಾರಂತೆ.

    ಇವೆಲ್ಲಾ ಆಗಿದ್ದು ಹೇಗೆ ಎಂದರೆ, ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರೂ ‘ಮಾಸ್ಟರ್’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಅದೇ ಸಮಯದಲ್ಲಿ ವಿಜಯ್ ಸೇತುಪತಿ ತೆಲುಗಿನ ‘ಉಪ್ಪೆನ’ ಚಿತ್ರದಲ್ಲೂ ವಿಲನ್ ಆಗಿಯೂ ಅಭಿನಯಿಸುತ್ತಿದ್ದರು. ಒಮ್ಮೆ ವಿಜಯ್ ಮತ್ತು ವಿಜಯ್ ಸೇತುಪತಿ ಮಾತನಾಡುವಾಗ, ‘ಉಪ್ಪೆನ’ ಚಿತ್ರದ ಪ್ರಸ್ತಾಪವಾಯಿತಂತೆ. ಸಂಜಯ್ ಚಿತ್ರರಂಗದ ಎಂಟ್ರಿ ಬಗ್ಗೆ ಗೊತ್ತಿದ್ದ ಸೇತುಪತಿ, ‘ನೀವು ಹೂಂ ಅನ್ನೋದಾದರೆ, ನಾನೇ ರೀಮೇಕ್ ರೈಟ್ಸ್ ತಂದು ನಿರ್ಮಾಣ ಮಾಡ್ತೀನಿ. ನಿಮ್ಮ ಮಗನ್ನ ಲಾಂಚ್ ಮಾಡ್ತೀನಿ’ ಎಂದರಂತೆ. ವಿಜಯ್‌ಗೂ ಯಾಕಾಗಬಾರದು ಎಂದನಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಅಲ್ಲಿಗೆ ಸಂಜಯ್ ಹೀರೋ ಆಗುವುದು ಪಕ್ಕಾ ಆಗಿದೆ. ಇನ್ನೇನಿದ್ದರೂ ಸಂಜಯ್ ಕೆನಡಾದಿಂದ ವಾಪಸ್ಸು ಬರಬೇಕು. ಬಂದು ಕ್ಯಾಮೆರಾ ಮುಂದೆ ನಿಲ್ಲಬೇಕು ಅಷ್ಟೇ. ಬಹುಶಃ ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ಸೆಟ್ಟೇರಬಹುದು.

    ವಿಶೇಷ; ವೃಕ್ಷ ಅವತಾರದಲ್ಲಿ ಡಾ. ರಾಜ್​ ಫೋಟೋ ಸೃಷ್ಟಿಯಾಗಿದ್ದು ಹೇಗೆ!; ಈ ಚಿತ್ರ ರಚಿಸಿದ ಬಿಕೆಎಸ್​ ವರ್ಮಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ 14 ವರ್ಷದ ಹಿಂದಿನ ಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts