ಉತ್ತರಕನ್ನಡ: ಮನೆಗೆ ನುಗ್ಗಿ ವಿವಾಹಿತ ಮಹಿಳೆಯನ್ನು ಅಪಹರಿಸಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ರುತಿಕಾ ಎಂಬ ಮಹಿಳೆಯನ್ನು ನಾಲ್ವರ ತಂಡ ಕಿಡ್ನ್ಯಾಪ್ ಮಾಡಿದೆ.
ಮನೆಯಲ್ಲಿರುವಾಗಲೇ ಒಳ ನುಗ್ಗಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ರುತಿಕಾಳನ್ನು ಅಪಹರಿಸಿದ್ದಾರೆ. ಶಿರಸಿಯ ಬಸವೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಮಹಿಳೆಯ ತಾಯಿಯೇ ಸುಪಾರಿ ನೀಡಿ ಮಗಳ ಕಿಡ್ನಾಪ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ವರ್ಷಾಚರಣೆ ನಿಯಮ ಕಟ್ಟುನಿಟ್ಟು: ಪೊಲೀಸರಿಗೆ ಹೆಚ್ಚು ಹೊಣೆಗಾರಿಕೆ; ಶೀಘ್ರ ಮಾರ್ಗಸೂಚಿ ಪ್ರಕಟ
ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಅಪಹರಣ ನಡೆದಿದೆ ಎನ್ನಲಾಗಿದೆ. ರುತಿಕಾ, ಮಣಿಕಂಠ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದು ಪಾಲಕರಿಗೆ ಇಷ್ಟವಿರಲಿಲ್ಲ. ಹೀಗಾಗಿ ಪಾಲಕರೇ ಕಿಡ್ನ್ಯಾಪ್ ಮಾಡಿಸಿರುವ ಆರೋಪ ಕೇಳಿಬಂದಿದ್ದು, ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಮಹಿಳಾ ಸಚಿವೆಯ ಆನ್ಲೈನ್ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!
ಇಂಥಾ ಕಳ್ಳನನ್ನು ನೀವು ನೋಡಿರುವುದಕ್ಕೆ ಸಾಧ್ಯನೇ ಇಲ್ಲ: ಈತನ ಕತೆ ಕೇಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!