More

    ಟ್ರ್ಯಾಕ್ಟರ್​ ಅಪಘಾತಕ್ಕೆ ಮೂರು ಬೈಕ್ ಜಖಂ; ಮಳೆಯೇ ಕಾಪಾಡಿತು, ಇಲ್ಲದಿದ್ದರೆ ಭಾರಿ ಅನಾಹುತ…

    ಬಾಗಲಕೋಟೆ: ಟ್ರ್ಯಾಕ್ಟರ್​ನಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೂರು ಬೈಕ್​ಗಳು ಜಖಂಗೊಂಡಿದ್ದು, ಭಾರಿ ಅವಘಡವೊಂದು ತಪ್ಪಿಹೋಗಿದೆ. ಅದರಲ್ಲೂ ಯಾವುದೇ ಸಾವು-ನೋವು ಸಂಭವಿಸದಂತೆ ಮಳೆಯೇ ಕಾಪಾಡಿದೆ.

    ಬಾಗಲಕೋಟೆ ಜಿಲ್ಲೆಯ‌ ಮುಧೋಳದ ರನ್ನ ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಒಳಗಾಗಿದ್ದು ಮುಗಳಖೋಡದಿಂದ ಐಸಿಪಿಎಲ್ ಶುಗರ್ ಫ್ಯಾಕ್ಟರಿಗೆ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್. ಅದರ ಚಕ್ರದ ಬೇರಿಂಗ್​ ಕಟ್​ ಆಗಿದ್ದೇ ಅಪಘಾತಕ್ಕೆ ಕಾರಣ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ; ಪಕ್ಕದ ರಸ್ತೆಗೆ ಹಾರಿ ಇನ್ನೊಂದು ಕಾರಿನ ಮೇಲೆ ಬಿದ್ದ ಕಾರು, ಮೂವರು ಸ್ಥಳದಲ್ಲೇ ಸಾವು

    ಗಾಲಿಯ ಬೇರಿಂಗ್ ಕಟ್​ ಆಗಿದ್ದರಿಂದ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿಯಾಗಿದೆ. ಪರಿಣಾಮವಾಗಿ ರಸ್ತೆ ಬದಿ ನಿಲ್ಲಿಸಿದ್ದ ಮೂರು ಬೈಕ್​ಗಳು ಅದರ ಅಡಿಗೆ ಸಿಲುಕಿ ಜಖಂಗೊಂಡಿವೆ. ಮಳೆ ಬರುತ್ತಿದ್ದ ಕಾರಣ ವಾಹನ ಸವಾರರು ದ್ವಿಚಕ್ರವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹತ್ತಿರದ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದಿದ್ದರು. ಹೀಗಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

    ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜ್ಯ ರಾಜಕಾರಣಕ್ಕೆ; ವಿಧಾನ ಪರಿಷತ್ ಅಭ್ಯರ್ಥಿಯಾಗಿ ಮೊಮ್ಮಗ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts