More

    ಸುಲಭವಾಗಿ ಹಣ ಮಾಡಿ ಲಕ್ಷುರಿ ಜೀವನ ನಡೆಸಲು ಕೀಳುಮಟ್ಟಕ್ಕೆ ಇಳಿದಿದ್ದ ಮಹಿಳೆ, ಆಕೆಯ ಸ್ನೇಹಿತನ ಬಂಧನ

    ರಂಗಾರೆಡ್ಡಿ: ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವುದಾಗಿ ತೆಲಂಗಾಣದ ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್ ತಿಳಿಸಿದ್ದಾರೆ. ಬಂಧಿತರನ್ನು ವಿಶಾಖಪಟ್ಟಣದ ಗಂಧಾ ಭವಾನಿ (25) ಮತ್ತು ಆಕೆಯ ಸ್ನೇಹಿತ ಅಣ್ಣಾವರಂನ ಕಾಸಿರೆಡ್ಡಿ ದೊರಬಾಬು (23) ಎಂದು ಗುರುತಿಸಲಾಗಿದೆ.

    ತೆಲಂಗಾಣದ ಮೀರಪೇಟೆಯ ಟಿಕೆಆರ್​ ಕಾಲೇಜು ಬಳಿ ಇರುವ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ಮತ್ತು ಐಷಾರಾಮಿ ಜೀವನ ನಡೆಸುವ ಸಲುವಾಗಿ ಈ ದಂಧೆಗೆ ಇಳಿದಿದ್ದರು.

    ಖಚಿತ ಮಾಹಿತಿ ಮೇರೆಗೆ ಮೀರಪೇಟೆ ಠಾಣಾ ಪೊಲೀಸರು ದಾಳಿ ನಡೆಸಿ, ಭವಾನಿ ಮತ್ತು ಆಕೆಯ ಸ್ನೇಹಿತ ದೊರಬಾಬುವನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರನ್ನು ಸಹ ರಕ್ಷಣ ಮಾಡಲಾಗಿದೆ.

    ಆರೋಪಿಗಳಿಬ್ಬರ ವಿರುದ್ಧ ಪಿಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಮೀರಪೇಟೆ ಪೊಲೀಸರು ಇಬ್ಬರು ಜೈಲಿಗೆ ಕಳುಹಿಸಿದ್ದಾರೆ. (ಏಜೆನ್ಸೀಸ್​)

    ಗ್ರಾ.ಪಂ ಚುನಾವಣೆಯಲ್ಲಿ 1 ಮತದಿಂದ ಸೋತ ಅಭ್ಯರ್ಥಿಗೆ 11 ಲಕ್ಷ ನಗದು, ಕಾರು, ಅರ್ಧ ಎಕರೆ ಜಮೀನು ಕೊಟ್ಟ ಗ್ರಾಮಸ್ಥರು!

    ಕೋಳಿಯ ವಿರುದ್ಧ ದೂರು ದಾಖಲಿಸಿ ಡಾಕ್ಟರ್ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ ನೋಡಿ…​

    ಶಿವಮೊಗ್ಗದಲ್ಲಿ ಸಾವಿನ ಮನೆಯ ಕದ ತಟ್ಟಿದ ಖಾಸಗಿ ಆಸ್ಪತ್ರೆ ವೈದ್ಯ! ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts