ಚೆನ್ನೈ: ಸುಂದರ ಟ್ರಾವೆಲ್ಸ್ ಚಿತ್ರ ಖ್ಯಾತಿಯ ತಮಿಳು ನಟಿ ರಾಧಾ ಅವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ದೂರಿನಲ್ಲಿ ಸಬ್ ಇನ್ಸ್ಪೆಕ್ಟರ್ನನ್ನು ತನ್ನ ಗಂಡನೆಂದು ಉಲ್ಲೇಖಿಸಿರುವ ರಾಧಾ, ತನಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ಅನುಮಾನ ಪಡುವುದು ಹಾಗೂ ದಾಂಪತ್ಯ ನಿಷ್ಠೆಯನ್ನು ಪ್ರಶ್ನಿಸುತ್ತಾರೆಂದು ದೂರಿದ್ದಾರೆ.
ದೂರು ಸ್ವೀಕರಿಸಿರುವ ವಿರುಗಂಬಕ್ಕಂ ಠಾಣಾ ಪೊಲೀಸರು ಈವರೆಗೂ ಎಫ್ಐಆರ್ ದಾಖಲಿಸಿಲ್ಲ. ಮೂಲಗಳ ಪ್ರಕಾರ ಸಬ್ ಇನ್ಸ್ಪೆಕ್ಟರ್ ರಾಧಾ ಅವರ ಎರಡನೇ ಗಂಡ ಎಂದು ತಿಳಿದುಬಂದಿದೆ. ರಾಧಾ ಅವರು ಪುರುಷ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರೊಂದಿಗೆ ಓಡಾಡುವುದು ಸಬ್ ಇನ್ಸ್ಪೆಕ್ಟರ್ಗೆ ಇಷ್ಟವಿರಲಿಲ್ಲ ಎಂಬ ಮಾಹಿತಿ ಇದೆ. ಈ ಕಾರಣದಿಂದಲೇ ಆತ ರಾಧಾಗೆ ಮತ್ತು ಅವರ ತಾಯಿಗೆ ಬೆದರಿಕೆ ಹಾಕಲು ಆರಂಭಿಸಿದ ಎಂದು ತಿಳಿದುಬಂದಿದೆ.
ಅಂದಹಾಗೆ ಸಬ್ ಇನ್ಸ್ಪೆಕ್ಟರ್ ಹೆಸರು ವಸಂತ್ರಾಜ್ (40). ಕೆಲವು ತಿಂಗಳ ಹಿಂದೆ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆನ್ನಲಾಗಿದೆ. ಆದರೆ, ವಸಂತ್ರಾಜ್ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳು ಸಹ ಇದ್ದರು. ಇದಕ್ಕೂ ಮುನ್ನ ರಾಧಾ ಸಿನಿಮಾ ನಿರ್ದೇಶಕರೊಬ್ಬರನ್ನು ಮದುವೆ ಆಗಿದ್ದರು. ಡಿವೋರ್ಸ್ ಪಡೆದ ಬಳಿಕ ತನ್ನ ಮಗನೊಂದಿಗೆ ಚೆನ್ನೈನ ಸಾಲಿಗ್ರಾಮ್ನಲ್ಲಿ ವಾಸವಿದ್ದಳು. ಎರಡನೇ ಮದುವೆ ಬಗ್ಗೆ ಮೊದಲನೇ ಪತ್ನಿಗೆ ತಿಳಿದು ಆಕೆಯು ಸಹ ತಿರುವಣಮಿಯುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಶೂಟಿಂಗ್ ವೇಳೆ ಎಸ್ಐ ವಸಂತ್ರಾಜ್ ಪರಿಚಯವಾಗಿತ್ತು. ಬಳಿಕ ಫೋನ್ ನಂಬರ್ ಸಹ ವಿನಿಮಯವಾಗಿತ್ತು. ಹೀಗೆ ಆಗಾಗ ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಕೊನೆಗೆ ಇದು ಪ್ರೀತಿಗೆ ತಿರುಗಿತ್ತು. ತಿರುವಣಮಿಯುರ್ ಪೊಲೀಸ್ ಠಾಣೆಯಿಂದ ರಾಧಾಗಾಗಿ ವಡಪಳನಿ ಪೊಲೀಸ್ ಠಾಣೆಗೆ ವಸಂತ್ರಾಜ್ ವರ್ಗಾಯಿಸಿಕೊಂಡಿದ್ದ. ಕೆಲವು ಸಮಯಗಳವರೆಗೆ ರಾಧಾ ಮತ್ತು ವಸಂತ್ರಾಜ್ ಚೆನ್ನಾಗಿಯೇ ಇದ್ದರು. ಆದರೆ, ಆಕೆ ವರ್ತನೆಯಿಂದಾಗಿ ನಂತರದ ದಿನಗಳಲ್ಲಿ ವಸಂತ್ರಾಜ್ ಮತ್ತೆ ವಡಪಳನಿ ಠಾಣೆಯಿಂದ ಎಣ್ಣೂರು ಪೊಲೀಸ್ ಠಾಣೆ ಮತ್ತೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಹೀಗಿರುವಾಗ ವಿವಾದಾತ್ಮಕ ಸಂಬಂಧದೊಂದಿಗೆ ರಾಧಾ ಮತ್ತೊಮ್ಮೆ ಸುದ್ದಿಯಾದರು. 2013ರ ನವೆಂಬರ್ನಲ್ಲಿ ಉದ್ಯಮಿ ಫೈಜೂಲ್ ವಿರುದ್ಧ ಕೇಸು ದಾಖಲಿಸಿದ್ದರು. 6 ವರ್ಷಗಳಿಂದ ಸಂಬಂಧದಲ್ಲಿದ್ದೆವು, ಇದೀಗ ಮದುವೆ ಆಗಲು ನಿರಾಕರಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮದುವೆಗೆ ಒತ್ತಾಯಿಸಿದರೆ ಖಾಸಗಿ ವಿಡಿಯೋ ಸೋರಿಕೆ ಮಾಡುವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದರು. ಇದಾದ ಕೆಲವೇ ವಾರಗಳನ್ನು ತನ್ನ ದೂರನ್ನು ರಾಧಾ ವಾಪಸ್ಸು ಪಡೆದುಕೊಂಡಿದ್ದರು. (ಏಜೆನ್ಸೀಸ್)
ಹೊಸ ಐಡಿಯಾ ಕೊಡಿ, ಒಂದು ಲಕ್ಷ ರೂ. ಗೆಲ್ಲಿ!
VIDEO| ರೈಲು ಇಳಿಯುತ್ತಿದ್ದಂತೆ ನಿಲ್ದಾಣದಿಂದ ಎದ್ನೋ ಬಿದ್ನೋ ಎಂದು ಓಡಿದ ಜನರು: ಕಾರಣ ಕೇಳಿದ್ರೆ ದಂಗಾಗ್ತೀರಾ!
ಕೆನಡಾಗೆ ಹಾರಲಿದೆ ಅಪಘಾತಕ್ಕೀಡಾಗಿದ್ದ ಬೀದಿನಾಯಿ!; ವಿದೇಶಿ ಮಹಿಳೆಯಿಂದ ಬಳ್ಳಾರಿಯ 2 ವರ್ಷದ ಶ್ವಾನ ದತ್ತು