More

    ‘ಕಮಾನ್ ಕಮಾನ್..’ ಎಂದು ಉಪೇಂದ್ರಗೆ ನೆನಪಿನ ಬಾಣ ಬಿಟ್ಟ ‘ಕಾಮಣ್ಣ’! ; ಅನಂತನ ಅವಾಂತರ ಮತ್ತು ಆ ಅವತಾರ…

    ಬೆಂಗಳೂರು: ನಟ-ನಿರ್ದೇಶಕ ರಿಯಲ್​ ಸ್ಟಾರ್ ಉಪೇಂದ್ರಗೆ ‘ಕಮಾನ್​ ಕಮಾನ್’ ಎಂದು ‘ಕಾಮಣ್ಣ’ ನೆನಪಿನ ಬಾಣ ಬಿಟ್ಟಿದ್ದಾನೆ. ಅರ್ಥಾತ್​, ಅವರು ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದ ‘ಅನಂತನ ಅವಾಂತರ’ ಸಿನಿಮಾದ ಹಾಡಿನ ದೃಶ್ಯದ ‘ಕಾಮಣ್ಣ’ ಇದೀಗ ಅವರಿಗೆ ನೆನಪಾಗಿದ್ದಾನೆ.

    ಕಾಶಿನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಅನಂತನ ಅವಾಂತರ’ ಸಿನಿಮಾ 1989ರಂದು ಇದೇ ದಿನ ಅಂದರೆ ಜನವರಿ 5ರಂದು ತೆರೆಕಂಡಿತ್ತು. ಕಾಶಿನಾಥ್​ ನಿರ್ದೇಶನದ ಜತೆಗೆ ಅಭಿನಯವನ್ನೂ ಮಾಡಿರುವ ಈ ಚಿತ್ರದಲ್ಲಿ ಅಂಜಲಿ, ಅರವಿಂದ್, ದಿನೇಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು.

    ಇದನ್ನೂ ಓದಿ: ಯಾವುದೇ ಪದವಿ ಕೊಡಲಿಲ್ಲ, ಹಣವನ್ನೂ ನೀಡಲಿಲ್ಲ; ಆದರೂ ಮಾಡುತ್ತಿದ್ದಾರೆ ಸ್ವಯಂಪ್ರಚಾರ: ಬೆಂಬಲಿಸಿದವರಿಗೆ ಉಪೇಂದ್ರ ಮೆಚ್ಚುಗೆ

    ಈ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜಿಸುವ ಜತೆಗೆ ಸಾಹಿತ್ಯವನ್ನೂ ರಚಿಸಿದ್ದರು. ಅವರೊಂದಿಗೆ ವಿ.ಮನೋಹರ್ ಹಾಗೂ ಉಪೇಂದ್ರ ಕೂಡ ಸಾಹಿತ್ಯ ಬರೆದಿದ್ದರು. ಆ ಪೈಕಿ ‘ಕಮಾನ್​ ಕಮಾನ್ ಕಾಮಣ್ಣ..’ ಗೀತೆಯ ಸಾಹಿತ್ಯ ಉಪೇಂದ್ರ ಅವರದ್ದು.

    ಇದನ್ನೂ ಓದಿ: ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗ?; ಕೊನೆಗೂ ಯಾವಾಗ ಅಂತ ಹೇಳಿ ತಲೆಗೆ ಹುಳ ಬಿಟ್ಟ ರಿಯಲ್​ ಸ್ಟಾರ್​!

    ಈ ಹಾಡಿನ ದೃಶ್ಯದಲ್ಲಿ ಕಾಮಣ್ಣ ಅಂದರೆ ಮನ್ಮಥನಾಗಿ ಯಾರು ಅಭಿನಯಿಸುವುದು ಎಂಬ ಯೋಚನೆಯಲ್ಲಿದ್ದಾಗ ಕಾಶಿನಾಥ್​ ಅವರು, ಹಾಡಿನ ಸಾಹಿತ್ಯ ಬರೆದಿದ್ದ ಉಪ್ಪಿಗೇ ಕಾಮಣ್ಣನಾಗುವಂತೆ ಸೂಚಿಸಿದ್ದರು. ಹೀಗಾಗಿ ಆ ಚಿತ್ರದಲ್ಲಿ ಆಧುನಿಕ ಮನ್ಮಥನಾಗಿ ಉಪೇಂದ್ರ ಕಾಣಿಸಿಕೊಂಡಿದ್ದರು.

    ಇದನ್ನೂ ಓದಿ: ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರ

    ಹೀಗೆ 33 ವರ್ಷಗಳ ಹಿಂದೆ ತಾವು ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದ ನೆನಪನ್ನು ಸ್ವತಃ ಉಪೇಂದ್ರ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕಾಮಣ್ಣನಾಗಿ ಕಾಣಿಸಿಕೊಂಡ ಫೋಟೋ ಜತೆ, ತಮ್ಮ ಗುರು ಕಾಶಿನಾಥ್ ಅವರರೊಂದಿಗೆ ಇರುವ ಫೋಟೋ ಕೂಡ ಪೋಸ್ಟ್ ಮಾಡಿಕೊಳ್ಳುವ ಮೂಲಕ ಅಂದಿನ ಅನಂತನ ಅವಾಂತರದಲ್ಲಿನ ತಮ್ಮ ಮನ್ಮಥನ ಅವತಾರವನ್ನು ಉಪ್ಪಿ ಸ್ಮರಿಸಿಕೊಂಡಿದ್ದಾರೆ.

    ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

    ‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts