ಬೆಂಗಳೂರು : ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಲಾಕ್ಡೌನ್ ಎಂದು ಘೋಷಿಸಿಲ್ಲ. ಆದರೆ ರಾಜ್ಯದಲ್ಲಿ ಅಘೋಷಿತ ಲಾಕ್ಡೌನ್ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ದಿನದ ದುಡಿಮೆ ನಂಬಿ ಬದುಕುವವರು ಏನು ಮಾಡಬೇಕು ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಜನವಿರೋಧಿ ನೀತಿಯನ್ನು ಇಂದು ರಾಜ್ಯ ಸರ್ಕಾರ ಪಾಲಿಸ್ತಾ ಇದೆ. ಒಂದು ಕಡೆ ಲಾಕ್ಡೌನ್ ಅಂತ ಹೇಳ್ತಾ ಇಲ್ಲ. ಆದರೆ ಇದು ಅಘೋಷಿತ ಲಾಕ್ಡೌನ್ ಎಂದು ಗೋಚರವಾಗ್ತಾ ಇದೆ” ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
'@BJP4Karnataka ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಲಾಕ್ಡೌನ್ ಎಂದು ಘೋಷಿಸಿಲ್ಲ.
ಆದರೆ ರಾಜ್ಯದಲ್ಲಿ ಅಘೋಷಿತ ಲಾಕ್ಡೌನ್ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ದಿನದ ದುಡಿಮೆ ನಂಬಿ ಬದುಕುವವರು ಏನು ಮಾಡಬೇಕು?
ವರ್ತಕರು, ಬೀದಿ ವ್ಯಾಪಾರಿಗಳು, ಸಣ್ಣ ಉದ್ಯಮಿಗಳೊಂದಿಗೆ ಸಭೆ ನಡೆಸಿ ಅವರ ಪರ ನಿಲ್ಲುತ್ತೇವೆ.
– @dineshgrao pic.twitter.com/whBoeMPlkR— Karnataka Congress (@INCKarnataka) April 24, 2021
“ಮದ್ಯದ ಅಂಗಡಿಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದೇನು ಅಗತ್ಯ ವಸ್ತುನಾ ? ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್ ಅಂಗಡಿ, ಮೊಬೈಲ್ ಅಂಗಡಿ ಯಾಕೆ ತೆರೀಬಾರ್ದು ? ರೆಸ್ಟೊರೆಂಟ್ ನಡೆಸಬಹುದು ಅಂತಾರೆ. ಆದರೆ ಪಾರ್ಸಲ್ ಮಾತ್ರ ಕೊಡಬಹುದು ಅಂತಾರೆ. ಬರೀ ಪಾರ್ಸಲ್ ಕೊಟ್ಟು ನಡೆಸೋಕಾಗುತ್ತಾ ?” ಎಂದು ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ವರ್ತಕರು, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯ, ಸಣ್ಣ ಉದ್ಯಮಿಗಳೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ತೆಗೆದುಕೊಂಡು, ಅವರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಏಜೆನ್ಸೀಸ್)
ಎಲ್ಲರನ್ನೂ ಆಕ್ಸಿಜನ್ ಕೇಳುತ್ತಿರುವ ದೆಹಲಿ ಸರ್ಕಾರ ಮಂಜೂರಾದ ಪ್ಲ್ಯಾಂಟ್ಗಳನ್ನು ಇನ್ನೂ ಸ್ಥಾಪಿಸಿಲ್ಲ !
ಭಾರತೀಯರಿಗೇ ಅತ್ಯಂತ ದುಬಾರಿಯಾಗಲಿದೆ… ಈ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ !