ಶಿವಮೊಗ್ಗ: ನಿನ್ನೆ(ಗುರುವಾರ) ರಾತ್ರಿ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್, ಡೈನಾಮಿಕ್ ತುಂಬಿದ್ದ ಲಾರಿ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣ ಸಾವು-ನೋವು ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ಇದುವರೆಗೂ ಛಿದ್ರಛಿಧ್ರಗೊಂಡ 5 ಜನರ ಮೃತದೇಹಗಳು ಸಿಕ್ಕಿದ್ದು, ಕೆಲ ಮೃತದೇಹಗಳ ಗುರುತು ಪತ್ತೆಯಾಗಿದೆ.
ಇದನ್ನೂ ಓದಿ: ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ
![ಶಿವಮೊಗ್ಗದ ಕ್ರಷರ್ನಲ್ಲಾದ ಭೀಕರ ಸ್ಫೋಟಕ್ಕೆ ಬಲಿಯಾದವರು ಜಿಲ್ಲೆಯವರೇ..!](https://cdn.vvimgs.com/wp-content/uploads/2021/01/manju-157x300.jpg)
![ಶಿವಮೊಗ್ಗದ ಕ್ರಷರ್ನಲ್ಲಾದ ಭೀಕರ ಸ್ಫೋಟಕ್ಕೆ ಬಲಿಯಾದವರು ಜಿಲ್ಲೆಯವರೇ..!](https://cdn.vvimgs.com/wp-content/uploads/2021/01/praveeni-188x300.jpg)
ಪತ್ತೆಯಾಗಿರುವ ಐದು ಮೃತದೇಹಗಳಲ್ಲಿ ನಾಲ್ಕು ಮಂದಿ ಶಿವಮೊಗ್ಗದವರಾಗಿದ್ದು ಒರ್ವ ಬಿಹಾರಿ ಮೂಲದವನು ಎನ್ನಲಾಗಿದೆ. ಮೃತ ದೇಹಗಳಲ್ಲಿ ಭಧ್ರಾವತಿ ತಾಲೂಕಿನ ಪ್ರವೀಣ್ ಕುಮಾರ್ (38) ಅಂತರಗಂಗೆ ನಿವಾಸಿ ಮಂಜು(30) ಗುರುತನ್ನು ಪತ್ತೆ ಹಚ್ಚಲಾಗಿದೆ. ಇನ್ನು ಮೂರು ಮಂದಿಯ ಗುರುತನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಮಂಜು ಮತ್ತು ಪ್ರವೀಣ ಕುಮಾರ್ ದೇಹದ ಖಚಿತತೆಗಾಗಿ ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಡಳಿತ ಕಾಯುತ್ತಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)
ಕೇಕ್ನಲ್ಲಿ ಮರ್ಮಾಂಗ! ಸ್ಪೆಷಲ್ ಕೇಕ್ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ