ಬೀದರ್ : ಜಮೀನಿನ ಮ್ಯುಟೇಷನ್ ಮಾಡಿಕೊಡಲು 15 ಲಕ್ಷ ರೂ.ಗಳ ಲಂಚ ಪಡೆಯುವಾಗ ತಹಸೀಲ್ದಾರ್ ಒಬ್ಬರು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಬಲೆಗೆ ಬಿದ್ದಿರುವ ಪ್ರಸಂಗ ನಡೆದಿದೆ. ಬೀದರ್ನ ತಾಲ್ಲೂಕು ದಂಡಾಧಿಕಾರಿ (ಗ್ರೇಡ್ 1 ತಹಸೀಲ್ದಾರ್) ಆದ ಗಂಗಾದೇವಿ ಎಂಬುವರು ಸಿಕ್ಕಿಬಿದ್ದಿರುವ ಅಧಿಕಾರಿ.
ಗಂಗಾದೇವಿ ಅವರು ನಗರದ ಚಿದ್ರಿ ಸರ್ವೆ ನಂಬರ್ 15 ರ ಭೂಮಿ ಮ್ಯುಟೇಷನ್ ಮಾಡಲು ಲೀಲಾಧರ್ ಪಟೇಲ್ ಎಂಬುವರಿಗೆ 20 ಲಕ್ಷ ರೂ.ಗಳ ಡಿಮ್ಯಾಂಡ್ ಇಟ್ಟಿದ್ದರು. ನಂತರ 15 ಲಕ್ಷ ರೂ.ಗಳಿಗೆ ಒಪ್ಪಿದ್ದು, ಈ ಬಗ್ಗೆ ಲೀಲಾಧರ್ ಎಸಿಬಿಗೆ ದೂರು ನೀಡಿದ್ದರು. ಇಂದು ತಮ್ಮ ಬಾಡಿಗೆ ಮನೆಯಲ್ಲಿ ಲಂಚದ ಹಣ ಪಡೆಯುವಾಗ ಬೀದರ್ನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮೊದಲ ದಿನವೇ ಆಡಳಿತಕ್ಕೆ ಹೊಸ ದಿಕ್ಸೂಚಿ, ಆರ್ಥಿಕ ಶಿಸ್ತಿಗೆ ಮಾರ್ಗಸೂಚಿ ಕೊಟ್ಟ ಬೊಮ್ಮಾಯಿ
ಹಲವು ಭ್ರಷ್ಟಾಚಾರದ ಆರೋಪ ಹೊತ್ತಿದ್ದ ತಹಸೀಲ್ದಾರ್ ಗಂಗಾದೇವಿ ಅವರ ಮನೆಗೆ ಎಸಿಬಿ ಎಸ್ಪಿ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಂಗಾದೇವಿ ಅವರು ಬೆಂಗಳೂರಿನ ಮಾರತಹಳ್ಳಿಯವರು. ಒಂದು ವರ್ಷದಿಂದ ಬೀದರ್ ತಾಲೂಕು ಗ್ರೇಡ್-1 ತಹಸೀಲ್ದಾರ್ (ತಾಲೂಕು ದಂಡಾಧಿಕಾರಿ) ಆಗಿ ಕೆಲಸ ಮಾಡುತ್ತಿದ್ದಾರೆ.
ನೂತನ ಸಿಎಂ ಬೊಮ್ಮಾಯಿಗೆ ಮೋದಿ ಅಭಿನಂದನೆ; ಬಿಎಸ್ವೈ ಬಗ್ಗೆ ಪ್ರಶಂಸೆಯ ಮಾತು
ಕರೊನಾ: ಒಂದೇ ದಿನದಲ್ಲಿ ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇ. 47ರಷ್ಟು ಏರಿಕೆ!