More

    ಬಡತನದಲ್ಲಿ ಅರಳಿದ ಪ್ರತಿಭೆ: ವಿಜಯಪುರ ವಿದ್ಯಾರ್ಥಿ ರಾಹುಲ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​ ​

    ವಿಜಯಪುರ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಬಡತನದಲ್ಲಿ ಅರಳಿದ ಪ್ರತಿಭೆಯೊಂದು ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

    ಕಲಾ ವಿಭಾಗದಲ್ಲಿ 592 ಅಂಕ ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ರಾಹುಲ್ ರಾಠೋಡ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ರಾಠೋಡ್​ ಅವರ ತಂದೆ-ತಾಯಿ ಮಹಾರಾಷ್ಟ್ರಕ್ಕೆ ಗುಳೆಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ತಂದೆ-ತಾಯಿ ತಗಡಿನ ಶೆಡ್​ನಲ್ಲಿ ವಾಸವಿದ್ದು, ಮಗನ ಸಾಧನೆಗೆ ಹರ್ಷಗೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

    ಕೂಲಿ ಕೆಲಸಕ್ಕೆಂದು ರಾಠೋಡ್​ ಅವರ ತಂದೆ ಮೋತಿಲಾಲ್ ಹಾಗೂ ತಾಯಿ ಸವಿತಾ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದಾರೆ. ಮೋತಿಲಾಲ್​​ಗೆ ಮೂವರು ಮಕ್ಕಳು. ಅದರಲ್ಲಿ ಓರ್ವ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಬಡತನ ಹಿನ್ನೆಲೆಯಲ್ಲಿ ಜೀವನಕ್ಕಾಗಿ ಮೋತಿಲಾಲ್ ಕುಟುಂಬ ಮಹಾರಾಷ್ಟ್ರಕ್ಕೆ ಗುಳೆಹೋಗಿದೆ.

    ಇದನ್ನೂ ಓದಿ: ರಂಜಾನ್ ಮಾರ್ಕೆಟ್‌ನಲ್ಲಿ ಮಹಿಳೆಯರೊಂದಿಗೆ ಕಿರಿಕ್ – ಪೊಲೀಸ್ ಜೀಪ್‌ಗೆ ಕಲ್ಲು ತೂರಾಟ

    ರಾಹುಲ್ ರಾಠೋಡ್ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿ. ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿರುವ ಎಸ್.ಕೆ ಪಿಯು ಕಾಲೇಜಿಲ್ಲಿ ಪಿಯುಸಿ ಅಧ್ಯಯನ ಮಾಡಿದ್ದಾರೆ. ಹಾಸ್ಟೆಲ್​ನಲ್ಲಿದ್ದುಕೊಂಡೆ ಉತ್ತಮ ಸಾಧನೆ ಮಾಡಿರುವ ರಾಠೋಡ್​, ತನ್ನ ಈ ಸಾಧನೆಗೆ ತಂದೆ ತಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ಉಪನ್ಯಾಸಕಿ ಬಸಮ್ಮ ಪ್ರೇರಣೆ ಎಂದಿದ್ದಾರೆ.

    ಕಲಾವಿಭಾಗದ ಶಿಕ್ಷಣ ವಿಷಯದಲ್ಲಿ ಪಿಯುಸಿ ಕಲಿತಿರುವ ರಾಠೋಡ್​, ಮುಂದೆ ಕಲಾ ವಿಭಾಗದಲ್ಲಿ ಬಿಎ ಮಾಡಿ ಎಲ್ಎಲ್​​​ಬಿ ಕಲಿಯುವ ಆಸೆ ಹೊಂದಿದ್ದಾರೆ. ರಾಠೋಡ್​ ಅವರ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿವೆ. (ದಿಗ್ವಿಜಯ ನ್ಯೂಸ್​)

    ಜಿಲೇಬಿ ಫೈಲ್​ ಬಂದ್ರೆ ಬಿಸಾಕುತ್ತಿದ್ರಿ, ಜಿಲೇಬಿ ಅಂದ್ರೆ ಜನಕ್ಕೆ ಗೊತ್ತಿಲ್ವಾ? ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ

    ನಿಜಾಂಶ ಮುಚ್ಚಿಟ್ಟ ಆರೋಪ; ಯಶವಂತಪುರ ಜೆಡಿಎಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ದೂರು

    ಲಿಂಗಾಯತರಿಗೆ ಸ್ಥಾನಮಾನ, ಕಾಂಗ್ರೆಸ್​ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts