ದಾವಣಗೆರೆ : ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪಣ ತೊಟ್ಟಿದೆ, ದೇಶದ ಪ್ರಗತಿ ನಮ್ಮ ಪಕ್ಷದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಭಾರತ್ ಕಾಲನಿಯ ಜಗಳೂರು ಮಾಲಿಂಗಪ್ಪ ಮಿಲ್ ಆವರಣದಲ್ಲಿ ಬುಧವಾರ ಮತಯಾಚನೆ ಮಾಡಿ ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.
ಸರ್ಕಾರ ಬಡವರ ಪರವಾಗಿದೆ ಎಂಬುದಕ್ಕೆ ಗ್ಯಾರಂಟಿ ಯೋಜನೆಗಳೆ ಸಾಕ್ಷಿ. ಗೃಹಲಕ್ಷ್ಮೀ ಯೋಜನೆಯಿಂದ ಬಡ ಕುಟುಂಬಗಳಿಗೆ ಹಣ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದರು.
ಇಲ್ಲಿನ ಮುಖಂಡರು ವೈಮನಸ್ಸುಗಳಿದ್ದರೆ ಅವುಗಳನ್ನು ದೂರವಿಟ್ಟು ಜಿಲ್ಲೆಯ ಅಭಿವೃದ್ಧಿಗಾಗಿ ಪಣ ತೊಡಬೇಕು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಿ ಹೆಚ್ಚು ಅನುದಾನ ತರಲು ಸಹಕರಿಸಿ ಎಂದು ತಿಳಿಸಿದರು.
ಹರಪನಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ, ಡಿ.ಬಸವರಾಜ್, ಕೆ.ಜಿ. ಚಿದಾನಂದ, ಮಹಾನಗರ ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್, ಹರಿಹರದ ವಾಗೀಶ್ ಸ್ವಾಮಿ, ಕಿರುವಾಡಿ ಸೋಮಣ್ಣ, ಕೆ.ಚಮನ್ ಸಾಬ್ ಇದ್ದರು.