ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವಿನ ರಣಜಿ ಕ್ವಾರ್ಟರ್ ಫಿನಾಲೆ ಪಂದ್ಯದಲ್ಲಿ ಪ್ರವಾಸಿ ತಂಡವು ಅತಿಥೇಯರ ಎದುರು ಸೋಲೊಪ್ಪಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ನಾಲ್ಕರ ಘಟ್ಟ ಪ್ರವೇಶಿಸುವ ಕನಸು ಭಗ್ನಗೊಂಡಿದೆ.
ಮಧ್ಯಪ್ರದೇಶ, ತಮಿಳುನಾಡು ಹಾಗೂ ವಿದರ್ಭ ಅಗ್ರ ಮೂರರಲ್ಲಿದ್ದು, ಮುಂಬೈ ಸೆಮಿಫಿನಾಲೆಗೆ ಲಗ್ಗೆ ಇಡುವುದು ಬಹುತೇಕ ಖಚಿತವಾಗಿದೆ. ಬೌಲರ್ಗಳ ಮಿಂಚಿನ ದಾಳಿಯ ಹೊರತಾಗಿಯೂ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಕರ್ನಾಟಕ ಕ್ವಾರ್ಟರ್ ಫಿನಾಲೆಯಲ್ಲಿ ಮುಗ್ಗರಿಸಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಯುವ ಬ್ಯಾಟ್ಸ್ಮನ್; ಹಳೇ ದಾಖಲೆಗಳು ಉಡೀಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 460 ಹಾಗೂ ದ್ವತೀಯ ಇನ್ನಿಂಗ್ಸ್ನಲ್ಲಿ 196 ರನ್ಗಳಿಸಿ ಆಲೌಟ್ ಆಯಿತು. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 286 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ನಲ್ಲಿ 174 ರನ್ಗಳ ಹಿನ್ನಡೆಯಲ್ಲಿದ್ದ ಕರ್ನಾಟಕಕ್ಕೆ ಗೆಲುವಿಗೆ 371 ರನ್ಗಳ ಗುರಿ ಪಡೆದಿತ್ತು.
372 ರನ್ಗಳ ಗುರಿಗಳ ಬೆನ್ನಟ್ಟಿದ್ದ ಕರ್ನಾಟಕ ತಂಡವು 243 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ನಲ್ಲಿ ತಂಡವು 174 ರನ್ಗಳ ದೊಡ್ಡ ಹಿನ್ನಡೆ ಅನುಭವಿಸಲು ಕಾರಣರಾಗಿದ್ದ ಬ್ಯಾಟ್ಸ್ಮನ್ಗಳು ಎರಡನೇ ಇನ್ನಿಂಗ್ಸ್ನಲ್ಲಿ ವಿಫಲರಾದ ಕಾರಣ ಕರ್ನಾಟಕದ ರಣಜಿ ಟ್ರೋಫಿ ಕನಸು ಭಗ್ನಗೊಂಡಿದೆ.