More

    ಅಕ್ಟೋಬರ್ 27ರಿಂದ ‘ಪುಳಿಮುಂಚಿ’ ಸವಿಯೋಣ

    ಮಂಗಳೂರು: ಎಚ್‌ಪಿಆರ್ ಫಿಲಂಸ್ ತ್ರಿಜಯ್ ಪ್ರೊಡಕ್ಷನ್ ಲಾಂಛನದಲ್ಲಿ ತ್ರಿಶೂಲ್ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣವಾದ ‘ಪುಳಿಮುಂಚಿ’ ತುಳು ಸಿನಿಮಾ ಅಕ್ಟೋಬರ್ 27ರಂದು ತೆರೆಕಾಣಲಿದೆ.

    ಹರಿಪ್ರಸಾದ್ ರೈ ಚಿತ್ರದ ನಿರ್ಮಾಪಕರಾಗಿದ್ದು, ತ್ರಿಜಯ್ ಪ್ರೊಡಕ್ಷನ್ಸ್, ದೇವಿಪ್ರಸಾದ್ ಜಿ.ಎಸ್., ತನ್ಯ ಕ್ರಿಯೇಶನ್ಸ್ ಸಹನಿರ್ಮಾಪಕರು. ವಿನೀತ್‌ಕುಮಾರ್, ಸಮತಾ ಅಮೀನ್, ರಾಹುಲ್ ಅಮೀನ್, ಆರಾಧ್ಯಾ ಶೆಟ್ಟಿ, ಸ್ವರಾಜ್ ಶೆಟ್ಟಿ, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉಮೇಶ್ ಮಿಜಾರ್, ಅದ್ವಿಕಾ ಶೆಟ್ಟಿ ಸಹಿತ 25ಕ್ಕೂ ಅಧಿಕ ಮಂದಿ ತಾರಾಗಣದಲ್ಲಿದ್ದಾರೆ ಎಂದು ನಿರ್ದೇಶಕ ತ್ರಿಶೂಲ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಾಜೇಶ್ ಬಂದ್ಯೋಡ್, ಹರೀಶ್ ನಾಯ್ಕ ಸಿ.ಬಜ್ಪೆ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ, ಮಯೂರ್ ಆರ್.ಶೆಟ್ಟಿ ಛಾಯಾಗ್ರಹಣ ನಡೆಸಿ ಸಾಹಿತ್ಯ ಒದಗಿಸಿದ್ದಾರೆ. ಕುಟುಂಬ ಒಟ್ಟಾಗಿ ಕುಳಿತು ನೋಡುವ ಸಿನಿಮಾ ನಿರ್ಮಿಸಿದ್ದೇವೆ. ಹಾಸ್ಯದ ಜತೆ ಕಥೆ, ರಸಭಾವ, ಫೈಟಿಂಗ್ ಇದೆ. ಥಿಯೇಟರ್ ಸಮಸ್ಯೆಯಿಂದ ಚಿತ್ರದ ಬಿಡುಗಡೆ ಮುಂದೂಡಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕವನ್ನು ತಿಂಗಳ ಮುಂಚಿತವಾಗಿ ಘೋಷಿಸಲಾಗಿದೆ ಎಂದರು.

    ಚಿತ್ರತಂಡದ ವಿನೀತ್‌ಕುಮಾರ್, ರಾಹುಲ್ ಅಮೀನ್, ಸಮತಾ ಶೆಟ್ಟಿ, ಸ್ವರಾಜ್ ಶೆಟ್ಟಿ, ಅದ್ವಿಕಾ ಶೆಟ್ಟಿ, ಕಿಶೋರ್‌ಕುಮಾರ್ ಶೆಟ್ಟಿ, ಮಯೂರ್ ಶೆಟ್ಟಿ, ರಾಜೇಶ್ ಬಂದ್ಯೋಡು, ಹರೀಶ್ ನಾಯ್ಕ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.

    ವರ್ಣರಂಜಿತ ಟೀಸರ್

    ‘ಪುಳಿಮುಂಚಿ’ ಚಿತ್ರದ ವರ್ಣರಂಜಿತ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸುದ್ದಿಗೋಷ್ಠಿಗೆ ಮೊದಲು ನಗರದ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಜರುಗಿತು. ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಚಿತ್ರದ ಟೀಸರ್ ಹಾಗೂ ಪೋಸ್ಟರ್ ಅತ್ಯುತ್ತಮವಾಗಿ ಮೂಡಿಬಂದಿದ್ದು, ಚಿತ್ರ ಯಶಸ್ಸು ಗಳಿಸುವುದರಲ್ಲಿ ಸಂದೇಹವಿಲ್ಲ. ನಾನೂ ಸಣ್ಣ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ಮುಖಂಡರಾದ ಪಮ್ಮಿ ಕೊಡಿಯಾಲ್‌ಬೈಲ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಪೂರ್ಣಿಮಾ, ಮೇಘನಾಥ ಶೆಟ್ಟಿ, ನಟ ರವಿ ರಾಮಕುಂಜ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts