More

    ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ತಮಿಳು ನಟಿ ರಾಧಾ ದೂರು: ಗುಟ್ಟು ರಟ್ಟಾಯ್ತು, ನಟಿ ಬಾಳಲ್ಲಿ ಮತ್ತೆ ಬಿರುಗಾಳಿ!

    ಚೆನ್ನೈ: ಸುಂದರ ಟ್ರಾವೆಲ್ಸ್​ ಚಿತ್ರ ಖ್ಯಾತಿಯ ತಮಿಳು ನಟಿ ರಾಧಾ ಅವರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ​

    ದೂರಿನಲ್ಲಿ ಸಬ್​ ಇನ್ಸ್​ಪೆಕ್ಟರ್​ನನ್ನು ತನ್ನ ಗಂಡನೆಂದು ಉಲ್ಲೇಖಿಸಿರುವ ರಾಧಾ, ತನಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ಅನುಮಾನ ಪಡುವುದು ಹಾಗೂ ದಾಂಪತ್ಯ ನಿಷ್ಠೆಯನ್ನು ಪ್ರಶ್ನಿಸುತ್ತಾರೆಂದು ದೂರಿದ್ದಾರೆ.

    ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ತಮಿಳು ನಟಿ ರಾಧಾ ದೂರು: ಗುಟ್ಟು ರಟ್ಟಾಯ್ತು, ನಟಿ ಬಾಳಲ್ಲಿ ಮತ್ತೆ ಬಿರುಗಾಳಿ!ದೂರು ಸ್ವೀಕರಿಸಿರುವ ವಿರುಗಂಬಕ್ಕಂ ಠಾಣಾ ಪೊಲೀಸರು ಈವರೆಗೂ ಎಫ್​ಐಆರ್​ ದಾಖಲಿಸಿಲ್ಲ. ಮೂಲಗಳ ಪ್ರಕಾರ ಸಬ್​ ಇನ್ಸ್​ಪೆಕ್ಟರ್​ ರಾಧಾ ಅವರ ಎರಡನೇ ಗಂಡ ಎಂದು ತಿಳಿದುಬಂದಿದೆ. ರಾಧಾ ಅವರು ಪುರುಷ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರೊಂದಿಗೆ ಓಡಾಡುವುದು ಸಬ್​ ಇನ್ಸ್​ಪೆಕ್ಟರ್​ಗೆ ಇಷ್ಟವಿರಲಿಲ್ಲ ಎಂಬ ಮಾಹಿತಿ ಇದೆ. ಈ ಕಾರಣದಿಂದಲೇ ಆತ ರಾಧಾಗೆ ಮತ್ತು ಅವರ ತಾಯಿಗೆ ಬೆದರಿಕೆ ಹಾಕಲು ಆರಂಭಿಸಿದ ಎಂದು ತಿಳಿದುಬಂದಿದೆ.

    ಅಂದಹಾಗೆ ಸಬ್​ ಇನ್ಸ್​ಪೆಕ್ಟರ್​ ಹೆಸರು ವಸಂತ್​ರಾಜ್​ (40). ಕೆಲವು ತಿಂಗಳ ಹಿಂದೆ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆನ್ನಲಾಗಿದೆ. ಆದರೆ, ವಸಂತ್​ರಾಜ್​ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳು ಸಹ ಇದ್ದರು. ಇದಕ್ಕೂ ಮುನ್ನ ರಾಧಾ ಸಿನಿಮಾ ನಿರ್ದೇಶಕರೊಬ್ಬರನ್ನು ಮದುವೆ ಆಗಿದ್ದರು. ಡಿವೋರ್ಸ್​ ಪಡೆದ ಬಳಿಕ ತನ್ನ ಮಗನೊಂದಿಗೆ ಚೆನ್ನೈನ ಸಾಲಿಗ್ರಾಮ್​ನಲ್ಲಿ ವಾಸವಿದ್ದಳು. ಎರಡನೇ ಮದುವೆ ಬಗ್ಗೆ ಮೊದಲನೇ ಪತ್ನಿಗೆ ತಿಳಿದು ಆಕೆಯು ಸಹ ತಿರುವಣಮಿಯುರ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು.

    ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ತಮಿಳು ನಟಿ ರಾಧಾ ದೂರು: ಗುಟ್ಟು ರಟ್ಟಾಯ್ತು, ನಟಿ ಬಾಳಲ್ಲಿ ಮತ್ತೆ ಬಿರುಗಾಳಿ!ಶೂಟಿಂಗ್​ ವೇಳೆ ಎಸ್​ಐ ವಸಂತ್​ರಾಜ್​ ಪರಿಚಯವಾಗಿತ್ತು. ಬಳಿಕ ಫೋನ್​ ನಂಬರ್​ ಸಹ ವಿನಿಮಯವಾಗಿತ್ತು. ಹೀಗೆ ಆಗಾಗ ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಕೊನೆಗೆ ಇದು ಪ್ರೀತಿಗೆ ತಿರುಗಿತ್ತು. ತಿರುವಣಮಿಯುರ್​ ಪೊಲೀಸ್​ ಠಾಣೆಯಿಂದ ರಾಧಾಗಾಗಿ ವಡಪಳನಿ ಪೊಲೀಸ್​ ಠಾಣೆಗೆ ವಸಂತ್​ರಾಜ್​ ವರ್ಗಾಯಿಸಿಕೊಂಡಿದ್ದ. ಕೆಲವು ಸಮಯಗಳವರೆಗೆ ರಾಧಾ ಮತ್ತು ವಸಂತ್​ರಾಜ್​ ಚೆನ್ನಾಗಿಯೇ ಇದ್ದರು. ಆದರೆ, ಆಕೆ ವರ್ತನೆಯಿಂದಾಗಿ ನಂತರದ ದಿನಗಳಲ್ಲಿ ವಸಂತ್​ರಾಜ್​ ಮತ್ತೆ ವಡಪಳನಿ ಠಾಣೆಯಿಂದ ಎಣ್ಣೂರು ಪೊಲೀಸ್​ ಠಾಣೆ ಮತ್ತೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

    ಹೀಗಿರುವಾಗ ವಿವಾದಾತ್ಮಕ ಸಂಬಂಧದೊಂದಿಗೆ ರಾಧಾ ಮತ್ತೊಮ್ಮೆ ಸುದ್ದಿಯಾದರು. 2013ರ ನವೆಂಬರ್​ನಲ್ಲಿ ಉದ್ಯಮಿ ಫೈಜೂಲ್​ ವಿರುದ್ಧ ಕೇಸು ದಾಖಲಿಸಿದ್ದರು. 6 ವರ್ಷಗಳಿಂದ ಸಂಬಂಧದಲ್ಲಿದ್ದೆವು, ಇದೀಗ ಮದುವೆ ಆಗಲು ನಿರಾಕರಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮದುವೆಗೆ ಒತ್ತಾಯಿಸಿದರೆ ಖಾಸಗಿ ವಿಡಿಯೋ ಸೋರಿಕೆ ಮಾಡುವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದರು. ಇದಾದ ಕೆಲವೇ ವಾರಗಳನ್ನು ತನ್ನ ದೂರನ್ನು ರಾಧಾ ವಾಪಸ್ಸು ಪಡೆದುಕೊಂಡಿದ್ದರು. (ಏಜೆನ್ಸೀಸ್​)

    ಹೊಸ ಐಡಿಯಾ ಕೊಡಿ, ಒಂದು ಲಕ್ಷ ರೂ. ಗೆಲ್ಲಿ!

    VIDEO| ರೈಲು ಇಳಿಯುತ್ತಿದ್ದಂತೆ ನಿಲ್ದಾಣದಿಂದ ಎದ್ನೋ ಬಿದ್ನೋ ಎಂದು ಓಡಿದ ಜನರು: ಕಾರಣ ಕೇಳಿದ್ರೆ ದಂಗಾಗ್ತೀರಾ!

    ಕೆನಡಾಗೆ ಹಾರಲಿದೆ ಅಪಘಾತಕ್ಕೀಡಾಗಿದ್ದ ಬೀದಿನಾಯಿ!; ವಿದೇಶಿ ಮಹಿಳೆಯಿಂದ ಬಳ್ಳಾರಿಯ 2 ವರ್ಷದ ಶ್ವಾನ ದತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts