ಲಖನೌ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ಯಾಚಾರಕ್ಕೀಡಾಗಿ ಮೃತಪಟ್ಟ ದಲಿತ ಯುವತಿಯ ಮನೆಗೆ ಭೇಟಿಕೊಡಲೆಂದು ನಿನ್ನೆ ಹೋಗಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದ್ದರು…ಗುಂಪು ಚದುರಿಸಲು ಲಾಠಿ ಚಾರ್ಜ್ ಕೂಡ ನಡೆಸಿದ್ದರು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ರಾಹುಲ್ ಗಾಂಧಿ ಪೊದೆಯೊಂದಕ್ಕೆ ಬಿದ್ದಿದ್ದರು.
ಇಂದು ತೃಣಮೂಲಕ ಕಾಂಗ್ರೆಸ್ ಸಂಸದರಾದ ಡೆರೆಕ್-ಒ-ಬ್ರಿಯೆನ್, ಪ್ರತಿಮಾ ಮಂಡಲ್ ಅವರನ್ನೊಳಗೊಂಡ ನಿಯೋಗವೊಂದು ಇಂದು ಹತ್ರಾಸ್ಗೆ ತೆರಳಿ, ಮೃತಳ ಕುಟುಂಬಸ್ಥರನ್ನು ಭೇಟಿಯಾಗಲು ಮುಂದಾಗಿತ್ತು. ಅವರೂ ಕೂಡ ಗಡಿಯಲ್ಲೇ ಉತ್ತರ ಪ್ರದೇಶ ಪೊಲೀಸರಿಂದ ತಡೆಯಲ್ಪಟ್ಟಿದ್ದಾರೆ. ಇಂದು ಕೂಡ ಅಲ್ಲಿ ಗಲಾಟೆಯಾಗಿದ್ದು, ಡೆರೆಕ್-ಒ-ಬ್ರಿಯೆನ್ ಅವರನ್ನು ನೆಲಕ್ಕೆ ತಳ್ಳಲಾಗಿದ್ದು, ಇಬ್ಬರು ಮಹಿಳಾ ಕಾರ್ಯಕರ್ತೆಯರ ಮೇಲೆ ಕೂಡ ಹಿಡಿದು ಎಳೆದಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಇದನ್ನೂ ಓದಿ: ‘ಅನುಶ್ರೀ ಅರೆಸ್ಟ್ ಆಗದಂತೆ ತಡೆದಿರೋದು ಶುಗರ್ ಡ್ಯಾಡಿ!’
ಟಿಎಂಸಿ ನಾಯಕಿ ಮಮತಾ ಠಾಕೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಮನೆಗೆ ಭೇಟಿ ಕೊಡಲೆಂದು ನಾವು ಹೋಗಿದ್ದೆವು. ಆದರೆ ನಮಗೆ ಅವಕಾಶ ಸಿಗಲಿಲ್ಲ. ನಾವು ಪ್ರತಿಭಟಿಸಿದಾಗ ಮಹಿಳಾ ಪೊಲೀಸರು ನಮ್ಮನ್ನು ಹಿಡಿದು ಎಳೆದಾಡಿದರು. ನಮ್ಮ ರವಿಕೆ (ಬ್ಲೌಸ್)ಯನ್ನೆಲ್ಲ ಎಳೆದು, ಅನುಚಿತವಾಗಿ ಸ್ಪರ್ಶಿಸಿದರು. ನಮ್ಮ ಸಂಸದೆ ಪ್ರತಿಮಾ ಮಂಡಲ್ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಆಗ ಕೆಳಗೆ ಬಿದ್ದ ಅವರನ್ನು ಪುರುಷ ಪೊಲೀಸ್ ಅಧಿಕಾರಿಗಳೂ ಹಿಡಿದುಕೊಂಡರು..ಇದೆಲ್ಲ ನಾಚಿಕೆಗೇಡು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದ ರಾಬಿನ್ ಉತ್ತಪ್ಪ!
ನಾವು ಯಾವುದೇ ಗಲಾಟೆ ಮಾಡಿರಲಿಲ್ಲ. ಗುಂಪಾಗಿ ಪ್ರತಿಭಟನೆಯನ್ನೂ ಮೊದಲು ಮಾಡಲಿಲ್ಲ. ಶಾಂತಿಯುತವಾಗಿಯೇ ಅವರ ಮನೆಗೆ ಹೋಗುತ್ತಿದ್ದೆವು. ಆದರೂ ನಮ್ಮನ್ನು ತಡೆಯಲಾಗಿದೆ ಎಂದು ಟಿಎಂಸಿ ಮುಖಂಡರು ಹೇಳಿದ್ದಾರೆ. (ಏಜೆನ್ಸೀಸ್)
ಸೋಂಕು ತಗುಲಿದ್ರೆ ಮಮತಾರನ್ನು ತಬ್ಬಿಕೊಳ್ಳುತ್ತಿದ್ದೆ ಎಂದ ಸಂಸದನಿಗೆ ಕರೊನಾ ಪಾಸಿಟಿವ್!