More

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1125ಕ್ಕೇರಿಕೆ

    ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ 39 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
    ಸೋಂಕಿತರ ಸಂಖ್ಯೆ 1125 ಆಗಿದ್ದು, 774 ಜನ ಚೇತರಿಸಿಕೊಂಡಿದ್ದಾರೆ. 337 ಸಕ್ರಿಯ ಪ್ರಕರಣಗಳಿದ್ದು, 15 ಸಾವಿನ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೇನ್ಮೆಂಟ್ ವಲಯಗಳ ಸಂಖ್ಯೆ 275 ಆಗಿವೆ.

    ಸೋಮವಾರಪೇಟೆಯ ಹೊಸತೋಟದ ಅಂಗನವಾಡಿ ಬಳಿಯ 24 ವರ್ಷದ ಮಹಿಳೆ, ವಿರಾಜಪೇಟೆಯ ವಿಜಯನಗರದ ಚೋಟಾ ಚಾಂಪಿಯನ್ ನರ್ಸರಿ ಶಾಲೆ ಬಳಿಯ 27 ವರ್ಷದ ಪುರುಷ, ಮೂರ್ನಾಡು ಪಂಚರತ್ನ ಹೋಟೆಲ್ ಬಳಿಯ 45 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆ, ವಿರಾಜಪೇಟೆಯ ಪೊನ್ನಂಪೇಟೆಯ ಜೋಡ್ ಪಾತಿ ಬಳಿಯ 31 ವರ್ಷದ ಪುರುಷ, ಅರೆಕಾಡು ಗ್ರಾಮ ಜಯಜೀವ ರಾಮ್ ಕಾಲನಿಯ 20 ವರ್ಷದ ಯುವಕ, ವಿಜಯನಗರ ಸುರೂರ್ ಲಾಡ್ಜ್ ಬಳಿಯ 39 ವರ್ಷದ ಮಹಿಳೆಗೆ ಗುರುವಾರ ಸೋಂಕು ದೃಢಪಟ್ಟಿದೆ.

    ಕುಶಾಲನಗರ ರಾಧಾಕೃಷ್ಣ ಬಡಾವಣೆಯ 22 ಮತ್ತು 50 ವರ್ಷದ ಮಹಿಳೆ, ಅರಪಟ್ಟು ಕಡಂಗಮರೂರು ಮಸೀದಿ ಬಳಿಯ 37 ವರ್ಷದ ಮಹಿಳೆ, ಚೆಯ್ಯಂಡಾಣೆ ಯಡಪಾಲ ಗ್ರಾಮದ ಮಸೀದಿ ಬಳಿಯ 38 ವರ್ಷದ ಮಹಿಳೆ, ಚೆಯ್ಯಂಡಾಣೆ ನೆರಿಯಂದಡ ಗ್ರಾಮದ 33 ವರ್ಷದ ಮಹಿಳೆ, ಕೊಳಕೇರಿ ಗ್ರಾಮದ ಸಮಾಧಿ ಬಳಿಯ 23 ವರ್ಷದ ಮಹಿಳೆ, ವಿರಾಜಪೇಟೆ ವಿ.ಬಾಡಗದ 54 ಮತ್ತು 23 ವರ್ಷದ ಪುರುಷರು, ಕುಶಾಲನಗರ ಮುಳ್ಳುಸೋಗೆ 1ನೇ ಬ್ಲಾಕಿನ 53 ಮತ್ತು 49 ವರ್ಷದ ಪುರುಷರು, ಕುಶಾಲನಗರ ಬಲಮುರಿ ದೇವಾಲಯ ಹಿಂಭಾಗದ 48 ವರ್ಷದ ಮಹಿಳೆ, ರಾಧಾಕೃಷ್ಣ ಬಡಾವಣೆಯ ಬಸವೇಶ್ವರ ಟ್ರೇಡರ್ಸ್ ಬಳಿಯ 33 ವರ್ಷದ ಪುರುಷ, ಬಿ.ಎಂ.ರಸ್ತೆಯ ಬಾಟಾ ಶೋ ರೂಂ ಎದುರಿನ 24 ವರ್ಷದ ಪುರುಷನಿಗೆ ಕರೊನಾ ಪತ್ತೆಯಾಗಿದೆ.

    ವಿರಾಜಪೇಟೆ ಮೈತಾಡಿ ಲೈನ್ ಮನೆಯ 26 ವರ್ಷದ ಯುವಕ, ಸೋಮವಾರಪೇಟೆ ಬಿಳಿಗೇರಿ ಚೆಂಗಪ್ಪಗೌಡ ಲೈನ್ ಮನೆಯ 7 ವರ್ಷದ ಬಾಲಕ, ಹನಾಗಲ್ ಅಂಚೆಯ ಟಿ.ಶೆಟ್ಟಳ್ಳಿಯ 70 ವರ್ಷದ ವೃದ್ಧೆ, ಹಾನಗಲ್ ಬಾಣೆಯ 56 ವರ್ಷದ ಮಹಿಳೆ, ಅರೆಯೂರುವಿನ 16 ವರ್ಷದ ಬಾಲಕ, ತಾಳತ್ರಶೆಟ್ಟಳ್ಳಿಯ 58 ವರ್ಷದ ಪುರುಷ, ಗಂಧದಕೋಟೆ ಗ್ರಾಮದ 54 ವರ್ಷದ ಪುರುಷ ಮತ್ತು 21 ವರ್ಷದ ಯುವತಿ, ಶನಿವಾರಸಂತೆ ಡಿಸಿಸಿ ಬ್ಯಾಂಕ್ ರಸ್ತೆಯ ಸೊಸೈಟಿ ಬಳಿಯ 26 ವರ್ಷದ ಯುವಕ, ಕುಶಾಲನಗರ ವಿಆರ್‌ಎಲ್ ರಸ್ತೆಯ ಬಾಪೂಜಿ ಬಡಾವಣೆಯ 37 ವರ್ಷದ ಮಹಿಳೆ, ಕೂಡಿಗೆ ಸೊಸೈಟಿ ಬಳಿಯ 48 ವರ್ಷದ ಮಹಿಳೆ, ಸುಂದರನಗರದ 19 ವರ್ಷದ ಯುವತಿ, ವಿರಾಜಪೇಟೆ ಪೊಲೀಸ್ ವಸತಿ ಗೃಹದ 29 ವರ್ಷದ ಪುರುಷ, ಸೋಮವಾರಪೇಟೆ ಹಾಲೇರಿ ತತ್ತಿಬಾಣೆ ಪೈಸಾರಿಯ 48 ವರ್ಷದ ಪುರುಷನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

    ರ‌್ಯಾಪಿಡ್ ಆಂಟಿಜನ್ 5 ಪ್ರಕರಣ: ರ‌್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೇಲಿನ ಗೌಡ ಸಮಾಜ ಬಳಿಯ 30 ವರ್ಷದ ಮಹಿಳೆ, ಕಾಲೇಜು ರಸ್ತೆಯ 61 ವರ್ಷದ ವೃದ್ಧ, ನೆಲ್ಲಿಹುದಿಕೇರಿ ರಿವರ್ ಸೈಡಿನ 21 ವರ್ಷದ ಮಹಿಳೆ, ಮಡಿಕೇರಿ ಮೇಲಿನ ಗೌಡ ಸಮಾಜದ ರಾಘವೇಂದ್ರ ದೇವಾಲಯ ರಸ್ತೆಯ 27 ವರ್ಷದ ಯುವಕ, ಹಾಸನ ಜಿಲ್ಲೆಯ 23 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.

    ಕೋವಿಡ್‌ಗೆ ಇಬ್ಬರು ವೃದ್ಧರು ಸಾವು: ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮದ 65 ವರ್ಷದ ವೃದ್ಧ ಹಾಗೂ ಕುಶಾಲನಗರ ಹೋಬಳಿಯ ಗುಮ್ಮನಕೊಲ್ಲಿಯ ಚೌಡೇಶ್ವರಿ ಬಡಾವಣೆಯ 62 ವರ್ಷದ ವೃದ್ಧೆ ಕೋವಿಡ್‌ನಿಂದ ಗುರುವಾರ ಮೃತಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 16ಕ್ಕೇರಿದೆ.

    ಸೋಂಕಿತ ವೃದ್ಧ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆ.5ರಂದು ಜ್ವರ ಕಾಣಿಸಿಕೊಂಡಿದ್ದು, ಆ.7ರಂದು ಗೋಣಿಕೊಪ್ಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು, ಮೂಗು ದ್ರವ ಮಾದರಿ ತೆಗೆದು ಪರೀಕ್ಷೆ ನಡೆಸಲಾಗಿತ್ತು. ನಂತರ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.
    ತಕ್ಷಣ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.19ರಂದು ಇವರಿಗೆ ಡಯಾಲಿಸಿಸ್ ಮಾಡುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

    ವೃದ್ಧೆ: ಗುಮ್ಮನಕೊಲ್ಲಿಯ ಚೌಡೇಶ್ವರಿ ಬಡಾವಣೆಯ ವೃದ್ಧೆ ಕ್ಯಾನ್ಸರ್ ಮತ್ತು ಮಧುಮೇಹದಿಂದ ಬಳಲುತ್ತಿದ್ದರು.
    ಆ.18ರಂದು ಜ್ವರ ಕಾಣಿಸಿಕೊಂಡಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಸೋಂಕು ತಗುಲಿರುವುದು ದೃಢವಾಗಿದೆ. ಆದರೆ, ಗುರುವಾರ ಮೃತಪಟ್ಟಿದ್ದಾರೆ. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts