More

    ಏನಿಲ್ಲ ಏನಿಲ್ಲ..ನಮ್ಮ ನಡುವೆ ಮುನಿಸಿಲ್ಲ..; ಹರಿದಾಡಿದ ವದಂತಿಗೆ ತೆರೆ

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥೈವಾಡಿ’ ಚಿತ್ರದ ಐಟಂ ಡಾನ್ಸ್​ನಲ್ಲಿ ದೀಪಿಕಾ ಪಡುಕೋಣೆ ನಟಿಸಲೊಲ್ಲೆ ಎಂದಿದ್ದರಂತೆ.. ಅದಾದ ಬಳಿಕ ಬನ್ಸಾಲಿ ನಿರ್ದೇಶಿಸಲಿರುವ ಇನ್ನೊಂದು ವೆಬ್ ಸೀರೀಸ್ ‘ಹೀರಾ ಮಂಡಿ’ಯಲ್ಲಿ ವಿಶೇಷ ಪಾತ್ರವೊಂದಕ್ಕೆ ದೀಪಿಕಾರನ್ನು ಮನವೊಲಿಸಲಾಗಿತ್ತಂತೆ. ಅದಕ್ಕೂ ದೀಪಿಕಾ ಕ್ಯಾರೆ ಎಂದಿರಲಿಲ್ಲವಂತೆ! ಹಾಗಾದರೆ, ದೀಪಿಕಾ ಮತ್ತು ಬನ್ಸಾಲಿ ನಡುವೆ ಯಾವುದೂ ಸರಿ ಇಲ್ವಾ? ಇಬ್ಬರ ನಡುವೆ ಮುನಿಸು ಮನೆ ಮಾಡಿದೆಯೇ?

    ಹೌದು, ಹೀಗೆ ಹಲವು ಕೋನಗಳಲ್ಲಿ ಬಾಲಿವುಡ್​ನಲ್ಲಿ ಈ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ, ಯಾವುದಕ್ಕೂ ರ್ತಾಕ ಅಂತ್ಯ ಮಾತ್ರ ಸಿಕ್ಕಿರಲಿಲ್ಲ. ಇದೀಗ ಕೆಲ ಮೂಲಗಳ ಮಾಹಿತಿ ಪ್ರಕಾರ ಇಬ್ಬರ ನಡುವೆ ಯಾವುದೇ ವೈಮನಸ್ಸಿಲ್ಲ, ಇಬ್ಬರೂ ಚೆನ್ನಾಗಿಯೇ ಇದ್ದಾರೆ ಎಂಬುದು ಬಹಿರಂಗವಾಗಿದೆ.

    ಆಲಿಯಾ ಭಟ್ ಜತೆಗೆ ‘ಗಂಗೂಭಾಯಿ ಕಥೈವಾಡಿ’ ಚಿತ್ರದಲ್ಲಿ ಬನ್ಸಾಲಿ ಬಿಜಿಯಾಗಿದ್ದಾರೆ. ಅದರ ಜತೆಗೆ ‘ಹೀರಾ ಮಂಡಿ’ ಶೀರ್ಷಿಕೆಯ ವೆಬ್​ಸಿರೀಸ್ ಸಹ ಅವರು ಕೈಗೆತ್ತಿಕೊಂಡಿದ್ದಾರೆ. ಈ ನಡುವೆ ಈ ಎರಡು ಪ್ರಾಜೆಕ್ಟ್​ಗಳ ಪೈಕಿ ಒಂದರಲ್ಲಿ ಐಟಂ ಡಾನ್ಸ್ ಮತ್ತೊಂದರಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ನಿರ್ದೇಶಕ ಬನ್ಸಾಲಿ ದೀಪಿಕಾಗೆ ಆಫರ್ ನೀಡಿದ್ದರಂತೆ. ಆ ಎರಡನ್ನೂ ಸಾರಾಸಗಟಾಗಿ ತಳ್ಳಿಹಾಕಿದ್ದರಂತೆ ದೀಪಿಕಾ. ಹಾಗಾಗಿ ಇಬ್ಬರ ನಡುವೆ ಮೊದಲಿನ ನಂಟು ಉಳಿದಿಲ್ಲ ಎಂಬ ಸುದ್ದಿ ಹರಿದಾಡಿದ್ದವು. ಅದೆಲ್ಲ ಸುಳ್ಳು ಎಂದು ಗೊತ್ತಾಗುತ್ತಿದ್ದಂತೆ ‘ಬೈಜು ಬಾವ್ರಾ’ ಅನ್ನೋ ಚಿತ್ರದಲ್ಲಿ ಈ ನಟಿ ಮತ್ತು ನಿರ್ದೇಶಕ ಜೋಡಿ ಮತ್ತೆ ಒಂದಾಗಲಿದೆ. ಸದ್ಯ ಇಬ್ಬರ ಕೈಯಲ್ಲಿ ಹಲವು ಸಿನಿಮಾಗಳಿರುವುದರಿಂದ, ಅವು ಮುಗಿದ ಬಳಿಕ ಈ ಚಿತ್ರ ಸೆಟ್ಟೇರಲಿದೆ.

    ಬಿಗ್​ಬಾಸ್​ ಬೆಡಗಿ ಚೈತ್ರಾ ಕೊಟ್ಟೂರು ಮದ್ವೆಯಾದ ಮೊದಲ ರಾತ್ರಿಯೇ ಗಲಾಟೆ; ನಂಗೆ ಅವಳು ಬೇಡ ಅಂತ ಗಂಡ, ಅವನೇ ಬೇಕು ಎಂದು ಚೈತ್ರಾ ಪಟ್ಟು!

    ಮದುವೆಗೆ ಹೊರಟಿದ್ದವರ ಮರಣ: ಭೀಕರ ಅಪಘಾತದಲ್ಲಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts